• Latest
ವೈದ್ಯರ ವರ್ಗಾವಣೆ: ನೂರಾರು ಜೀವ ಉಳಿಸಿದ ದೇವರನ್ನು ಇಲ್ಲಿಯೇ ಉಳಿಸಿಕೊಳ್ಳಲಾಗಲಿಲ್ಲ!

ವೈದ್ಯರ ವರ್ಗಾವಣೆ: ನೂರಾರು ಜೀವ ಉಳಿಸಿದ ದೇವರನ್ನು ಇಲ್ಲಿಯೇ ಉಳಿಸಿಕೊಳ್ಳಲಾಗಲಿಲ್ಲ!

4 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Monday, October 20, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ವೈದ್ಯರ ವರ್ಗಾವಣೆ: ನೂರಾರು ಜೀವ ಉಳಿಸಿದ ದೇವರನ್ನು ಇಲ್ಲಿಯೇ ಉಳಿಸಿಕೊಳ್ಳಲಾಗಲಿಲ್ಲ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
ADVERTISEMENT

ಸಾಕಷ್ಟು ಜನ ವಿರೋಧದ ನಡುವೆಯೂ ಉತ್ತರ ಕನ್ನಡ ಜಿಲ್ಲೆಯ ಅನೇಕ ತಾಲೂಕಿನ ವೈದ್ಯರ ವರ್ಗಾವಣೆ ನಡೆದಿದೆ. ಒಲ್ಲದ ಮನಸ್ಸಿನಿಂದಲೇ ವೈದ್ಯರು ಸಹ ಊರು ತೊರೆಯುವ ಸಿದ್ಧತೆ ಮಾಡಿಕೊಂಡಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಸಾಕಷ್ಟು ಜನಮನ್ನಣೆಗಳಿಸಿದ ಕೆಲ ವೈದ್ಯರು ವರ್ಗಾವಣೆಯಿಂದ ಬೇಸತ್ತು ಕೆಲಸಕ್ಕೆ ರಾಜೀನಾಮೆ ಸಲ್ಲಿಸುವ ನಿರ್ಧಾರಕ್ಕೆ ಬಂದಿದ್ದಾರೆ. ರಾಜೀನಾಮೆಗೆ ಧೈರ್ಯ ಸಾಲದ ವೈದ್ಯರಿಗೆ ಸರ್ಕಾರ ಸುಮೋಟೋ ಪ್ರಕರಣ ದಾಖಲಿಸುವುದಾಗಿ ಬೆದರಿಸಿದ್ದು, ಇದರಿಂದ ಅನಿವಾರ್ಯವಾಗಿ ಅವರು ಕ್ಷೇತ್ರ ತೊರೆಯುತ್ತಿದ್ದಾರೆ. ಜನರ ಜೊತೆ ಭಾವನಾತ್ಮಕವಾಗಿ ಬೆರೆತಿದ್ದ ವೈದ್ಯರ ಭೇಟಿಗೆ ನಿತ್ಯ ನೂರಾರು ರೋಗಿಗಳು ಬರುತ್ತಿದ್ದಾರೆ. ವರ್ಗಾವಣೆ ಬೇಸರದಲ್ಲಿರುವ ವೈದ್ಯರಿಗೆ ರೋಗಿಗಳ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಸಾಧ್ಯವಾಗುತ್ತಿಲ್ಲ.

ADVERTISEMENT

ಜಿಲ್ಲೆಯ ಹಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ಹೆಚ್ಚುವರಿ ನಿರೀಕ್ಷೆಯಿಲ್ಲದೇ ಜನ ಸೇವೆ ಮಾಡುತ್ತಿರುವ ಅನೇಕ ವೈದ್ಯರಿದ್ದಾರೆ. ಅಲ್ಲಿ ಕೆಲಸ ಮಾಡುವ ಇತರೆ ಸಿಬ್ಬಂದಿ ಅನುಚಿತವಾಗಿ ವರ್ತಿಸಿದರೂ ರೋಗಿಗಳನ್ನು ಸಮಾಧಾನದಿಂದ ಮಾತನಾಡಿಸಿ ಸಿಬ್ಬಂದಿಯನ್ನು ಸರಿದಾರಿಗೆ ತಂದ ಚಾಣಾಕ್ಷ ವೈದ್ಯರಿದ್ದಾರೆ. ಅನೇಕ ವರ್ಷಗಳಿಂದ ಅವರು ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂಬುದು ಸತ್ಯವೇ ಆಗಿದ್ದರೂ ಅವರು ಅನಗತ್ಯವಾಗಿ ಯಾರಿಗೂ ತೊಂದರೆ ಕೊಟ್ಟವರಲ್ಲ. ಸಣ್ಣಪುಟ್ಟ ಹೊಟ್ಟೆಕಿಚ್ಚಿನ ಮಾತುಗಳನ್ನುಹೊರತುಪಡಿಸಿ ಅಂಥವರ ವಿರುದ್ಧ ಯಾವುದೇ ಗಂಭೀರ ಆರೋಪಗಳಿಲ್ಲ. ಜನರ ಪ್ರೀತಿಗಳಿಸಿದ ವೈದ್ಯರು ಭ್ರಷ್ಟರಾಗಿಲ್ಲ. ಹೀಗಾಗಿ ಅವರಿಂದ ಕಾಸು ಕೊಟ್ಟು ವರ್ಗಾವಣೆ ರದ್ಧು ಮಾಡಿಸಿಕೊಳ್ಳಲು ಸಹ ಸಾಧ್ಯವಾಗಿಲ್ಲ.

ಜನರ ಜೊತೆ ಭಾವನಾತ್ಮಕವಾಗಿ ಬೆರೆತ ವೈದ್ಯರ ವರ್ಗಾವಣೆ ವಿರೋಧಿಸಿ ಜನ ಬೀದಿಗಿಳಿದಿದ್ದಾರೆ. ಅನೇಕ ಕಡೆ ಪ್ರತಿಭಟನೆ ನಡೆದಿದೆ. ಪತ್ರಗಳ ಮೂಲಕ ಜನ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಜನಪ್ರತಿನಿಧಿಗಳು ಸಹ ವೈದ್ಯರನ್ನು ಇಲ್ಲಿಯೇ ಉಳಿಸಿಕೊಳ್ಳಲು ಪಟ್ಟು ಹಿಡಿದಿದ್ದಾರೆ. ರಾಜ್ಯದ 21 ಶಾಸಕರು ವೈದ್ಯರ ವರ್ಗಾವಣೆ ವಿರೋಧಿಸಿದರೂ ಅವರವರ ಕ್ಷೇತ್ರದಲ್ಲಿನ ಎಲ್ಲಾ ವೈದ್ಯರನ್ನು ಉಳಿಸಿಕೊಳ್ಳಲು ಆಗಿಲ್ಲ. ಶಾಸಕರ ಒತ್ತಡದ ಮೇರೆಗೆ ಕೆಲವು ವೈದ್ಯರ ವರ್ಗಾವಣೆಗೆ ಮಾತ್ರ ತಡೆ ಬಿದ್ದಿದ್ದು, ಜನರಿಗೆ ತೀರಾ ಅನುಕೂಲವಾಗಿದ್ದ ವೈದ್ಯರನ್ನು ಕಡ್ಡಾಯವಾಗಿ ಬೇರೆ ಕಡೆ ಕಳುಹಿಸಲಾಗಿದೆ.

ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞರಾಗಿದ್ದ ಡಾ ದೀಪಕ ಭಟ್ಟ ಅವರನ್ನು ಕುಮಟಾಗೆ ವರ್ಗಾಯಿಸಲಾಗಿದೆ. ಅವರ ಪತ್ನಿ ಡಾ ಸೌಮ್ಯಾ ಕೆವಿ ಅವರನ್ನು ಇಲ್ಲಿಯೇ ಉಳಿಸಲಾಗಿದ್ದು, ಸರ್ಕಾರದ ಈ ವರ್ಗಾವಣೆ ನೀತಿ ಗಂಡ – ಹೆಂಡತಿಯರನ್ನು ದೂರ ಮಾಡಿದೆ. ವರ್ಗಾವಣೆ ವಿಷಯ ಕೇಳಿ ಗರ್ಭಿಣಿ-ಬಾಣಂತಿಯರು ಕಣ್ಣೀರು ಸುರಿಸುತ್ತಿದ್ದು, ಅವರನ್ನು ಸಮಾಧಾನ ಮಾಡಲಾಗದ ಸ್ಥಿತಿಯಲ್ಲಿ ವೈದ್ಯರಿದ್ದಾರೆ. ಮುಂಡಗೋಡ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಜನಪ್ರಿಯ ವೈದ್ಯ ಡಾ ಸಂಜೀವ ಗಲಗಲಿ ಅವರನ್ನು ವರ್ಗಾಯಿಸಲಾಗಿದೆ. ಸರಳ ವ್ಯಕ್ತಿತ್ವದ ಡಾ ಸಂಜೀವ ಅವರು ಮುಂಡಗೋಡು ತಾಲೂಕಿನ ಜನರ ನೋವಿಗೆ ಸ್ಪಂದಿಸುತ್ತಿದ್ದು, ಅವರ ವರ್ಗಾವಣೆ ಅನೇಕರಿಗೆ ಬೇಸರ ತರಿಸಿದೆ. ಡಾ ಸಂಜೀವ ಅವರನ್ನು ಯಲ್ಲಾಪುರದ ಉಮ್ಮಚ್ಗಿಗೆ ವರ್ಗಾಯಿಸಿದ ಬಗ್ಗೆ ಮಾಹಿತಿಯಿದೆ.

ಭಟ್ಕಳದಲ್ಲಿ ಹೆಸರು ಮಾಡಿದ್ದ ಡಾ ಲಕ್ಷಿಶ ನಾಯ್ಕ ಅವರನ್ನು ಕುಮಟಾಗೆ ವರ್ಗಾಯಿಸಲಾಗಿದೆ. ಡಾ ಸವಿತಾ ಕಾಮತ್ ಅವರನ್ನು ಬೈಂದೂರಿಗೆ ಕಳುಹಿಸಲಾಗಿದೆ. ಡಾ ಕಮಲಾ ಅವರನ್ನು ಹೊನ್ನಾವರಕ್ಕೆ ವರ್ಗಾಯಿಸಲಾಗಿದೆ. ಹೊನ್ನಾವರದಲ್ಲಿ ಕರ್ತವ್ಯದಲ್ಲಿದ್ದ ಪ್ರಕಾಶ ನಾಯ್ಕ ಅವರನ್ನು ಭಟ್ಕಳಕ್ಕೆ ಕಳುಹಿಸಲಾಗಿದ್ದು, ಬೇರೆ ಹುದ್ದೆಗಳಿಗೆ ವೈದ್ಯರ ವರ್ಗಾವಣೆ ನಡೆದಿಲ್ಲ. ಹೀಗಾಗಿ ಸದ್ಯ ಭಟ್ಕಳ ಆಸ್ಪತ್ರೆಯಲ್ಲಿ ಅನೇಕ ವೈದ್ಯರ ಕೊರತೆ ಎದುರಾಗಿದೆ. ಕುಮಟಾದಲ್ಲಿ ಐದು ವೈದ್ಯರ ವರ್ಗಾವಣೆ ವಿಷಯ ಚರ್ಚೆಯಲ್ಲಿದ್ದು, ಅದರಲ್ಲಿ ಮೂವರ ಹೆಸರು ವರ್ಗಾವಣೆ ಪಟ್ಟಿಯಿಂದ ರದ್ಧಾಗಿದೆ. ಡಾ ಶ್ರೀನಿವಾಸ ನಾಯಕ ಹಾಗೂ ಡಾ ಪಾಂಡುರoಗ ದೇವಾಡಿಗ ಅವರ ವರ್ಗಾವಣೆಗೆ ಜನ ವಿರೋಧವಿದ್ದರೂ ಸರ್ಕಾರ ಪಟ್ಟು ಸಡಿಸಿಲ್ಲ. ಕುಮಟಾದಲ್ಲಿ ಪಾಂಡುರoಗ ಅವರನ್ನು ಅಂಕೋಲಾಗೆ ವರ್ಗಾಯಿಸಿದೆ. ಅಂಕೋಲಾದ ಈಶ್ವರಪ್ಪ ಅವರನ್ನು ಕುಮಟಾಗೆ ಕಳುಹಿಸಲಾಗಿದೆ. ಡಾ ಶ್ರೀನಿವಾಸ ನಾಯ್ಕ ಅವರನ್ನು ಹೊನ್ನಾವರಕ್ಕೆ ವರ್ಗಾಯಿಸಲಾಗಿದೆ.

ಸರಿಯಾಗಿದ್ದ ವ್ಯವಸ್ಥೆಯನ್ನು ಹಾಳುಗೆಡವಿ ವೈದ್ಯರ ವರ್ಗಾವಣೆ ನಡೆದಿದ್ದರಿಂದ ಆರೋಗ್ಯ ಸೇವೆಯಲ್ಲಿ ಅನೇಕ ಅನಾನುಕೂಲತೆಯಾಗುತ್ತಿದೆ. `ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಯೂ ಇಲ್ಲ. ಸರಿಯಾಗಿರುವ ವೈದ್ಯರನ್ನು ಉಳಿಸಿಕೊಳ್ಳಲಾಗಿಲ್ಲ’ ಎಂಬ ಕೊರಗು ಜನರನ್ನು ಕಾಡುತ್ತಿದೆ.

ADVERTISEMENT

Discussion about this post

Previous Post

ಹುಟ್ಟಿದ ದಿನವೇ ಹೊರಟು ಹೋದ ಡಾಕ್ಟರು

Next Post

ಗ್ರಾ ಪಂ ಅವಾಂತರ: ಶಾಲೆ ಪಕ್ಕವೇ ತ್ಯಾಜ್ಯದ ಗುಂಡಿ ನಿರ್ಮಿಸಿದ ಪಿಡಿಓ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋