ಕಾರವಾರ:
ತಾಲೂಕಿನ ಬಿಣಗಾದ ಗ್ರಾಸಿಮ್ ಇಂಡಸ್ಟ್ರಿಯ ಪ್ಲಾಂಟ್ ಒಂದರಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಅನಿಲ ಸೋರಿಕೆಯಿಂದ ಪ್ಲಾಂಟ್ ಆಪರೇಟರ್ ಕಾರ್ಮಿನೋರ್ವ ಮೃತಪಟ್ಟಿದ್ದಾನೆ.
ಕಾರವಾರ ಬೈತಖೋಲ ಮೂಲದ ನಾಗರಾಜ ವಿಷ್ಣು ಅವರ್ಸೇಕರ (41) ಮೃತ ಕಾರ್ಮಿಕ.
ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗ 11.30ರ ಸುಮಾರಿಗೆ ಬಾಯ್ಲರ್ನಿಂದ ಕ್ಲೋರಿನ್ ಅನಿಲ ಸೋರಿಕೆಯಾಗಿದೆ. ಈ ವೇಳೆ ಸ್ಥಳದಲ್ಲಿಯೇ ಇದ್ದ ನಾಗರಾಜ ಅವರು ಅನಿಲ ಸೋರಿಕೆಯಿಂದ ಕುಸಿದು ಬಿದ್ದಿದ್ದಾರೆ. ಅವರೊಂದಿಗಿದ್ದ ಉಳಿದ ಕಾರ್ಮಿಕರು ಘಟಕದಿಂದ ಹೊ ಬಂದಿದ್ದಾರೆ. ಬಳಿಕ ತಕ್ಷಣ ನಾಗರಾಜ ಅವರಿಗೆ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಚಿಕಿತ್ಸೆ ನೀಡಿದ ವೈದ್ಯರು ಕಾರ್ಮಿಕನು ಮೃತಪಟ್ಟ ಬಗ್ಗೆ ತಿಳಿಸಿದ್ದಾರೆ.
ಈ ಕುರಿತು ಮೃತರ ಸಂಬಂಧಿಯೋರ್ವರು ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ನಾಗರಾಜ ಅವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮರಣದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.