ಧಾರಾಕಾರ ಮಳೆ ಹಿನ್ನಲೆ ಅಗಸ್ಟ 18ರಂದು ಉತ್ತರ ಕನ್ನಡ ಜಿಲ್ಲಾಡಳಿತ ಮುಂಡಗೋಡುಹೊರತುಪಡಿಸಿ ಶಾಲಾ-ಕಾಲೇಜಿಗೆ ರಜೆ ಘೋಷಿಸಿದೆ. ಅದಾಗಿಯೂ, ಮುಂಡಗೋಡಿನ ಅತ್ತಿವೇರಿ ಗೌಳಿದಡ್ಡಿ ಭಾಗದ ಕೆಲ ಮಕ್ಕಳು ಈ ದಿನ ಶಾಲೆಗೆ ಗೈರಾಗಿದ್ದಾರೆ.
`ಶಾಲೆಗೆ ಹೋಗಲು ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸಬೇಕು’ ಎಂದು ಆಗ್ರಹಿಸಿ ಮಕ್ಕಳು ಈ ದಿನ ಪ್ರತಿಭಟನೆ ನಡೆಸಿದರು. ಶಿವಾಜಿ ಸರ್ಕಲ್ ನಲ್ಲಿ ಅತ್ತಿವೇರಿ ಗ್ರಾಮಸ್ಥರ ಜೊತೆ ನಡೆದ ಪ್ರತಿಭಟನೆಯಲ್ಲಿ ಮಕ್ಕಳು ಭಾಗವಹಿಸಿದ್ದರು. ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಧ್ವನಿ (ಚಂದ್ರಕಾoತ ಕಾದರೊಳ್ಳಿ ಬಣ)ದವರು ಈ ಪ್ರತಿಭಟನೆ ಆಯೋಜಿಸಿದ್ದು, ಸಂಘಟನೆ ಜಿಲ್ಲಾಧ್ಯಕ್ಷ ಬಸವರಾಜ ಸಂಗಮೇಶ್ವರ್ ಮುಂದಾಳತ್ವವಹಿಸಿದ್ದರು.
`ಅತ್ತಿವೇರಿ ಗ್ರಾಮದಲ್ಲಿ ಸುಮಾರು 700ಕ್ಕೂ ಅಧಿಕ ಕುಟುಂಬಗಳಿವೆ. ಇಲ್ಲಿನವರು ನಿತ್ಯ 2.5ಕಿಮೀ ನಡೆದು ಹುನಗುಂದಕ್ಕೆ ಬರತ್ತಾರೆ. ಅದಾದ ನಂತರ ಬಸ್ ಏರಿ ಮುಂಡಗೋಡಿಗೆ ಬರಬೇಕಿದೆ. ಬಸ್ ಸಮಸ್ಯೆಯಿಂದ 60 ವಿದ್ಯಾರ್ಥಿಗಳು ಶಾಲೆ ಕಲಿಯಲು ಸಮಸ್ಯೆ ಅನುಭವಿಸುತ್ತಿದ್ದಾರೆ’ ಎಂದು ಪ್ರತಿಭಟನಾಕಾರರು ವಿವರಿಸಿದರು. `ವಿದ್ಯಾರ್ಥಿಗಳ ಹಿತ ಹಿತದೃಷ್ಟಿಯಿಂದ ಅತ್ತಿವೇರಿ ಮತ್ತು ಅತ್ತಿವೇರಿ ಗೌಳಿದಡ್ಡಿಗೆ ಬೆಳಗ್ಗೆ 8 ಗಂಟೆಗೆ ಹಾಗೂ ಸಂಜೆ 5ಗಂಟೆಗೆ ಪ್ರತ್ಯೇಕ ಬಸ್ ಬಿಡಬೇಕು’ ಎಂದು ಆಗ್ರಹಿಸಿದರು.
ತಮ್ಮ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ ನಡೆಸಿದ ಸಂಘಟನೆಯವರು ಅದಾದ ನಂತರ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು. ಕೆ.ಎಸ್.ಆರ್.ಟಿ.ಸಿ. ವಿಭಾಗಿಯ ನಿಯಂತ್ರಣ ಅಧಿಕಾರಿಗಳಿಗೆ ಮನವಿ ರವಾನಿಸುವುದಾಗಿ ಅಧಿಕಾರಿಗಳು ತಿಳಿಸಿದರು.
Discussion about this post