ಬೆಂಗಳೂರು :
ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಟೂರ್ನಿ ಆರಂಭಕ್ಕೂ ಮೊದಲು ನಾವು ಭಾರತ ವಿರುದ್ಧ ಆಡಲ್ಲ ಬಹಿಷ್ಕಾರ ಎಂದಿತ್ತು. ಇದೇ ಮಾತು ನಂಬಿ ಬಾಂಗ್ಲಾದೇಶ ಕೂಡ ಕುಪ್ಪಳಿಸಿತ್ತು. ಕೊನೆಗೆ ಪಾಕಿಸ್ತಾನ ಎಂದಿನಂತೆ ವರಸೆ ಬದಲಿಸಿ ಭಾರತ ವಿರುದ್ದ ಪಂದ್ಯ ಆಡಿತು. ಆದರೆ ಕನಿಷ್ಠ ಹೋರಾಟ ಕೂಡ ನೀಡಿಲ್ಲ. ಭಾರತದ ಅಲ್ರೌಂಡರ್ ಪ್ರದರ್ಶನ ಮುಂದೆ ಪಾಕಿಸ್ತಾನ ಮತ್ತೆ ಸೋತು ಮಸಿಯಾಯಿತು. ಭಾರತ ನೀಡಿದ 176 ರನ್ ಟಾರ್ಗೆಟ್ ಚೇಸ್ ಮಾಡುವ ಪ್ರಯತ್ನ ಮಾಡಿದ ಪಾಕಿಸ್ತಾನ ರನ್ಗೆ ಆಲೌಟ್ ಆಯಿತು. ಭಾರತ 61 ರನ್ ಗೆಲುವು ದಾಖಲಿಸಿತು.
ಉಸ್ಮಾನ್ ಖಾನ್ ಹೋರಾಟ ಹೊರತುಪಡಿಸಿದರೆ ಪಾಕಿಸ್ತಾನ ತಂಡದಲ್ಲಿ ಯಾರೂ ಕೂಡ ಬ್ಯಾಟಿಂಗ್ ಹೋರಾಟ ನೀಡಲಿಲ್ಲ. ಯಾರಿಗೂ ಟೀಂ ಇಂಡಿಯಾ ಬೌಲರ್ ಅವಕಾಶವನ್ನೇ ನೀಡಲಿಲ್ಲ. ಕ್ರೀಸ್ಗೆ ಬಂದು ಹೋಗಲು ಕ್ರಿಕೆಟ್ ನಿಯಮದ ಪ್ರಕಾರ ಅವಕಾಶವಿತ್ತು. ಆದರೆ ಬ್ಯಾಟಿಂಗ್ ಮಾಡಲು, ಅಬ್ಬರಿಸಲು ಚಾನ್ಸೇ ಇರಲಿಲ್ಲ. ಅಷ್ಟರ ಮಟ್ಟಿಗೆ ಟೀಂ ಇಂಡಿಯಾ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ಪಾಕಿಸ್ತಾನ ತಂಡವನ್ನು ಕಟ್ಟಿ ಹಾಕಿತು. ಉಸ್ಮಾನ್ ಖಾನ್ ಹೋರಾಟ ಸಾಕಾಗಲಿಲ್ಲ. ಶದಬ್ ಖಾನ್ ಜೊತೆ ಸೇರಿ ಉಸ್ಮಾನ್ ಖಾನ್ 44 ರನ್ ಸಿಡಿಸಿ ಔಟಾದರು. ಬಳಿಕ ಪಾಕಿಸ್ತಾನ ಕೆಲ ಹೊತ್ತು ಅಲ್ಲೊಂದು ಇಲ್ಲೊಂದು ರನ್ ಸಿಡಿಸಿತು. 18 ಓವರ್ನಲ್ಲಿ 114 ರನ್ ಸಿಡಿಸಿ ಆಲೌಟ್ ಆಯಿತು. ಭಾರತ 61 ರನ್ ಭರ್ಜರಿ ಗೆಲುವು ಕಂಡಿತು.
