`ದೇವರ ತೆಂಗಿನಕಾಯಿ ಮನೆಯಲ್ಲಿದ್ದರೆ ಮಗನ ಅನಾರೋಗ್ಯ ದೂರವಾಗುತ್ತದೆ’ ಎಂದು ಭಾವಿಸಿದ ಜೊಯಿಡಾದ ದೊಂಡು ವರಕ ಅವರು ಆ ತೆಂಗಿನಕಾಯಿಪಡೆಯುವುದಕ್ಕಾಗಿ ತಮ್ಮನ ಪತ್ನಿಯನ್ನು ಕೊಂದಿದ್ದಾರೆ. ದೊಂಡು ವರಕ ಅವರು ಗುದ್ದಲಿಯಿಂದ ಹೊಡೆದ ರಭಸಕ್ಕೆ ಭಾಗ್ಯಶ್ರೀ ವರಕ ಸಾವನಪ್ಪಿದ್ದಾರೆ.
ಜೊಯಿಡಾದ ಆಮಶೇಷ-ಕೊಲೆಮಾಳ ಗ್ರಾಮದಲ್ಲಿ ಮೂಡನಂಬಿಕೆಯ ಪರಿಣಾಮ ಕೊಲೆ ನಡೆದಿದೆ. ದೊಂಡು ವರಕ ಅವರ ಮಗನಿಗೆ ಅನಾರೋಗ್ಯ ಕಾಡುತ್ತಿತ್ತು. ದೇವರ ತೆಂಗಿನಕಾಯಿ ಯಾರ ಮನೆಯಲ್ಲಿ ಇದ್ದವರಿಗೆ ಒಳ್ಳೆಯದಾಗುತ್ತದೆ ಎಂದು ಅವರು ನಂಬಿದ್ದರು. ಆ ತೆಂಗಿನಕಾಯಿ ಅವರ ತಮ್ಮ ಸೋನು ವರಕ್ ಅವರ ಮನೆಯಲ್ಲಿರುವುದೇ ಮಗನ ಅನಾರೋಗ್ಯಕ್ಕೆ ಕಾರಣ ಎಂದು ದೊಂಡು ವರಕ ಭಾವಿಸಿದ್ದರು.
ಆ ತೆಂಗಿನಕಾಯಿ ತಮಗೆ ಕೊಡುವಂತೆ ದೊಂಡು ವರಕ ದುಂಬಾಲು ಬಿದ್ದಿದ್ದರು. ಆದರೆ, ತಮ್ಮ ಅದನ್ನು ಕೊಟ್ಟಿರಲಿಲ್ಲ. ಇದೇ ವಿಷಯವಾಗಿ ಆ ಎರಡು ಕುಟುಂಬದ ನಡುವೆ ಜಗಳ ನಡೆಯುತ್ತಿತ್ತು. ಗುರುವಾರ ಸೋನು ವರಕ್ ಅವರು ಮನೆಯಲ್ಲಿರಲಿಲ್ಲ. ಆ ವೇಳೆ ದೊಂಡು ವರಕ್ ಗಲಾಟೆ ಶುರು ಮಾಡಿದ್ದು, ತೆಂಗಿನಕಾಯಿ ಕೊಡದ ಕಾರಣ ಸೋನು ವರಕ್ ಅವರ ಪತ್ನಿ ಭಾಗ್ಯಶ್ರೀ ವರಕ ಅವರಿಗೆ ಗುದ್ದಲಿಯಿಂದ ಹೊಡೆದರು.
ಪರಿಣಾಮ ಅವರು ಅಲ್ಲಿಯೇ ಕೊನೆಯುಸಿರೆಳೆದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಆರೋಪಿಯ ಹುಡುಕಾಟ ನಡೆಸಿದ್ದಾರೆ.
Discussion about this post