
ಕಾರವಾರ:
ರಾಜ್ಯದಲ್ಲಿ ಆಡಳಿತದಲ್ಲಿ ಇರುವ ಕಾಂಗ್ರೆಸ್ ಸರಕಾರವು ಜನ ವಿರೋಧಿಯಾಗಿದ್ದು, ಆಡಳಿತವನ್ನು ಹಣ ಗಳಿಸಲು ಬಳಸಿಕೊಳ್ಳುತ್ತಿದೆ ಎಂದು
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಮಾತನಾಡಿದ ಅವರು,
ರಾಜ್ಯ ಸರಕಾರದ ಹಗರಣಗಳ ವಿರುದ್ದ ವಿರೋಧ ಪಕ್ಷ ಬಿಜೆಪಿ ಹೋರಾಟ ಮಾಡುತ್ತಲೇ ಇದೆ. ಆದರೆ ಅವರು ಎಚ್ಚೆತ್ತುಕೊಳ್ಳದೇ ಅರಾಜಕತೆ ಮುಂದುವರೆಸಿದ್ದಾರೆ. ಗುತ್ತಿಗೆದಾರರು, ಅಧಿಕಾರಿಗಳು ಮಂತ್ರಿಗಳ ಹೆಸರು ಹೇಳಿ ಸಾಯುತ್ತಿದ್ದು ರಾಜ್ಯದಲ್ಲಿ ಅರಾಜಕತೆ ಸೃಷ್ಠಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಾನು ಎಷ್ಟು ದಿನ ಆಡಳಿತ ನಡೆಸುತ್ತೇನೆ ಎನ್ನುವ ಚಿಂತನೆಯಲ್ಲಿದ್ದರೆ ಡಿ.ಕೆ ಶಿವಕುಮಾರ ಅವರಿಗೆ ಆಡಳಿತದ ಬಗ್ಗೆ ಆಸಕ್ತಿ ಇಲ್ಲ. ಸಚಿವರ ಮೇಲೆ ದೂರುಗಳದ್ದರು ಯಾರು ಕ್ರಮ ಕೈಗೊಳ್ಳುತ್ತಿಲ್ಲ ಎಂದರು.
ಗ್ಯಾರಂಟಿ ಹೆಸರಿನಲ್ಲಿ ರಾಜ್ಯವನ್ನು ದಿವಾಳಿ ಮಾಡುತ್ತಿದ್ದಾರೆ. ಜನರಿಂದ ಹಣ ಸುಳಿಗೆ ಮಾಡುತ್ತಿದ್ದು ಅಬಕಾರಿ, ಬಸ್, ವಿದ್ಯುತ್ ದರ ಹೆಚ್ಚಿಸಿದ್ದಾರೆ. ಸಬ್ ರಿಜಿಸ್ಟರ್ ಇಲಾಖೆಯಲ್ಲಿ ಬಾಂಡ್ ಗಳು ದುಬಾರಿಯಾಗಿದೆ. ವಾಹನ ತೆರಿಗೆ ಹೆಚ್ಚಿಗೆ ಮಾಡಿದ್ದಾರೆ. ನೀರಿನ ತೆರಿಗೆ ಹೆಚ್ಚು ಮಾಡಲು ಮುಂದಾಗಿದ್ದಾರೆ. ತಮ್ಮ ಅಪೇಕ್ಷೆ ಈಡೇರಿಸಿಕೊಳ್ಳಲು ಸಾಲ ಮಾಡುತ್ತಿದ್ದಾರೆ. ಸರಕಾರಿ ನೌಕರರಿಗೆ ವೇತನ ನೀಡಲು ಹಣ ಇಲ್ಲದಂತಾಗಿದೆ ಎಂದರು.