• Latest
ಶಿರಸಿ | ಪಾರ್ಟಿ ಮಾಡಲು ಹೋದವ ಊರುಬಿಟ್ಟು ಪರಾರಿ!

ಶಿರಸಿ | ಪಾರ್ಟಿ ಮಾಡಲು ಹೋದವ ಊರುಬಿಟ್ಟು ಪರಾರಿ!

3 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Friday, October 24, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಶಿರಸಿ | ಪಾರ್ಟಿ ಮಾಡಲು ಹೋದವ ಊರುಬಿಟ್ಟು ಪರಾರಿ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
ADVERTISEMENT

ಬಾಲ್ಯದಲ್ಲಿಯೇ ತಂದೆ-ತಾಯಿ ಕಳೆದುಕೊಂಡು ಅಜ್ಜಿ ಜೊತೆ ವಾಸವಾಗಿದ್ದ ಶಿವರಾಜ ಏಕಾಏಕಿ ಮನೆಬಿಟ್ಟು ಹೋಗಿದ್ದು, ಅವರ ಅಜ್ಜಿ ಮೊಮ್ಮಗನ ಹುಡುಕಾಟದಲ್ಲಿದ್ದಾರೆ. ಎಷ್ಟು ಹುಡುಕಿದರೂ ಶಿವರಾಜನ ಸುಳಿವು ಸಿಗದ ಕಾರಣ ಇದೀಗ ಪೊಲೀಸರ ಮೊರೆ ಹೋಗಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಕಲ್ಲಪ್ಪ ಹಾಗೂ ರತ್ಮ ದಂಪತಿಗೆ ಮೂವರು ಮಕ್ಕಳು. ಆ ಮಕ್ಕಳೆಲ್ಲರೂ ಸಣ್ಣವರಿರುವಾಗಲೇ ಕಲ್ಲಪ್ಪ ಹಾಗೂ ರತ್ನ ಸಾವನಪ್ಪಿದ ಕಾರಣ ಯಲ್ಲವ್ವಾ ಬೋವಿವಡ್ಡರ್ ಅವರು ಆ ಮಕ್ಕಳನ್ನು ಸಾಕಿದ್ದರು. ಶಿರಸಿಯ ಮುನಜವಳ್ಳಿ ಬಳಿಯ ಗಣೇಶನಗರ ಚೌಡೇಶ್ವರಿ ಕಾಲೋನಿಯಲ್ಲಿ ಯಲ್ಲವ್ವ ಅವರ ಜೊತೆ ವೀರಣ್ಣ, ಶಿವರಾಜ, ಪೂಜಾ ಅವರು ವಾಸವಾಗಿದ್ದರು.

ADVERTISEMENT

ಈ ಪೈಕಿ ಶಿವರಾಜ ಬೋವಿವಡ್ಡರ್ (21) ಅವರು ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿದ್ದರು. ಬಾಲ್ಯದಿಂದಲೂ ಕಷ್ಟದ ಜೀವನ ನಡೆಸಿದ್ದ ಅವರು ಮೋಜು-ಮಸ್ತಿಗೆ ಸಮಯ ಕೊಡುತ್ತಿರಲಿಲ್ಲ. ಅವರ ಅಜ್ಜಿ ಯಲ್ಲವ್ವಾ ಸಹ ಮೊಮ್ಮಕ್ಕಳನ್ನು ಶಿಸ್ತಿನಿಂದ ಬೆಳೆಸಿದ್ದರು. ಈ ನಡುವೆ ಚೌಡೇಶ್ವರಿ ಕಾಲೋನಿಯಲ್ಲಿಯೇ ವಾಸವಾಗಿದ್ದ ಸುನೀಲ ಕುರುಬರ್ ಅವರ ಬಳಿ ಶಿವರಾಜ ಬೋವಿವಡ್ಡರ್ ಗೌಂಡಿ ಕೆಲಸಕ್ಕೆ ಹೋಗುತ್ತಿದ್ದರು.

ಜುಲೈ 9ರಂದು ಕೂಲಿ ಹಣ ತರುವುದಾಗಿ ಹೇಳಿ ಮನೆಯಿಂದ ಹೊರಟ ಶಿವರಾಜ ಬೋವಿವಡ್ಡರ್ ಅವರು ಸುನೀಲ ಕುರುಬರ್ ಅವರು ನೀಡಿದ ಹಣ ಸ್ವೀಕರಿಸಿದರು. ಅದಾದ ನಂತರ ಸ್ನೇಹಿತರ ಜೊತೆಗೂಡಿ ಅಪರೂಪಕ್ಕೆ ಒಮ್ಮೆ ಪಾರ್ಟಿ ಮಾಡಿದರು. ಶಿವರಾಜ ಬೋವಿವಡ್ಡರ್ ಅವರು ಪಾರ್ಟಿ ಮಾಡಿ ಹಣ ಹಾಳು ಮಾಡಿದ ವಿಷಯ ಅಜ್ಜಿಗೆ ಗೊತ್ತಾಯಿತು. ಆ ವಿಷಯ ಅಜ್ಜಿಗೆ ಗೊತ್ತಾಗಿರುವುದು ಶಿವರಾಜ ಅವರ ಅರಿವಿಗೂ ಬಂದಿತು.

ಅಜ್ಜಿಯ ಬುದ್ಧಿಮಾತು-ಬೈಗುಳ ನೆನೆಪಿಸಿಕೊಂಡ ಶಿವರಾಜ ಬೋವಿವಡ್ಡರ್ ಮತ್ತೆ ಮನೆಗೆ ಹೋಗಲಿಲ್ಲ. ಪಾರ್ಟಿ ಮಾಡಿದ ವಿಷಯ ಮನೆಯಲ್ಲಿ ಗೊತ್ತಾಯಿತು ಎಂಬ ಕಾರಣದಿಂದ ಅವರು ಊರುಬಿಟ್ಟು ಪರಾರಿಯಾಗಿದ್ದು, ಅಜ್ಜಿ ಮನಸ್ಸು ಸಮಾಧಾನವಾದರೂ ಶಿವರಾಜ ಬೋವಿವಡ್ಡರ್ ಮನೆಗೆ ಮರಳಿಲ್ಲ. ಇದರಿಂದ ಆತಂಕಗೊoಡ ಯಲ್ಲವ್ವ ಬೋವಿವಡ್ಡರ್ ಅವರು ಶಿವರಾಜ ಬೋವಿವಡ್ಡರ್ ಅವರ ಹುಡುಕಾಟ ನಡೆಸಿದ್ದಾರೆ. `ಮಗ.. ಎಲ್ಲಿದ್ದರೂ ಮನೆಗೆ ಬಾ’ ಎಂದು ಕರೆಯುತ್ತಿದ್ದಾರೆ.

ಶಿವರಾಜ ಬೋವಿವಡ್ಡರ್ ಎಲ್ಲಿಯೂ ಸಿಗದ ಕಾರಣ ಯಲ್ಲವ್ವ ಅವರು ಸಹಾಯ ಕೇಳಿ ಪೊಲೀಸರ ಮೊರೆ ಹೋಗಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶಿವರಾಜ ಬೋವಿವಡ್ಡರ್ ಅವರ ಹುಡುಕಾಟ ಶುರು ಮಾಡಿದ್ದಾರೆ.

ADVERTISEMENT

Discussion about this post

Previous Post

ಜೀವನದಲ್ಲಿ ಬೇಸರ: ಯಲ್ಲಾಪುರ ಯುವಕನ ದುಡುಕು ನಿರ್ಧಾರ

Next Post

ಗೋಕರ್ಣ | ಅಗ್ನಿ ಅನಾಹುತ: ಸಿಲೆಂಡರ್ ಹೊರಗೆಸೆದು ಜೀವ ಉಳಿಸಿದ ಜನ

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋