• Latest
ಪ್ರೀತಿ-ಪ್ರೇಮ-ಪ್ರಣಯ: ಆತನೇ ಬೇಕು ಎಂದು ವರಿಸಿದವಳು ಎಲ್ಲರಿಂದಲೂ ದೂರವಾದಳು!

ಪ್ರೀತಿ-ಪ್ರೇಮ-ಪ್ರಣಯ: ಆತನೇ ಬೇಕು ಎಂದು ವರಿಸಿದವಳು ಎಲ್ಲರಿಂದಲೂ ದೂರವಾದಳು!

2 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Sunday, October 19, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಪ್ರೀತಿ-ಪ್ರೇಮ-ಪ್ರಣಯ: ಆತನೇ ಬೇಕು ಎಂದು ವರಿಸಿದವಳು ಎಲ್ಲರಿಂದಲೂ ದೂರವಾದಳು!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
ADVERTISEMENT

`ಆತನೇ ಬೇಕು’ ಎಂದು ಅಂಕೋಲಾದ ಸಂಕೇತ್ ಆಚಾರಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ಹೊನ್ನಾವರದ ರಮ್ಯಾ ಆಚಾರಿ ಅವರು ಮದುವೆಯಾದ ಮೂರುವರೆ ತಿಂಗಳೊಳಗೆ ಎಲ್ಲರಿಂದಲೂ ದೂರವಾಗಿದ್ದಾರೆ. `ಸಮಸ್ಯೆಗೆ ಸಾವೇ ಔಷಧವಲ್ಲ’ ಎಂಬುದನ್ನು ಅರಯದೇ ಅವರು `ಈ ಬದುಕೇ ಸಾಕು’ ಎಂದು ನಿರ್ಣಯಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಹೊನ್ನಾವರದ ಮುಗ್ವಾ ಆರೋಳ್ಳಿಯಲ್ಲಿ ರಮ್ಯಾ ಆಚಾರಿ (24) ಅವರು ವಾಸವಾಗಿದ್ದರು. ಅವರ ತಂದೆ ಗಣೇಶ ಆಚಾರಿ ಅವರು ಚಾಲಕರಾಗಿ ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. `ವಯಸ್ಸಿಗೆ ಬಂದ ಮಗಳಿಗೆ ಮದುವೆ ಮಾಡಬೇಕು’ ಎಂಬ ಆಲೋಚನೆಯಲ್ಲಿದ್ದ ಗಣೇಶ ಆಚಾರಿ ಅವರಿಗೆ ಮಗಳ ಪ್ರೀತಿ ವಿಷಯ ತಿಳಿಯಿತು. ಅಂಕೋಲಾ ಹಟ್ಟಿಕೇರಿಯ ಸಂಕೇತ ಆಚಾರಿ ಹಾಗೂ ರಮ್ಯಾ ಆಚಾರಿ ಪರಸ್ಪರ ಪ್ರೇಮಿಸುತ್ತಿರುವುದನ್ನು ಅರಿತ ಗಣೇಶ ಆಚಾರಿ ಅವರು ಅವರ ಮದುವೆಗೆ ಒಪ್ಪಿಗೆ ನೀಡಿದರು.

ADVERTISEMENT

ಗುರು-ಹಿರಯರ ಸಮ್ಮುಖದಲ್ಲಿ ಅತ್ಯಂತ ಸಂಪ್ರದಾಯಬದ್ಧವಾಗಿ ಅವರಿಬ್ಬರ ವಿವಾಹ ಮಾಡಿಸಿದರು. 2025ರ ಏಪ್ರಿಲ್ 21ರಂದು ಸಂಕೇತ ಆಚಾರಿ ಹಾಗೂ ರಮ್ಯಾ ಆಚಾರಿ ಸತಿ-ಪತಿಗಳಾದರು. ನೂರಾರು ಬಂಧು-ಮಿತ್ರರು ನೂತನ ದಂಪತಿಯನ್ನು ಹರಸಿ ಹಾರೈಸಿದರು. ಅದಾದ ನಂತರ ಸಂಕೇತ ಆಚಾರಿ ಹಾಗೂ ರಮ್ಯಾ ಆಚಾರಿ ಅಂಕೋಲಾದ ಹಟ್ಟಿಕೇರಿಯಲ್ಲಿರುವ ಮನೆಯಲ್ಲಿ ಅನ್ಯೋನ್ಯವಾಗಿದ್ದರು. ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಜೀವನ ನಡೆಸುತ್ತಿದ್ದರು.

ಈ ಎಲ್ಲದರ ನಡುವೆ ಅಗಸ್ಟ 19ರಂದು ಗಣೇಶ ಆಚಾರಿ ಅವರಿಗೆ ಫೋನ್ ಮೂಲಕ ಆಘಾತಕಾರಿ ಸುದ್ದಿಯೊಂದು ಬಂದಿತು. ಮಗಳನ್ನು ನೋಡಲು ಅವರು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ಧಾವಿಸಿದ್ದರು. ಆದರೆ, ಅಲ್ಲಿ ಗಣೇಶ ಆಚಾರಿ ಅವರ ಪುತ್ರಿ ರಮ್ಯಾ ಆಚಾರಿ ಶವವಾಗಿದ್ದರು. ಯಾರಿಗೂ ಗೊತ್ತಿಲ್ಲದ ವಿಷಯವೊಂದನ್ನು ಮನಸ್ಸಿಗೆ ಹಚ್ಚಿಕೊಂಡು ಕೊರಗುತ್ತಿದ್ದ ರಮ್ಯಾ ಆಚಾರಿ ಬದುಕಿನ ಬಗ್ಗೆ ದುಡುಕು ನಿರ್ಧಾರ ಮಾಡಿದ್ದರು. ಮನೆಯಲ್ಲಿದ್ದ ಫ್ಯಾನಿಗೆ ವೇಲು ಸಿಕ್ಕಿಸಿಕೊಂಡು ಅವರು ನೇಣಿಗೆ ಶರಣಾಗಿದ್ದರು.

ರೂಮಿನಲ್ಲಿ ನೇತಾಡುತ್ತಿದ್ದ ರಮ್ಯಾ ಆಚಾರಿ ಅವರನ್ನು ನೋಡಿದ ಸಂಕೇತ ಆಚಾರಿ ತಕ್ಷಣ ಅವರನ್ನು ಕೆಳಗಿಳಿಸಿದರು. ರಮ್ಯಾ ಆಚಾರಿ ಅವರನ್ನು ಆಸ್ಪತ್ರೆಗೆ ಕರೆತಂದರು. ಆದರೆ, ಅಷ್ಟರೊಳಗೆ ರಮ್ಯಾ ಆಚಾರಿ ಅವರು ಶವವಾಗಿದ್ದರು. ಆ ಸಾವನ್ನು ವೈದ್ಯರು ದೃಢೀಕರಿಸಿದರು. ಮದುವೆ ಆದ ಹೊಸತರಲ್ಲಿಯೇ ಮಗಳ ಅಸಹಜ ಸಾವಿನಿಂದ ಗಣೇಶ ಆಚಾರಿ ಕುಗ್ಗಿದರು. ಸಾವಿನ ನೈಜ ಕಾರಣ ತಿಳಿಯುವುದಕ್ಕಾಗಿ ಅನುಮಾನವ್ಯಕ್ತಪಡಿಸಿ ಪೊಲೀಸ್ ದೂರು ನೀಡಿದರು. ಅಂಕೋಲಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಸಾವಿನ ಕಾರಣ ಹುಡುಕುತ್ತಿದ್ದಾರೆ.

`ಸಮಸ್ಯೆಗೇ ಸಾವೇ ಪರಿಹಾರ ಅಲ್ಲ’

ADVERTISEMENT

Discussion about this post

Previous Post

ಅಗಸ್ಟ 20: ಈ ದಿನವೂ ಆ ಆರು ತಾಲೂಕಿನ ಶಾಲೆಗೆ ರಜೆ!

Next Post

ರಾಜ್ಯ ಸಮಿತಿಗೆ ಆಯ್ಕೆಯಾದ ಅಂಕೋಲಾ ಪತ್ರಕರ್ತ

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋