• Latest
The fight between the medical team and the DJ: This Ganesha was also saved from that commotion!

ಡಿಜೆ ವಿರುದ್ಧ ವೈದ್ಯ ತಂಡದ ಹೋರಾಟ: ಆ ಗದ್ದಲದಿಂದ ಈ ಗಣಪನಿಗೂ ಸಿಕ್ಕಿತು ರಕ್ಷಣೆ!

2 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Sunday, October 19, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಡಿಜೆ ವಿರುದ್ಧ ವೈದ್ಯ ತಂಡದ ಹೋರಾಟ: ಆ ಗದ್ದಲದಿಂದ ಈ ಗಣಪನಿಗೂ ಸಿಕ್ಕಿತು ರಕ್ಷಣೆ!

uknews9.comby uknews9.com
in ಲೇಖನ
The fight between the medical team and the DJ: This Ganesha was also saved from that commotion!
ADVERTISEMENT

ಹಬ್ಬ-ಹರಿದಿನಗಳಲ್ಲಿ ಸದ್ದು ಮಾಡುವ ಡಿಜೆ ಅನೇಕ ಜೀವಗಳನ್ನು ಬಲಿಪಡೆದಿದೆ. ಹೀಗಾಗಿ ಜೀವ ರಕ್ಷಿಸುವ ಕಾಯಕದಲ್ಲಿರುವ ಕುಮಟಾದ ವೈದ್ಯರ ತಂಡ ಕಳೆದ 8 ವರ್ಷಗಳಿಂದ ಡಿಜೆ ವಿರುದ್ಧ ಹೋರಾಟ ನಡೆಸುತ್ತಿದೆ. ಅದರ ಪರಿಣಾಮವಾಗಿ ಡಿಜೆ ಸಂಪೂರ್ಣ ನಿಷೇಧ ಸಾಧ್ಯವಾಗದಿದ್ದರೂ ಶಬ್ದ ಮಾಲಿನ್ಯದ ವಿರುದ್ಧ ಜನ ಜಾಗೃತರಾಗುತ್ತಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

`ಭಾರತೀಯ ಸಂಪ್ರದಾಯದoತೆ ಹಬ್ಬ-ಹರಿದಿನಗಳನ್ನು ಶಾಂತಿಯುತವಾಗಿ ನಡೆಸಬೇಕು’ ಎಂಬುದು ಈ ತಂಡದ ಕನಸು. ಹೀಗಾಗಿ ತಮ್ಮ ಸ್ವಂತ ಹಣ ಖರ್ಚು ಮಾಡಿ ಡಿಜೆ ವಿರುದ್ಧ ಈ ವೈದ್ಯರ ತಂಡ ಹೋರಾಟ ನಡೆಸುತ್ತಿದೆ. ಕುಮಟಾದ ವೈದ್ಯ ಡಾ ರವಿರಾಜ ಕಡ್ಲೆ ಅವರು ಈ ಡಿಜೆ ವಿರುದ್ಧ ಹೋರಾಟದ ರೂವಾರಿ. ವೈದ್ಯಕೀಯ ಕ್ಷೇತ್ರದಲ್ಲಿ ತೊಡಗಿರುವ ಮಹೇಶ ಆಚಾರಿ, ಮಂಜುನಾಥ ಹಳ್ಳೆರ್, ಗಣಪತಿ ಪಟಗಾರ, ಗಣೇಶ ನಾಯ್ಕ ಮೊದಲಾದವರು ಅವರ ಜೊತೆಗಾರರು. ಅವರೆಲ್ಲರ ಪ್ರಯತ್ನದಿಂದ ಡಿಜೆ ಬಳಸುವವರ ವಿರುದ್ಧ ಈಗೀಗ ಪೊಲೀಸ್ ಪ್ರಕರಣ ದಾಖಲಾಗುತ್ತಿದೆ. ಒಂದೆರಡು ಪ್ರಕರಣದಲ್ಲಿ ಡಿಜೆ ಬಳಸಿದವರಿಗೆ ಶಿಕ್ಷೆಯೂ ಆಗಿದೆ.

ADVERTISEMENT

`1998ರಲ್ಲಿ ದೆಹಲಿಯಲ್ಲಿ ಯುವತಿಯೊಬ್ಬರ ಮೇಲೆ ಅತ್ಯಾಚಾರನಡೆದು ಅವರ ಕೊಲೆಯಾಗಿತ್ತು. ಆ ವೇಳೆ ಯುವತಿ ಸಹಾಯಕ್ಕಾಗಿ ಸಾಕಷ್ಟು ಕೂಗಿದರೂ ಅದು ಯಾರಿಗೂ ಕೇಳಲಿಲ್ಲ. ಅದಕ್ಕೆ ಕಾರಣ ಆ ಪ್ರದೇಶದಲ್ಲಿದ್ದ ಡಿಜೆ ಸದ್ದು. ಇಂಥ ಹಲವು ವಿದ್ಯಮಾನಗಳನ್ನು ಅವಲೋಕಿಸಿದ ಸುಪ್ರೀಂ ಕೋರ್ಟ ವಿಶೇಷ ಅಧಿಕಾರ ಬಳಸಿ ಡಿಜೆ ವಿರುದ್ಧ ಕ್ರಮಕ್ಕೆ ನಿರ್ದೇಸಿತು’ ಎಂದು ಡಾ ರವಿರಾಜ ಕಡ್ಲೆ ಅವರು ಮಾತು ಶುರು ಮಾಡಿದರು. `ಡಿಜೆ ಸದ್ದಿನಿಂದ ಅನೇಕರು ತೊಂದರೆಗೆ ಒಳಗಾಗುತ್ತಾರೆ. ಗರ್ಭದಲ್ಲಿರುವ ಮಕ್ಕಳು ಸಾವನಪ್ಪಿದ ಉದಾಹರಣೆಯಿದೆ. ಅದೆಲ್ಲದರ ಜೊತೆ ಧಾರ್ಮಿಕ, ಆರೋಗ್ಯ, ಕಾನೂನು ದೃಷ್ಠಿಯಿಂದಲೂ ಸಹ ಡಿಜೆ ಸದ್ದು ಅಪಾಯಕಾರಿ’ ಎಂದವರು ವಿವರಿಸಿದರು. `ಪ್ರತಿ ಧಾರ್ಮಿಕ ಉತ್ಸವಗಳಿಗೂ ತಮ್ಮದೇ ಆದ ಹಿನ್ನಲೆ ಇರುತ್ತದೆ. ಮದ್ಯದ ನಶೆ, ಡಿಜೆ ಸದ್ದಿನಲ್ಲಿ ಆ ಉತ್ಸವದ ಮೂಲ ತತ್ವವನ್ನು ಮರೆಯಲಾಗುತ್ತಿದೆ. ಗಣೇಶ ಹಬ್ಬ ಮಾತ್ರವಲ್ಲದೇ ಕೃಷ್ಣಮೂರ್ತಿ ಉತ್ಸವ, ಹನುಮಾನ್ ಮೂರ್ತಿ ಮೆರವಣಿಗೆ, ಶಾರದಾಮೂರ್ತಿ ವಿಸರ್ಜನೆ ಎಂಬ ನೆಪದಲ್ಲಿಯೂ ದೊಡ್ಡದಾಗಿ ಡಿಜೆ ಬಳಸುವ ಕೆಟ್ಟ ಸಂಪ್ರದಾಯ ಬಂದಿದೆ. ಅದನ್ನು ಹೋಗಲಾಡಿಸಿ, ಮೂಲ ತತ್ವದ ಕಡೆ ಮುಖ ಮಾಡುವುದೇ ನಮ್ಮ ಹೋರಾಟದ ಉದ್ದೇಶ ಎಂದು ಈ ತಂಡದ ಮತ್ತೊಬ್ಬ ಸದಸ್ಯ ಡಾ ಮಹೇಶ ಅವರು ಮಾತನಾಡಿದರು.

ಡಿಜೆ ವಿರುದ್ಧ ಹೋರಾಟ ಶುರು ಮಾಡಿದ ವೈದ್ಯರ ತಂಡದವರು ಅನೇಕ ರಾತ್ರಿಗಳನ್ನು ಪೊಲೀಸ್ ಠಾಣೆಯಲ್ಲಿ ಕಳೆದರು. ಡಿಜೆ ಹಾಕಿ ಕುಣಿದು ಕುಪ್ಪಳಿಸುತ್ತಿದ್ದವರ ವಿರುದ್ಧ ದೂರು ನೀಡಿ, ಅವರ ಕೆಂಗಣ್ಣಿಗೆ ಗುರಿಯಾದರು. ಒಂದೇ ತಿಂಗಳ ಅವಧಿಯಲ್ಲಿ 29ಕ್ಕೂ ಅಧಿಕ ದೂರುಗಳನ್ನು ದಾಖಲಿಸಿ ಡಿಜೆ ವಿರುದ್ಧ ದೊಡ್ಡ ಅಭಿಯಾನವನ್ನು ನಡೆಸಿದರು. ಆ ವೇಳೆ ಡಿಜೆ ವಿರೋಧಿ ಬಳಗದವರನ್ನು ಅನೇಕರು ವಿರೋಧವ್ಯಕ್ತಪಡಿಸಿದರು. ಘಟಾನುಘಟಿ ನಾಯಕರು ಡಾ ರವಿರಾಜ ಕಡ್ಲೆ ಅವರ ವಿರುದ್ಧ ಭಾಷಣ ಮಾಡಿದರು. `ಡಿಜೆ ಬೇಕೇ ಬೇಕು’ ಎಂಬ ಆಂದೋಲನಗಳು ನಡೆದವು. ಆದರೆ, ಸುಪ್ರೀಂ ಕೋರ್ಟಿನ ಆದೇಶ ವೈದ್ಯರ ಹೋರಾಟದ ಪರವಾಗಿದ್ದವು. ಇದೆಲ್ಲದರ ಜೊತೆಗೆ ಡಿಜೆ ಪರವಾಗಿ ಆಂದೋಲನ ನಡೆಸಿದವರು ಅದೇ ಡಿಜೆಯಿಂದ ಉಂಟಾದ ಶಬ್ದ ಮಾಲಿನ್ಯದಿಂದ ಸಂತ್ರಸ್ತರಾದರು. ಹೀಗಾಗಿ ಬಹುತೇಕ ಅವರೆಲ್ಲರೂ ಡಿಜೆ ವಿರುದ್ಧ ಆಂದೋಲನಕ್ಕೆ ಕೈ ಜೋಡಿಸದೇ ಇದ್ದರೂ ಈ ವಿಷಯದಲ್ಲಿ ಮೌನವಹಿಸಿದರು. ಇದರ ಪರಿಣಾಮವಾಗಿ ಸದ್ಯ ಕುಮಟಾದ ಸುತ್ತಮುತ್ತಲಿನ ಭಾಗದಲ್ಲಿ ಡಿಜೆ ಸದ್ದು ಕಡಿಮೆಯಾಗಿದೆ. ಅದಾಗಿಯೂ ಡಿಜೆ ಸದ್ದು ಕೇಳಿಸಿದರೆ ಈ ವೈದ್ಯರ ತಂಡದ ಸದಸ್ಯರು ಪೊಲೀಸ್ ಠಾಣೆಯಲ್ಲಿರುತ್ತಾರೆ!

ಈ ನಡುವೆ ಡಾ ರವಿರಾಜ ಕಡ್ಲೆ ಅವರನ್ನು ಭೇಟಿ ಮಾಡಲು ಉತ್ತರ ಭಾರತದ ಗುರುಗಳೊಬ್ಬರು ಆಗಮಿಸಿದ್ದರು. ಆ ಗುರುಗಳನ್ನು ವೈದ್ಯರು ಗೋಕರ್ಣಕ್ಕೆ ಕರೆದೊಯ್ದಿದ್ದು, ಸಂಜೆ ಮರಳುವಾಗ ಗಣೇಶ ಉತ್ಸವದ ನೆಪದಲ್ಲಿ ಕೆಲವರು ಡಿಜೆ ಹಾಕಿ ಕುಣಿಯುವುದನ್ನು ನೋಡಿ ಆ ಗುರುಗಳು ಬೇಸರಿಸಿಕೊಂಡರು. ಧರ್ಮ ರಕ್ಷಣೆಗಾಗಿ ಡಿಜೆ ವಿರುದ್ಧ ಹೋರಾಟ ನಡೆಸುವಂತೆ ಗುರುಗಳಿಂದ ಡಾ ರವಿರಾಜ ಅವರಿಗೆ ಅಪ್ಪಣೆ ಬಂದಿದ್ದು, ಆ ದಿನ ಗುರುಗಳಿಗೆ ಕೊಟ್ಟ ಮಾತಿನಂತೆ ಈಗಲೂ ಅವರು ತಮ್ಮ ಹೋರಾಟ ಮುಂದುವರೆಸಿದ್ದಾರೆ. 2022ರಲ್ಲಿ ಡಿಜೆ ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಜ್ಯ ಸರ್ಕಾರ ಸಹ ಸೂಚಿಸಿತು. ಆದರೆ, ಪೊಲೀಸ್ ಇಲಾಖೆಯಲ್ಲಿ ಡಿಜೆಯ ಧ್ವನಿ ಅಳೆಯುವ ಮಾನದಂಡವೇ ಇರಲಿಲ್ಲ. ಆಗ, ಈ ವೈದ್ಯರ ತಂಡವೇ ಪೊಲೀಸ್ ಠಾಣೆಯೊಂದಲ್ಲೆ ಡಿಜೆ ಅಳೆಯುವ ಮೀಟರ್’ನ್ನು ದೇಣಿಗೆಯಾಗಿ ನೀಡಿದೆ. ಅದಾದ ನಂತರ ಪೊಲೀಸರು ಕುಮಟಾದಲ್ಲಿ ಪ್ರಕರಣವೊಂದನ್ನು ದಾಖಲಿಸಿದ್ದು, ಡಿಜೆ ಬಳಸಿದವರಿಗೆ ನ್ಯಾಯಾಲಯದಿಂದ ಶಿಕ್ಷೆಯಾಗಿದೆ.

ಡಿಜೆ ಸದ್ದಿನಿಂದ ನೀವು ಸಂತ್ರಸ್ತರಾಗಿದ್ದರೆ ಇಲ್ಲಿ ಫೋನ್ ಮಾಡಿ: 6363031459

ADVERTISEMENT

Discussion about this post

Previous Post

2025 ಅಗಸ್ಟ್ 27ರ ದಿನ ಭವಿಷ್ಯ

Next Post

ಗಣೇಶ ಹಬ್ಬ: ಇಲ್ಲಿ ಮೊಬೈಲ್ ಖರೀದಿಸಿದರೆ ಟಿವಿ ಉಚಿತ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋