• Latest
Kotewada Officials' apathy in removing unauthorized building - unnecessary hassle for applicant!

ಕೋಟೆವಾಡ: ಅನಧಿಕೃತ ಕಟ್ಟಡ ತೆರವಿಗೆ ಅಧಿಕಾರಿಗಳ ನಿರಾಸಕ್ತಿ-ಅರ್ಜಿದಾರನಿಗೆ ಅನಗತ್ಯ ಅಲೆದಾಟ!

4 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Thursday, October 23, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಕೋಟೆವಾಡ: ಅನಧಿಕೃತ ಕಟ್ಟಡ ತೆರವಿಗೆ ಅಧಿಕಾರಿಗಳ ನಿರಾಸಕ್ತಿ-ಅರ್ಜಿದಾರನಿಗೆ ಅನಗತ್ಯ ಅಲೆದಾಟ!

ಸರ್ಕಾರದ ಬಳಿ ಸುಣ್ಣ ಖರೀದಿಗೂ ಕಾಸಿಲ್ಲ! | ಕೂಲಿ ಆಳುಗಳ ನೇಮಕವೂ ಅರ್ಜಿದಾರರ ಹೊಣೆ! ಎಲ್ಲ ಕೊಟ್ಟರೂ ಕೆಲಸ ಮಾತ್ರ ಆಗಲ್ಲ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
Kotewada Officials' apathy in removing unauthorized building - unnecessary hassle for applicant!
ADVERTISEMENT

ಅಂಕೋಲಾ ಶೇಡಗೇರಿ ಗ್ರಾಮದ ಕೋಟೆವಾಡದಲ್ಲಿ ಅನಧಿಕೃತ ಶೆಡ್ ನಿರ್ಮಾಣವಾಗಿದ್ದು, ಇದನ್ನು ತೆರವುಗೊಳಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ತೆರವು ಕಾರ್ಯಾಚರಣೆಗೆ ಅನುಕೂಲವಾಗುವಂತೆ ಪದೇ ಪದೇ ಪತ್ರ ಸ್ವೀಕಾರವಾದರೂ ಸರ್ವೇಯರ್ ರೋಷನ್ ಕೇಣಿ ಭೂ ಅಳತೆಗೂ ಆಸಕ್ತಿವಹಿಸಿಲ್ಲ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಶೇಡಗೇರಿ ಗ್ರಾಮದ ಮಾರುತಿ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಅನಧಿಕೃತ ಶೆಡ್ ತಲೆಯೆತ್ತಿದೆ. ಈ ಶೆಡ್ ನಿರ್ಮಾಣದಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ಕೋಟೆವಾಡದ ಸಂಜೀವ ನಾಯ್ಕ ಅವರು ಹೋರಾಟ ನಡೆಸುತ್ತಿದ್ದಾರೆ. ತಹಶೀಲ್ದಾರ್ ಕಚೇರಿಯಿಂದ 400ಮೀ ದೂರದಲ್ಲಿ ಅನಧಿಕೃತ ಕಟ್ಟಡವಿದ್ದರೂ ಅದನ್ನು ಸರ್ಕಾರ ಗಮನಿಸಿಲ್ಲ. ಈ ಬಗ್ಗೆ ಪಟ್ಟಣ ಪಂಚಾಯತದಿAದ ಹಿಡಿದು ಜಿಲ್ಲಾಧಿಕಾರಿಗಳವರೆಗೆ ಎಲ್ಲರಿಗೂ ಅವರು ಪತ್ರ ಬರೆದಿದ್ದಾರೆ. ಸರ್ವೇ ಕಾರ್ಯ ನಡೆಸಿ ಅನಧಿಕೃತ ಶೆಡ್ ತೆರವು ಮಾಡುವಂತೆ ಅವರು ಒತ್ತಾಯಿಸುತ್ತೇ ಬಂದಿದ್ದಾರೆ.

ADVERTISEMENT

ಆದರೆ, ಅತಿಕ್ರಮಣ ಕಟ್ಟಡವಿರುವ ಭೂಮಿ ಸರ್ವೇ ಕಾರ್ಯ ಈವರೆಗೂ ನಡೆದಿಲ್ಲ. ಸರ್ವೇ ಅರ್ಜಿ ಸ್ವೀಕರಿಸಿದ ಭೂ ಮಾಪನಾ ಇಲಾಖೆ ಸರ್ವೇಗೆ ಅಗತ್ಯವಿರುವ ಸುಣ್ಣದ ಜೊತೆ ಇಬ್ಬರು ಕೂಲಿ ಆಳುಗಳನ್ನು ಜೊತೆಗೆ ತರುವಂತೆ ಅರ್ಜಿದಾರರಿಗೆ ಅಧಿಕೃತ ಪತ್ರದ ಮೂಲಕ ಸೂಚಿಸಿದ್ದು, ಸುಣ್ಣದ ಜೊತೆ ಕೂಲಿ ಆಳುಗಳನ್ನು ಕರೆದುಕೊಂಡು ಹೋಗಿದ್ದ ಸಂಜೀವ ನಾಯ್ಕ ಸೋತು ಹೋಗಿದ್ದಾರೆ. ಸರ್ಕಾರಿ ಶುಲ್ಕ ಪಾವತಿ ಜೊತೆ ಕೂಲಿ ಆಳುಗಳ ವೆಚ್ಚ ಪಾವತಿ ಮಾಡಿದರೂ ಆ ದಿನ ಸರ್ವೇಯರ್ ರೋಷನ್ ಕೇಣಿ ಭೂ ಮಾಪನ ಕೆಲಸ ಮಾಡಿಲ್ಲ!

ಅನಧಿಕೃತ ಶೆಡ್ ತೆರವು ಮಾಡಿದರೆ ದೇವಾಲಯಕ್ಕೆ ಬರುವ ಭಕ್ತರಿಗೆ ಅನುಕೂಲವಾಗಲಿದೆ. ವಾಹನ ಪಾರ್ಕಿಂಗ್ ವ್ಯವಸ್ಥೆಗೆ ಸೂಕ್ತ ಜಾಗ ಸಿಗಲಿದೆ. ಹೀಗಾಗಿ ಸಂಜೀವ ನಾಯ್ಕ ಅವರು ಈ ಹೋರಾಟ ಕೈಗೆತ್ತಿಕೊಂಡಿದ್ದು, ಇಬ್ಬರು ಸರ್ವೇ ಕಾರ್ಯ ನಡೆಸಿ ಪ್ರಕರಣದ ಬಗ್ಗೆ ವರದಿ ನೀಡಬೇಕಿದ್ದ ಸರ್ವೇಯರ್ ರೋಷನ್ ಕೇಣಿ ಆರಂಬಿಕ ಹಂತದಲ್ಲಿಯೇ ಎಡವಿ ಬಿದ್ದಿದ್ದಾರೆ. ಭೂ ಮಾಪನ ಕಾರ್ಯ ನಡೆಸಬೇಕಿದ್ದ ರೋಷನ್ ಕೇಣಿ ಅವರು ಸ್ಥಳಕ್ಕೆ ಬಂದರೂ ಸರ್ವೇ ಮಾಡದೇ ಹೋಗಿರುವ ಬಗ್ಗೆ ಅನುಮಾನವ್ಯಕ್ತಪಡಿಸಿ ಸಂಜೀವ ನಾಯ್ಕ ಅವರು ಜಿಲ್ಲಾಧಿಕಾರಿಗಳಿಗೆ ಮತ್ತೊಂದು ದೂರು ನೀಡಿದ್ದಾರೆ. ಸರ್ವೇ ಅಧಿಕಾರಿಗಳ ಕÀರ್ತವ್ಯ ಲೋಪದ ಬಗ್ಗೆಯೂ ಅವರು ಆಕ್ಷೇಪಿಸಿದ್ದಾರೆ.

ADVERTISEMENT

Discussion about this post

Previous Post

ನಿಮ್ಮ ಭವಿಷ್ಯ – ನಿಮ್ಮ ಕೈಯಲ್ಲಿ: 2025 ಜುಲೈ 6ರ ದಿನ ಭವಿಷ್ಯ

Next Post

ಭೂ ಕುಸಿತದ ಬಗ್ಗೆ ಸಮಗ್ರ ಅಧ್ಯಯನ: ಅರ್ಪಿತಾ ಅವರ ಸಂಶೋಧನೆಗೆ ಡಾಕ್ಟರೇಟ್ ಗೌರವ

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋