
ಜೋಯಿಡಾ :
ಜೋಯಿಡಾ ತಾಲೂಕಿನ ಅನಮೋಡ ಅಬಕಾರಿ ಚೆಕ್ ಪೋಸ್ಟ್ ಬಳಿ ಅಬಕಾರಿ ಪೋಲಿಸರು ಅಕ್ರಮವಾಗಿ ಗೋವಾ ಸರಾಯಿ ಸಾಗಿಸುತ್ತಿದ್ದ ಈಚರ್ ಪ್ರೋ ಲಾರಿ ಮತ್ತು ವ್ಯಕ್ತಿಯನ್ನು ಸೆರೆ ಹಿಡಿದ ಘಟನೆ ಇಂದು ಮಧ್ಯಾನ ನಡೆದಿದೆ.
ಅನಮೋಡ್ ತನಿಖಾ ಠಾಣೆಯಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದಾಗ ಬಂದಂತಹ ಖಚಿತ ಮಾಹಿತಿಯ ಮೇರೆಗೆ, ಈಚರ್ ಪ್ರೋ ಲಾರಿ ನೊಂದಣಿ ಸಂಖ್ಯೆ KA 01 AE 0704
ತಪಾಸಣೆ ಮಾಡಿದಾಗ ಅದರ ಕ್ಯಾಬಿನ್ ಒಳಗಡೆ 05 ರೆಟ್ಟಿನ ಪೆಟ್ಟಿಗೆಗಲ್ಲಿ 33.000 ಲೀಟರ್ ವಿಸ್ಕಿಯ ಬಾಟಲಿಗಳು ಹಾಗೂ ಒಂದು ರಟ್ಟಿನ್ ಪೆಟ್ಟಿಗೆಯ ಲ್ಲಿ 5.280 ಲೀಟರ್ ಬಿಯರ್ ಮತ್ತು ವಾಹನದ ಕ್ಯಾಬಿನ್ ಮೆಲ್ಬಾಗದಲ್ಲಿ ಪ್ಲಾಸ್ಟಿಕ್ ಚೀಲದ ಅಡಿಯಲ್ಲಿ ಮುಚ್ಚಿ ಅಕ್ರಮವಾಗಿ 12 ರಟ್ಟಿನ ಪೆಟ್ಟಿಗೆಗಳಲ್ಲಿ ಒಟ್ಟು 68.640 ಲೀಟರ್ ಬಿಯರನ್ನು ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿ ವಾಹನ ಹಾಗೂ ಮದ್ಯದ ಮತ್ತು ಬಿಯರ್ ಬಾಟಲಿಗಳ ಪೆಟ್ಟಿಗೆಗಳನ್ನು ಜಪ್ತುಪಡಿಸಿ ಆರೋಪಿಯಾದ ಮುಕೇಶಸಿಂಗ್ ತಂದೆ:ಬನ್ಸರೂಪಸಿಂಗ್ ವಾಸ :- ಸೇಮ್ರಾದಕೊಯಿರಾವುನ ಎಸ್ ಆರ್ ಎನ್ ತಾಲೂಕು:- ಗ್ಯಾನಪುರ್ ಜಿಲ್ಲೆ :- ರವಿದಾಸ್ ನಗರ್ ಬದೋಯಿ, ಉತ್ತರಪ್ರದೇಶ ರಾಜ್ಯ, ಈತನನ್ನು ದಸ್ತಗಿರ್ ಮಾಡಿ ಮೊಕದ್ದಮೆ ಯನ್ನು ದಾಖಲಿಸಿಕೊಳ್ಳಲಾಗಿದೆ. ಜಪ್ತುಪಡಿಸಿದ ವಾಹನದ ಅಂದಾಜು ಬೆಲೆ ರೂ.15 ಲಕ್ಷ ಗಳಾಗಿದ್ದು, ಮದ್ಯದ ಅಂದಾಜು ಬೆಲೆ ರೂ.2,50, 000/- ಗಳಾಗಿರುತ್ತವೆ.
ಅಬಕಾರಿ ಜಂಟಿ- ಆಯುಕ್ತರು (ಜಾರಿ ಮತ್ತು ತನಿಖೆ) ಮಂಗಳೂರು ವಿಭಾಗ ಮಂಗಳೂರು ರವರ ನಿರ್ದೇಶನ ಮತ್ತು ಅಬಕಾರಿ ಉಪ ಆಯುಕ್ತರು ಉತ್ತರಕನ್ನಡ ಜಿಲ್ಲೆ, ರವರ ಮಾರ್ಗದರ್ಶನ ಹಾಗೂ ಅಬಕಾರಿ ಉಪ ಅಧೀಕ್ಷಕರು ಉಪ ವಿಭಾಗ ಯಲ್ಲಾಪುರ ರವರ ಸೂಚನೆಯ ಮೇರೆಗೆ ರಸ್ತೆಗಾವಲು ಕಾರ್ಯಾಚರಣೆಯನ್ನು ಶ್ರೀ ಮಹೇಂದ್ರ ನಾಯ್ಕ್ . ಅಬಕಾರಿ ನಿರೀಕ್ಷಕರು ನಡೆಸಿದ್ದು, ಶ್ರೀ ಟಿ. ಬಿ. ಮಲ್ಲಣ್ಣವರ ಅಬಕಾರಿ ಉಪ ನಿರೀಕ್ಷಕರು ಮೊಕದ್ದಮೆ ದಾಖಲಿಸಿಕೊಂಡಿರುತ್ತಾರೆ. ವಾಹನ ತಪಾಸಣೆಯಲ್ಲಿ ಶ್ರೀ ಮಹಾಂತೇಶ್ ಹೊನ್ನೂರ್ ,ಶ್ರೀ ರವಿ ಸಂಕಣ್ಣವರ ,ಮತ್ತು ಶ್ರೀ ಬಸವರಾಜ್ ಗಡ್ಡೆನ್ನವರ ,ಹಾಗೂ ಸದಾಶಿವ ರಾಠೋಡ್ ಪಾಲ್ಗೊಂಡಿದ್ದರು.