• Latest
Iyengar Bakery Even rotten cake costs money!

ಅಯ್ಯಂಗಾರ್ ಬೇಕರಿ: ಕೊಳೆತ ಕೇಕ್’ಗೂ ಕಾಸು!

4 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Wednesday, October 22, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಅಯ್ಯಂಗಾರ್ ಬೇಕರಿ: ಕೊಳೆತ ಕೇಕ್’ಗೂ ಕಾಸು!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
Iyengar Bakery Even rotten cake costs money!
ADVERTISEMENT

ಶಿರಸಿ ಸತ್ಕಾರ್ ಹೊಟೇಲ್ ಎದುರಿನ ಅಯ್ಯಂಗಾರ್ ಬೇಕರಿಯಲ್ಲಿ ಕೊಳೆತ ಕೇಕ್‌ಗೂ ಕಾಸುಪಡೆದದಕ್ಕಾಗಿ ಮಾಲಕರು ಗ್ರಾಹಕರಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ. ಕೊನೆಗೆ `ಅಚಾತುರ್ಯದಿಂದ ತಪ್ಪಾಗಿದೆ. ಕ್ಷಮಿಸಿಬಿಡಿ’ ಎಂದು ಬೇಕರಿಯವರು ಅಂಗಲಾಚಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಶಿರಸಿಯ ಸತ್ಕಾರ್ ಹೊಟೇಲಿನ ಬಳಿ ಹಾಸನದ ತಿಲಕ್ ಎಂಬಾತರು ಕಳೆದ ಮೂರು ವರ್ಷದಿಂದ ಅಯ್ಯಂಗಾರ್ ಬೇಕರಿ ನಡೆಸುತ್ತಿದ್ದಾರೆ. ಜುಲೈ 2ರಂದು ಶಿರಸಿಯಲ್ಲಿ ಮೊಬೈಲ್ ಅಂಗಡಿ ನಡೆಸುವ ಪವನ್ ಎಂಬಾತರು ಮಗನ ಹುಟ್ಟುಹಬ್ಬಕ್ಕಾಗಿ ಕೇಕ್ ಪಡೆದಿದ್ದರು. ಸಂಜೆ ಇನ್ನೊಂದು ಕೇಕ್ ಸ್ವೀಕರಿಸಿ ಅದನ್ನು ಮನೆಗೆ ಒಯ್ದಿದ್ದರು.

ADVERTISEMENT

ಮಗನ ಹುಟ್ಟುಹಬ್ಬದ ಆಚರಣೆ ವೇಳೆ ಕೇಕ್ ಹಳಸಿರುವುದು ಗಮನಕ್ಕೆ ಬಂದಿತು. ಬೇಕರಿಯವರು ಬೆಳಗ್ಗೆ ಮಾಡಿದ್ದ ಕೇಕ್’ನ್ನು ಹಾಗೇ ಪ್ಯಾಕ್ ಮಾಡಿ ಪವನ್ ಅವರಿಗೆ ವಿತರಿಸಿದ್ದು, ಇದರಿಂದ ಹುಟ್ಟು ಹಬ್ಬದ ಕಾರ್ಯಕ್ರಮವೇ ಹಾಳಾಯಿತು. ಇದರಿಂದ ಸಿಟ್ಟಾದ ಪವನ್ ಅವರು ನೇರವಾಗಿ ಬೇಕರಿಗೆ ಬಂದರು. ಆ ಕೇಕ್ ಕಾಣಿಸಿ ಕೂಗಾಡಿದರು. ಪ್ರಕರಣವನ್ನು ರಾಜಿಯಲ್ಲಿ ಮುಗಿಸಲು ಬೇಕರಿ ಸಿಬ್ಬಂದಿ ಪರಿತಪಿಸಿದರು. ಆದರೆ, ಸಿಟ್ಟಿನಲ್ಲಿದ್ದ ಪವನ್ ಅವರು ಅದನ್ನು ಒಪ್ಪಲಿಲ್ಲ.

`ತನಗಾದ ರೀತಿ ಬೇರೆ ಯಾರಿಗೂ ಆಗಬಾರದು’ ಎಂದು ಪವನ್ ಅವರು ಅಲ್ಲಿನ ವಿದ್ಯಮಾನಗಳ ಬಗ್ಗೆ ವಿಡಿಯೋ ಮಾಡಿದರು. ಬೇಕರಿಯ ಬೇಜವಬ್ದಾರಿ ಬಗ್ಗೆ ನಗರಸಭೆಯವರಿಗೆ ದೂರುವುದಾಗಿ ಹೇಳಿದರು. `ನಾನು ಊರಿಗೆ ಹೋಗಿ ಶಿರಸಿಗೆ ಮರಳುತ್ತಿದ್ದೇನೆ. ಬೇಕರಿ ಸಿಬ್ಬಂದಿಯ ಅಚಾತುರ್ಯದಿಂದ ತಪ್ಪಾಗಿದೆ. ಇನ್ಮುಂದೆ ಹಾಗೇ ಆಗದಂತೆ ಎಚ್ಚರವಹಿಸುವೆ’ ಎಂದು ಬೇಕರಿ ಮಾಲಕ ತಿಲಕ್ ಅವರು ಇದೀಗ ಫೋನಿನಲ್ಲಿ ತಿಳಿಸಿದರು.

ADVERTISEMENT

Discussion about this post

Previous Post

ಗುತ್ತಿಗೆದಾರರ ಪರ ಅನಂತಮೂರ್ತಿ ಬ್ಯಾಟಿಂಗ್

Next Post

ಆಕೆಯ ಸಾವಿಗೆ ಕಾರಣವೇ ಗೊತ್ತಾಗಲಿಲ್ಲ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋