• Latest
Hill collapse Brave man climbs hill crosses river to write exam!

ಗುಡ್ಡ ಕುಸಿತ: ಬೆಟ್ಟ ಹತ್ತಿ ನದಿ ದಾಟಿ ಪರೀಕ್ಷೆ ಬರೆದ ಧೀರೆ!

4 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Thursday, October 23, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಗುಡ್ಡ ಕುಸಿತ: ಬೆಟ್ಟ ಹತ್ತಿ ನದಿ ದಾಟಿ ಪರೀಕ್ಷೆ ಬರೆದ ಧೀರೆ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
Hill collapse Brave man climbs hill crosses river to write exam!
ADVERTISEMENT

ಕದ್ರಾ- ಕೊಡಸಳ್ಳಿ ಭಾಗದ ರಸ್ತೆ ಮೇಲೆ ಗುಡ್ಡ ಕುಸಿದು ಸಂಚಾರ ಬಂದ್ ಆಗಿರುವುದರಿಂದ ಆ ಭಾಗದ ವಿದ್ಯಾರ್ಥಿನಿಯೊಬ್ಬರು ಬೆಟ್ಟ ಹತ್ತಿ.. ಗುಡ್ಡ ಇಳಿದು ಕಾರವಾರಕ್ಕೆ ಬಂದು ಪರೀಕ್ಷೆ ಬರೆದಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಈ ಭಾಗದಲ್ಲಿ ಗುಡ್ಡ ಕುಸಿದಿದ್ದರಿಂದ ಕೊಡಸಳ್ಳಿ ಭಾಗದ ಬಾಳೆಮನೆ, ಸುಳಗೇರಿ ಭಾಗದ ಸಂಪರ್ಕ ಕಡಿತವಾಗಿದೆ. ಸುಳಗೇರಿಗೆ ತೆರಳಿದ್ದ ಬಸ್ ಸಹ ಗ್ರಾಮದಲ್ಲಿ ಸಿಲುಕಿದೆ. ಕೊಡಸಳ್ಳಿ ಜಲ ವಿದ್ಯುತ್ ಉತ್ಪಾದನಾ ಘಟಕದಲ್ಲಿ 25 ಜನ ಕಾರ್ಯ ನಿರ್ವಹಿಸುತಿದ್ದು ಅವರು ಅಲ್ಲಿಗೆ ತೆರಳಲಾಗುತ್ತಿಲ್ಲ. ಈ ನಡುವೆ ಸುಳಗೇರಿಯ ವಿದ್ಯಾರ್ಥಿನಿ ಸಾನಿಯಾ ಊರಿನಲ್ಲಿ ಸಿಲುಕಿಕೊಂಡಿದ್ದು, ಕಷ್ಟಪಟ್ಟು ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಎದುರಿಸಿದ್ದಾರೆ.

ADVERTISEMENT

ಸಾನಿಯಾ ಅವರು ಉಳಗಾದ ಮಾಹಾಸತಿ ಆರ್ಟ್ಸ & ಸೈನ್ಸ್ ಕಾಲೇಜಿನಲ್ಲಿ BSC ಓದುತ್ತಿದ್ದಾರೆ. ಪರೀಕ್ಷೆಗೆ ಹಾಜರಾಗಲು ಈ ವಿದ್ಯಾರ್ಥಿನಿ ಕಾಲು ನಡಿಗೆಯಲ್ಲಿ 5ಕಿಮೀ ನಡೆದ ಅವರಿಗೆ ಕಾಳಿ ನದಿ ತೀರ ಭಾಗದಿಂದ ನದಿ ದಾಟಿ ಹೋಗಲು ಪ್ರಯತ್ನಿಸಿದರು. ಆಗ, ಅಗ್ನಿಶಾಮಕ ಸಿಬ್ಬಂದಿ ಕೊಡಸಳ್ಳಿ ವಿದ್ಯುತ್ಗಾರದಲ್ಲಿ ಸಿಲುಕಿದ್ದ ಐದು ಜನರನ್ನು ರಕ್ಷಿಸಿದ್ದು, ಮರದ ದಿಮ್ಮಿಗಳ ಮೂಲಕ ಅವರು ಕಾರವಾರದ ಕಡೆ ಬಂದರು. ಸಾನಿಯಾ ಸಹ ಮರದ ದಿಮ್ಮಿ ಬಳಸಿ ಕದ್ರಾಗೆ ಆಗಮಿಸಿದರು. ಅಲ್ಲಿಂದ ಮುಂದೆ ಸಾಗಿ ಪರೀಕ್ಷೆ ಎದುರಿಸಿದರು.

ಸದ್ಯ ಈ ಭಾಗದಲ್ಲಿ ಮತ್ತೆ ಗುಡ್ಡ ಕುಸಿಯುವ ಸಾಧ್ಯತೆ ಇರುವ ಕಾರಣ ಈ ಭಾಗದಲ್ಲಿ ಜನರ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಕೊಡಸಳ್ಳಿ ಮೂಲಕ ಯಲ್ಲಾಪುರ ಭಾಗಕ್ಕೆ ರಸ್ತೆ ಇದ್ದರೂ ವಾಹನಗಳ ಓಡಾಟ ಇಲ್ಲ. ಬಸ್ ಸಹ ಇಲ್ಲ. ಹೀಗಾಗಿ ಜನರಿಗೆ ಕದ್ರಾ ಭಾಗದ ನದಿಯ ದಡ ಅನಿವಾರ್ಯವಾಗಿದೆ.

`ನಾನು ಪ್ರತಿ ದಿನ ಕಾರವಾರದಿಂದ ಸುಳಗೇರಿಗೆ ಬಸ್ಸಿನಲ್ಲಿ ಓಡಾಡುತ್ತೇನೆ. ನನ್ನಂತೆ ಹಲವು ಶಾಲಾ ವಿದ್ಯಾರ್ಥಿಗಳು ಸಹ ಓಡಾಡುತ್ತಾರೆ. ಈಗ ಭೂ ಕುಸಿತವಾದ್ದರಿಂದ ಕಾಲೇಜು, ಶಾಲೆಗಳಿಗೆ ವಿದ್ಯಾರ್ಥಿಗಳಿಗೆ ಹೋಗಲು ದಾರಿಯೇ ಇಲ್ಲ. ಊರಿನಲ್ಲಿ ವಯಸ್ಸಾದವರು, ಅನಾರೋಗ್ಯಪೀಡಿತರು ಸಹ ಇದ್ದಾರೆ, ಅವರಿಗೆಲ್ಲಾ ಸಮಸ್ಯೆ ಆಗಿದೆ’ ಎಂದು ಸಾನಿಯಾ ಹೇಳಿದರು.

ADVERTISEMENT

Discussion about this post

Previous Post

ಟವರ್ ನಿರ್ಮಿಸಿ ಬಾಡಿಗೆ ಕೊಡದ ಮೊಬೈಲ್ ಕಂಪನಿ: ಮೋಸ ಮಾಡಿದವರಿಗೆ ದಂಡದ ಬಿಸಿ!

Next Post

ನಿಮ್ಮ ಭವಿಷ್ಯ – ನಿಮ್ಮ ಕೈಯಲ್ಲಿ: 2025 ಜುಲೈ 6ರ ದಿನ ಭವಿಷ್ಯ

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋