• Latest
ಕ್ಯಾಮರಾ ಖರೀದಿಗೆ ಕಂಜೂಸ್: ಕೂಡಿಟ್ಟ ಅಡಿಕೆ ಕಳ್ಳರ ಪಾಲು

ಕ್ಯಾಮರಾ ಖರೀದಿಗೆ ಕಂಜೂಸ್: ಕೂಡಿಟ್ಟ ಅಡಿಕೆ ಕಳ್ಳರ ಪಾಲು

1 month ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Friday, October 24, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಕ್ಯಾಮರಾ ಖರೀದಿಗೆ ಕಂಜೂಸ್: ಕೂಡಿಟ್ಟ ಅಡಿಕೆ ಕಳ್ಳರ ಪಾಲು

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
ADVERTISEMENT

ಸಿದ್ದಾಪುರದ ಸುರೇಶ ಹೆಗಡೆ ಅವರ ಮನೆಯಲ್ಲಿದ್ದ ಅಡಿಕೆ ಕಳ್ಳತನವಾಗಿದೆ. ವಾರಗಳ ಕಾಲ ಸ್ವತಃ ಕಳ್ಳರ ಹುಡುಕಾಟ ನಡೆಸಿದ ಹೆಗಡೆಯವರು ಕೊನೆಗೂ ಕಳ್ಳರು ಪತ್ತೆಯಾಗದ ಕಾರಣ ಪೊಲೀಸರ ಮೊರೆ ಹೋಗಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಸಿದ್ದಾಪುರದ ಸರಕುಳಿಯ ಮೇಲಗಿರಿಮನೆ ಬಳಿಯ ಸುರೇಶ ಹೆಗಡೆ ಅವರು ಕೃಷಿ ಕಾಯಕ ಮಾಡಿಕೊಂಡಿದ್ದರು. ತಮ್ಮ ಮನೆ ಹಿಂದೆ ಅವರು ಅಡಿಕೆ ಮೂಟೆಗಳನ್ನು ರಾಶಿ ಹೊಡೆದಿದ್ದರು. ಅಗಸ್ಟ 28ರಂದು ಎಲ್ಲಾ ಅಡಿಕೆ ಮೂಟೆಗಳನ್ನು ನೋಡಿ ಸರಿಯಾಗಿ ಲೆಕ್ಕ ಮಾಡಿಟ್ಟಿದ್ದರು. ಅಗಸ್ಟ 30ರಂದು ಹೋಗಿ ನೋಡಿದಾಗ ಒಂದು ಅಡಿಕೆ ಮೂಟೆ ಕಡಿಮೆ ಕಾಣಿಸಿತು.

ADVERTISEMENT

ತೂಕ ಗಮನಿಸಿದಾಗ 70 ಕೆಜಿಯ ಒಂದು ಅಡಿಕೆ ಮೂಟೆ ಕಣ್ಮರೆಯಾಗಿತ್ತು. `30 ಸಾವಿರ ರೂಪಾಯಿ ಮೌಲ್ಯದ ಚಾಲಿ ಅಡಿಕೆಯನ್ನು ಯಾರೋ ಕದ್ದಿದ್ದಾರೆ’ ಎಂದು ಅವರು ಊರಿನಲ್ಲಿ ಸುದ್ದಿ ಬಿಟ್ಟಿದ್ದರು. ಕಳ್ಳರ ಹುಡುಕಾಟಕ್ಕೆ ನಾನಾ ಬಗೆಯ ಪ್ರಯತ್ನ ಮಾಡಿದ್ದರು. ಊರಿನವರ ಸಹಕಾರದಲ್ಲಿಯೂ ಕಳ್ಳರ ಕುರುಹು ಹುಡುಕಿದ್ದರು. ಆದರೆ, ನಿಜವಾದ ಕಳ್ಳ ಯಾರು? ಎಂದು ಮಾತ್ರ ಗೊತ್ತಾಗಲಿಲ್ಲ.

ಅದಾಗಿಯೂ ಸೆಪ್ಟೆಂಬರ್ 8ರವರೆಗೆ ಕಾದ ಅವರು ಕುಟುಂಬದವರ ಜೊತೆ ಚರ್ಚಿಸಿ ಪೊಲೀಸ್ ಠಾಣೆಗೆ ಬಂದರು. ಅಡಿಕೆ ಕಳ್ಳತನದ ವಿಷಯ ವಿವರಿಸಿ ಕಳ್ಳನ ಪತ್ತೆಗಾಗಿ ಮನವಿ ಮಾಡಿದರು. `ತಮ್ಮ ಅಡಿಕೆ ಮೂಟೆಯನ್ನು ಹುಡುಕಿಕೊಡಿ’ ಎಂದು ದೂರು ನೀಡಿದರು. ಪ್ರಕರಣ ದಾಖಲಿಸಿದ ಪೊಲೀಸರು ಕಳ್ಳರ ಹುಡುಕಾಟ ನಡೆಸಿದ್ದಾರೆ.

ಕಿರಾಣಿ ವ್ಯಾಪಾರಿಗೆ ನಷ್ಟ!
ದಾಂಡೇಲಿಯ ಕಿರಾಣಿ ವ್ಯಾಪಾರಿ ಇರ್ಪಾನ್ ಶೇಖ್ ಅವರ ಅಂಗಡಿಯಲ್ಲಿ ಕಳ್ಳತನವಾಗಿದೆ. ಹಣ, ಮೊಬೈಲನ್ನು ಕಳ್ಳರು ದೋಚಿದ್ದು, ಇರ್ಪಾನ್ ಶೇಖ್ ಅವರು 35 ಸಾವಿರ ರೂ ನಷ್ಟ ಅನುಭವಿಸಿದ್ದಾರೆ.

ದಾಂಡೇಲಿಯ ಬೊಮ್ಮನಹಳ್ಳಿಯ ಇರ್ಪಾನ್ ಶೇಖ್ ಅವರು ಅಂಬಿಕಾನಗರದ ಬಳಿ ಕಿರಾಣಿ ಅಂಗಡಿ ನಡೆಸುತ್ತಿದ್ದರು. ಇದರ ಜೊತೆ ಅವರು ಬ್ಯಾಂಕ್ ಪ್ರತಿನಿಧಿಯಾಗಿಯೂ ಕೆಲಸ ಮಾಡುತ್ತಿದ್ದರು. ಸೆಪ್ಟೆಂಬರ್ 8ರ ರಾತ್ರಿ ಅವರ ಅಂಗಡಿಗೆ ನುಗ್ಗಿದ ಕಳ್ಳರು ಅಲ್ಲಿದ್ದ ಹಣ, ಮೊಬೈಲ್ ದೋಚಿದ್ದಾರೆ. ಕಿರಾಣಿ ಅಂಗಡಿ ಹಿಂದಿನ ಬಾಗಿಲ ಕೀಲಿ ಒಡೆದ ಕಳ್ಳರು ಗಲ್ಲಾ ಪೆಟ್ಟಿಗೆಯಲ್ಲಿದ್ದ 1450ರೂ ಹಾಗೂ ಬ್ಯಾಗಿನಲ್ಲಿದ್ದ 13 ಸಾವಿರ ರೂ ಎಗರಿಸಿದ್ದಾರೆ. ಇದರೊಂದಿಗೆ 8 ಸಾವಿರ ರೂ ಮೌಲ್ಯದ ಮೊಬೈಲನ್ನು ಅಪಹರಿಸಿದ್ದಾರೆ. ಈ ಬಗ್ಗೆ ಇರ್ಪಾನ್ ಅವರು ರಾಮನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

`ನಿಮ್ಮ ಆಸ್ತಿ ಸುರಕ್ಷತೆಗೆ ಸಿಸಿ ಕ್ಯಾಮರಾ ಅಳವಡಿಸಿ’

 

ADVERTISEMENT

Discussion about this post

Previous Post

ಪರದೇಶೀ ಕೆಲಸ: ಕಾಸುಪಡೆದು ಕೈ ಕೊಟ್ಟ ಹೊನ್ನಾವರದ ಹುಡುಗಿ!

Next Post

ರಾಮತೀರ್ಥ: ಮೂಗು ಮುಚ್ಚಿಕೊಂಡು ಬನ್ನಿ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋