• Latest
ಕಾಸಿಗಾಗಿ ಕಾಟ ಕೊಟ್ಟ ಬೇತಾಳ!

ಕಾಸಿಗಾಗಿ ಕಾಟ ಕೊಟ್ಟ ಬೇತಾಳ!

1 month ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Tuesday, October 21, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಕಾಸಿಗಾಗಿ ಕಾಟ ಕೊಟ್ಟ ಬೇತಾಳ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
ADVERTISEMENT

ಕುಮಟಾದ ಸಂತೋಷ ಬೇತಾಳಕರ್ ಹಾಗೂ ಮಂಜುನಾಥ ಬೇತಾಳಕರ್ ಸೇರಿ ಶಿರಸಿಯ ಪವನಕುಮಾರ ನಂದಿಕೇಶ್ವರಮಠ ಅವರಿಗೆ ಯಾಮಾರಿಸಿದ್ದಾರೆ. ಮೀನು ಉದ್ದಿಮೆ ನಡೆಸಿ ಲಾಭ ಕೊಡುವುದಾಗಿ ನಂಬಿಸಿ ಸಂತೋಷ ಹಾಗೂ ಮಂಜುನಾಥ ಅವರು ಪವನಕುಮಾರ ಅವರ ದಾಖಲೆ ಅಡಿ ಕೋಟಿ ರೂ ಸಾಲಪಡೆದಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಶಿರಸಿಯ ಬದನಗೋಡ ಬಳಿಯ ದಾಸನಕೊಪ್ಪ ಬಳಿ ಪವನಕುಮಾರ ನಂದಿಕೇಶ್ವರಮಠ ಅವರು ವಾಸವಾಗಿದ್ದಾರೆ. ಕೃಷಿ ಕೆಲಸ ಮಾಡಿಕೊಂಡಿರುವ ಅವರು ತಮ್ಮ ಹೆಸರಿನಲ್ಲಿ ಭೂಮಿಯನ್ನು ಹೊಂದಿದ್ದಾರೆ. ಕುಮಟಾ ತದಡಿಯ ಸಂತೋಷ ಬೇತಾಳಕರ್ ಹಾಗೂ ಮಂಜುನಾಥ ಬೇತಾಳಕರ್ ಅವರು ಕಳೆದ 4 ವರ್ಷಗಳಿಂದ ಪವನಕುಮಾರ ನಂದಿಕೇಶ್ವರಮಠ ಅವರ ಪರಿಚಿತರಾಗಿದ್ದು, ಅವರೇ ಇವರಿಗೆ ಮೋಸ ಮಾಡಿದ್ದಾರೆ.

ADVERTISEMENT

2025ರ ಜನವರಿ ಮೊದಲವಾರ ಶಿರಸಿ ಅಶ್ವಿನಿ ಸರ್ಕಲ್ ಬಳಿಯ ಸ್ಟೇಟ್ ಬ್ಯಾಂಕ್ ಎದುರು ಸಂತೋಷ ಬೇತಾಳಕರ್ ಹಾಗೂ ಮಂಜುನಾಥ ಬೇತಾಳಕರ್ ಅವರು ಪವನಕುಮಾರ ನಂದಿಕೇಶ್ವರಮಠ ಅವರನ್ನು ಭೇಟಿಯಾದರು. `ನಾವೆಲ್ಲರೂ ಸೇರಿ ಹೊಸ ಬ್ಯುಸಿನೆಸ್ ಮಾಡೋಣ’ ಎಂದು ಸಂತೋಷ ಬೇತಾಳಕರ್ ಹೇಳಿದರು. ಉತ್ತಮ ಲಾಭ ಕೊಡುವುದಾಗಿಯೂ ಭರವಸೆ ನೀಡಿದರು. ಇದಕ್ಕೆ ಪವನಕುಮಾರ ನಂದಿಕೇಶ್ವರಮಠ ಸಹ ಒಪ್ಪದರು.

`ನಿಮ್ಮ ಹಕ್ಕಿನ ಚಿರಾಸ್ಥಿಯನ್ನು ಬ್ಯಾಂಕಿಗೆ ಗ್ಯಾರಂಟಿಯಾಗಿ ಕೊಟ್ಟು ಅದರ ಮೂಲಕ ಸಾಲ ತೆಗೆಯೋಣ. ಬ್ಯಾಂಕಿನಿAದ ಹಣಕಾಸು ನೆರವುಪಡೆದು ಮೀನುಗಾರಿಕಾ ಉದ್ದಿಮೆ ನಡೆಸಿ ಲಾಭ ಮಾಡೋಣ’ ಎಂದು ಸಂತೋಷ ಬೇತಾಳಕರ್ ಹೇಳಿದರು. `ಕಾಗದಪತ್ರದ ಎಲ್ಲಾ ಜವಾಬ್ದಾರಿ ನಾನೇ ನೋಡಿಕೊಳ್ಳುವೆ’ ಎಂದರು. ಇದಕ್ಕೂ ಪವನಕುಮಾರ ನಂದಿಕೇಶ್ವರಮಠ ಅವರು ಒಪ್ಪಿಗೆ ಸೂಚಿಸಿದರು.

ಮಾರ್ಚ 2ರಂದು ಸಂತೋಷ ಬೇತಾಳಕರ್ ಅವರು ಅಶ್ವಿನಿ ಸರ್ಕಲ್ ಬಳಿ ಪವನಕುಮಾರ ನಂದಿಕೇಶ್ವರಮಠ ಅವರನ್ನು ಕರೆಯಿಸಿದರು. `ತನ್ನ ಹೆಸರಿನಲ್ಲಿ ಸಾಲ ನೀಡಲು ತಾಂತ್ರಿಕ ತೊಂದರೆ ಇದೆ’ ಎಂದು ನಂಬಿಸಿ ಮಂಜುನಾಥ ಬೇತಾಳಕರ್ ಅವರ ಹೆಸರಿನಲ್ಲಿ 2.90 ಕೋಟಿ ರೂ ಸಾಲ ಮಂಜೂರಿ ಮಾಡಿಸಿದರು. ಮೊದ ಮೊದಲು ತುಂಬಾ ಸೌಜನ್ಯದಿಂದ ವರ್ತಿಸಿದ ಸಂತೋಷ ಬೇತಾಳಕರ್ ಹಾಗೂ ಮಂಜುನಾಥ ಬೇತಾಳಕರ್ ಕ್ರಮೇಣ ಪವನಕುಮಾರ ನಂದಿಕೇಶ್ವರಮಠ ಅವರನ್ನು ಉದಾಸೀನದಿಂದ ನೋಡಿದರು.

ಎಷ್ಟೇ ಪ್ರಶ್ನಿಸಿದರೂ ಯೋಜನೆ ಬಗ್ಗೆ ಯಾವ ಮಾಹಿತಿಯನ್ನು ಕೊಡಲಿಲ್ಲ. ಕೇಳಿದಾಗ ಸಿಡಿಮಿಡಿಗೊಂಡು ಕೋಪದಿಂದ ಮಾತನಾಡಲು ಶುರು ಮಾಡಿದರು. ಜುಲೈ 22ರಂದು ಮಧ್ಯಾಹ್ನ ಹೊಟೇಲ್ ಪಂಚವಟಿಯಲ್ಲಿ ಈ ಮೂವರು ಸೇರಿ ಮಾತುಕಥೆ ನಡೆಸಿದರು. ತಾವು ನೀಡಿದ ದಾಖಲೆ ಕೊಟ್ಟು ಜಾಮೀನು ರದ್ದು ಮಾಡುವಂತೆ ಪವನಕುಮಾರ ನಂದಿಕೇಶ್ವರಮಠ ಕೇಳಿದರು. ಆದರೆ, ಸಂತೋಷ ಬೇತಾಳಕರ್ ಅದಕ್ಕೆ ಒಪ್ಪಲಿಲ್ಲ. ಹೀಗಾಗಿ ತಮಗೆ ನಂಬಿಕೆ ದ್ರೋಹ ಆಗಿರುವ ಬಗ್ಗೆ ಪವನಕುಮಾರ ನಂದಿಕೇಶ್ವರಮಠ ಅವರು ಪೊಲೀಸ್ ದೂರು ನೀಡಿದರು. ಶಿರಸಿ ಹೊಸ ಮಾರುಕಟ್ಟೆ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದರು.

`ಎಷ್ಟೇ ನಂಬಿಗಸ್ಥರಾಗಿದ್ದರೂ ಹಣಕಾಸು ವ್ಯವಹಾರ ಮಾಡುವಾಗ ಎಚ್ಚರಿಕೆವಹಿಸಿ’

ADVERTISEMENT

Discussion about this post

Previous Post

ಬಾನಿನಲ್ಲಿ ಮೂಡಿಬಂದ ಚಂದಮಾಮ: ಬಣ್ಣ ಬದಲಿಸುವ ಗ್ರಹಣ!

Next Post

ಕಾರವಾರ: ಕಿಮ್ಸ್ ನಿರ್ದೇಶಕರಾಗಿದ್ದವರಿಗೆ ನಿವೃತ್ತಿ ಆದರೂ ನೆಮ್ಮದಿ ಇಲ್ಲ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋