• Latest
ಅಕ್ರಮ-ಅವ್ಯವಹಾರ: ಅವಸಾನದ ಅಂಚಿನಲ್ಲಿ ಸಹಕಾರಿ ಸಂಘಗಳು!

ಅಕ್ರಮ-ಅವ್ಯವಹಾರ: ಅವಸಾನದ ಅಂಚಿನಲ್ಲಿ ಸಹಕಾರಿ ಸಂಘಗಳು!

4 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Thursday, October 23, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಅಕ್ರಮ-ಅವ್ಯವಹಾರ: ಅವಸಾನದ ಅಂಚಿನಲ್ಲಿ ಸಹಕಾರಿ ಸಂಘಗಳು!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
ADVERTISEMENT

ಉತ್ತರ ಕನ್ನಡ ಜಿಲ್ಲೆಗೆ ಸಹಕಾರಿ ಸಂಘಗಳೇ ಜೀವಾಳ. ಆದರೆ, ಈಚೆಗೆ ಅನೇಕ ಸಹಕಾರಿ‌ ಸಂಘಗಳು ದಿವಾಳಿ ಅಂಚಿನಲ್ಲಿದೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಅವ್ಯವಹಾರ, ಅಧಿಕಾರಿ-ಸಿಬ್ಬಂದಿಯ ವೈಯಕ್ತಿಕ ಹಿತಾಸಕ್ತಿ, ಆಡಳಿತ ಮಂಡಳಿಯ ಭ್ರಷ್ಟಾಚಾರ, ಅವೈಜ್ಞಾನಿಕ ನಿರ್ವಹಣೆ, ಅನಧಿಕೃತ ಕಾರ್ಯಚಟುವಟಿಕೆ ಮೊದಲಾದ ಕಾರಣದಿಂದ ಸಹಕಾರಿ ಸಂಘಗಳು ಅವನತಿಯ ಹಾದಿ ಹಿಡಿದಿದೆ. ಸರ್ಕಾರವೇ ನೀಡಿದ ಮಾಹಿತಿ ಪ್ರಕಾರ ಉತ್ತರ ಕನ್ನಡ ಜಿಲ್ಲೆಯ ಒಟ್ಟು 252 ಸಹಕಾರಿ ಸಂಘಗಳು ನಷ್ಟದಲ್ಲಿವೆ!

ADVERTISEMENT

ಸಹಕಾರ ಸಂಘಗಳ ಇಲಾಖೆಯ ಅಡಿ 984 ಸಹಕಾರಿ ಹಣಕಾಸು ಸಂಸ್ಥೆಗಳು ನೋಂದಣಿಯಾಗಿ ಕಾರ್ಯ ನಿರ್ವಹಿಸುತ್ತಿವೆ. 2023-24 ರ ಆಡಿಟ್ ವರದಿಯಂತೆ ಉತ್ತರ ಕನ್ನಡ ಜಿಲ್ಲೆಯ 732 ಸಂಘಗಳು ಲಾಭ ಕಾಣಿಸಿದೆ. ಕೆಲವು ದಾಖಲೆಗಳಲ್ಲಿ ಮಾತ್ರ ಲಾಭ ಕಾಣಿಸಿದ್ದು, ವಾಸ್ತವ ಸ್ಥಿತಿ ಹಾಗಿಲ್ಲ ಎಂಬುದು ಬಹುತೇಕರಿಗೆ ಅರಗಿಸಿಕೊಳ್ಳಲಾಗದ ಸತ್ಯ.

ನಷ್ಟದಲ್ಲಿರುವ ಸಹಕಾರಿ ಸಂಘಗಳು ಮುಚ್ಚುವ ಹಂತ ತಲುಪಿದೆ. ಕೆಲವು ಸಹಕಾರಿ ಸಂಸ್ಥೆಯ ಅವ್ಯವಹಾರ ಹೊರಬಂದಿದ್ದು, ಜನ ರೊಚ್ಚಿಗೆದ್ದ ಕಾರಣ ಅವು ಶಾಶ್ವತವಾಗಿ ಬಾಗಿಲು ಬಂದ್ ಮಾಡಿಕೊಂಡಿವೆ. ಜನ ತಮ್ಮ ಹಣಕ್ಕಾಗಿ ಈಗಲೂ ಅಲೆದಾಡುತ್ತಿದ್ದಾರೆ. ಇನ್ನಷ್ಟು ಸಹಕಾರಿ ಸಂಘಗಳು ನಷ್ಟದಲ್ಲಿದ್ದರೂ ಅದನ್ನು ಹೊರಗಡೆ ತೋರಿಸಿಕೊಳ್ಳದೇ ವ್ಯವಹಾರ ಮುಂದುವರೆಸಿವೆ.

ಕಾರವಾರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್, ಕಾರವಾರದ ಆಶ್ರಯ ಪತ್ತಿನ ಸಹಕಾರ ಸಂಘ, ಶಿರಸಿಯ ಗೋಳಿ ಸಹಕಾರ ಸಂಘ, ಜೊಯಿಡಾ ಸಹಕಾರಿ ಸಂಘ ಸೇರಿ ಹಲವು ಸಂಸ್ಥೆಗಳಲ್ಲಿ ಹಣಕಾಸಿನ ಅವ್ಯವಹಾರ ಈಗಾಗಲೇ ಬಹಿರಂಗವಾಗಿದೆ. ಇದರೊಂದಿಗೆ ಒಟ್ಟಾರೆ ಜಿಲ್ಲೆಯ 8 ಸಹಕಾರಿ ಸಂಘಗಳಲ್ಲಿ 200 ಕೋಟಿಗೂ ಅಧಿಕ ಅವ್ಯವಹಾರದ ಆರೋಪ ಕೇಳಿ ಬಂದಿದ್ದು, ಸಹಕಾರ ಕಾಯ್ದೆಯ ಅನ್ವಯ 64 ತನಿಖೆ ನಡೆದಿದೆ. ಹೀಗಾಗಿ ಅವೆಲ್ಲವೂ ವ್ಯವಹಾರ ಸ್ಥಗಿತಗೊಳಿಸಿದೆ.

ಕಾರವಾರ ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳೇ ಕಡಿಮೆಯಾದ ಕಾರಣ ಕಾರವಾರ ತಾಲೂಕಿನ ಕೆಲವು ಕೃಷಿ ಸಹಕಾರಿ ಸಂಘಗಳು ನಷ್ಟದ ಹಾದಿ ಹಿಡಿದಿವೆ. ಜಿಲ್ಲೆಯಲ್ಲಿ ಹೈನೋದ್ಯಮ ಕಡಿಮೆಯಾಗುತ್ತಿರುವ ಕಾರಣ ಹಾಲು ಉತ್ಪಾದಕ ಸಹಕಾರಿ ಸಂಘಗಳು ನಷ್ಟದ ಹಾದಿ ಹಿಡಿದಿದೆ. ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗದಲ್ಲಿ ಹಲವು ಪ್ರಾಥಮಿಕ ಪತ್ತಿನ ಕೃಷಿ ಸಹಕಾರಿ ಸಂಘಗಳು ಘಟ್ಟಿಯಾಗಿ ಬೆಳೆದಿವೆ. ಸಹಕಾರಿ ತತ್ವದಡಿ ಕೃಷಿಕರಿಗೆ ಬೇಕಾದ ಸಾಲ ಸೌಲಭ್ಯ ಒದಗಿಸುವುದು ಮಾತ್ರವಲ್ಲದೇ ಕೃಷಿ ಸಲಕರಣೆಗಳನ್ನು ಒದಗಿಸುವುದು, ಅಗತ್ಯ ತರಬೇತಿ ಮುಂತಾದ ಎಲ್ಲ ವ್ಯವಹಾರಗಳನ್ನು ಸಂಘಗಳು ನಡೆಸಿಕೊಂಡು ಬಂದಿವೆ.

ಸರಿಯಾಗಿ ವ್ಯವಹಾರ ನೋಡಿಕೊಂಡು ಬಂದ ಎಲ್ಲ ಸಹಕಾರ ಸಂಘಗಳೂ ಲಾಭದಲ್ಲಿವೆ. ಆದರೆ, ಅಡ್ಡದಾರಿ ಹಿಡಿದ ಸಹಕಾರಿ ಸಂಘಗಳು ಈವರೆಗೂ ಏಳಿಗೆ ಕಂಡ ನಿದರ್ಶನಗಳಿಲ್ಲ. ಅಲ್ಲೊಂದು-ಇಲ್ಲೊಂದು ಸಂಘಗಳಲ್ಲಿ ನಡೆದ ಅವ್ಯವಹಾರಗಳು ಇಡೀ ಸಹಕಾರ ವ್ಯವಸ್ಥೆಯನ್ನೇ ಅಲ್ಲಾಡಿಸುತ್ತಿವೆ ಎಂಬುದು ಹಿರಿಯ ಸಹಕಾರಿಗಳ ಅಭಿಪ್ರಾಯ.

ADVERTISEMENT

Discussion about this post

Previous Post

ನಿಮ್ಮ ಭವಿಷ್ಯ – ನಿಮ್ಮ ಕೈಯಲ್ಲಿ: 2025 ಜುಲೈ 9ರ ದಿನ ಭವಿಷ್ಯ

Next Post

ಕೆಲಸ ಕೇಳಿಕೊಂಡು ಬಂದವ 29 ಲಕ್ಷ ದೋಚಿದ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋