• Latest
Saffron blessings on khaki Beeradara became a police officer thanks to Shivayogi's inspiration!

ಖಾಕಿ ಮೇಲೆ ಕಾವಿ ಆಶೀರ್ವಾದ: ಶಿವಯೋಗಿ ಪ್ರೇರಣೆಯಿಂದ ಪೊಲೀಸ್ ಆದ ಬೀರಾದರ!

3 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Tuesday, October 21, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಖಾಕಿ ಮೇಲೆ ಕಾವಿ ಆಶೀರ್ವಾದ: ಶಿವಯೋಗಿ ಪ್ರೇರಣೆಯಿಂದ ಪೊಲೀಸ್ ಆದ ಬೀರಾದರ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
Saffron blessings on khaki Beeradara became a police officer thanks to Shivayogi's inspiration!
ADVERTISEMENT

ಕಾರವಾರ ನಗರಠಾಣೆ ಪಿಎಸೈ ರವೀಂದ್ರ ಬಿರಾದರ ಅವರ ವಿದ್ಯಾರ್ಥಿ ಜೀವನದಲ್ಲಿ ಒಮ್ಮೆ ಮಹಾಂತ ಶಿವಯೋಗಿಗಳ ಪ್ರವೇಶವಾಗಿದ್ದು, ಅವರು ಹಾಕಿಕೊಟ್ಟ ತತ್ವದ ಅಡಿ ರವೀಂದ್ರ ಬೀರಾದರ್ ಅವರು ದುಶ್ಚಟಗಳ ವಿರುದ್ಧ ಅರಿವು ಮೂಡಿಸುತ್ತಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ರವೀಂದ್ರ ಬಿರಾದರ ಅವರು ಜಮಖಂಡಿಯಲ್ಲಿ ಕಾಲೇಜು ಓದುತ್ತಿದ್ದರು. ಆ ಕಾಲೇಜಿಗೆ ಮಹಾಂತ ಶಿವಯೋಗಿಗಳು ಆಗಮಿಸಿದ್ದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಿವಯೋಗಿಗಳು ಸಭೆ ಮುಗಿದ ನಂತರ `ದುಶ್ಚಟದಿಂದ ದೂರ’ ಎನ್ನವ ಬಗ್ಗೆ ಪ್ರಮಾಣ ಮಾಡಿಸಿದ್ದರು.

ADVERTISEMENT

ದುಶ್ಚಟ ವಿರುದ್ಧದ ಅಭಿಯಾನದ ಆಂದೋಲನದ ಅಂಗವಾಗಿ `ಎಂದಿಗೂ ವ್ಯಸನಗಳನ್ನು ಬಳಸುವುದಿಲ್ಲ’ ಎಂದು ರವೀಂದ್ರ ಬೀರಾದರ್ ಅವರು ಆ ದಿನ ಚೀಟಿಯಲ್ಲಿ ಬರೆದಿದ್ದರು. ಆ ಚೀಟಿಯನ್ನು ಯೋಗಿಗಳ ಜೋಳಿಗೆಗೆ ಹಾಕಿದ್ದರು. ನೂರಾರು ವಿದ್ಯಾರ್ಥಿಗಳಿಂದ ಚೀಟಿಪಡೆದ ಯೋಗಿಗಳು ತಮ್ಮ ಜೋಳಿಗೆ ತುಂಬಿಸಿಕೊoಡಿದ್ದರು.

ಮಹಾoತ ಶಿವಯೋಗಿಗಳ ಭೇಟಿ ರವೀಂದ್ರ ಬೀರಾದರ್ ಅವರ ಪಾಲಿಗೆ ಮಹತ್ವದ ದಿನವಾಗಿದ್ದು, ಪೊಲೀಸ್ ಆಗಿ ಅಧಿಕಾರ ಸ್ವೀಕರಿಸಿದ ನಂತರ ರವೀಂದ್ರ ಬೀರಾದರ್ ಅವರು ವ್ಯಸನ ಮುಕ್ತ ಸಮಾಜಕ್ಕಾಗಿ ಶ್ರಮಿಸಲು ಶುರು ಮಾಡಿದರು. `ನಾನು ಪೊಲೀಸ್ ಆಗಿರಲು ಮಹಾಂತ ಶಿವಯೋಗಿಗಳ ಆಶೀರ್ವಾದವೇ ಕಾರಣ’ ಎಂದು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ `ವ್ಯಸನ ಮುಕ್ತ ದಿನಾಚರಣೆ’ಯಲ್ಲಿ ರವೀಂದ್ರ ಬೀರಾದರ್ ತಿಳಿಸಿದರು.

`ದುಶ್ಚಟಗಳಿಗೆ ಬಲಿ ಆಗಿದ್ದರೆ ಯಾವ ಸಾಧನೆಯೂ ಸಾಧ್ಯವಾಗುತ್ತಿರಲಿಲ್ಲ. ವಿದ್ಯಾರ್ಥಿ ಜೀವನದಲ್ಲಿಯೇ ಶಿವಯೋಗಿಗಳ ಮಾರ್ಗದರ್ಶನದಿಂದ ಅನೇಕರಿಗೆ ಉತ್ತಮ ಬದುಕು ಸಿಕ್ಕಿದೆ’ ಎಂದು ಅವರು ಸ್ಮರಿಸಿದರು. `ಯುವಕರು ಹೆಚ್ಚಾಗಿ ವ್ಯಸನಗಳಿಗೆ ಬಲಿಯಾಗುತ್ತಾರೆ. ಚಿಕ್ಕ ಚಿಕ್ಕ ಚಟಗಳು ವ್ಯಸನಗಳಾಗಿ ಬದಲಾಗುತ್ತದೆ. ವಿದ್ಯಾರ್ಥಿಗಳು ಚಟಗಳಿಂದ ದೂರವಿರಬೇಕು. ಮಾದಕ ವಸ್ತುಗಳ ಸೇವನೆ-ಮಾರಾಟದ ಸುಳಿವು ಸಿಕ್ಕರೆ 112ಗೆ ಫೋನ್ ಮಾಡಬೇಕು’ ಎಂದು ಅವರು ಕರೆ ನೀಡಿದರು. `ಮಾದಕ ವಸ್ತು ಮಾರಾಟಗಾರರಿಗೆ 10 ವರ್ಷ ಜೈಲು ಶಿಕ್ಷೆಯಿದೆ. ಸೇವನೆ ಮಾಡಿದವರಿಗೂ ಶಿಕ್ಷೆ ಖಚಿತ’ ಎಂದು ಅವರು ಕಾನೂನು ಪಾಠ ಮಾಡಿದರು.

ADVERTISEMENT

Discussion about this post

Previous Post

ಪ್ರಜ್ವಲ್ ರೇವಣ್ಣ ಪ್ರಕರಣ: ನ್ಯಾಯವಾದಿ-ನ್ಯಾಯಮೂರ್ತಿ ಇಬ್ಬರೂ ಉತ್ತರ ಕನ್ನಡಿಗರು!

Next Post

ದುಡುಕು ನಿರ್ಧಾರದಿಂದ ಬದುಕು ಅಂತ್ಯ: ಕಾಮಿಡಿ ಕಿಲಾಡಿ ಇನ್ನಿಲ್ಲ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋