
ದಾಂಡೇಲಿ :
ದಾಂಡೇಲಿ ಪ್ರವಾಸಿಗರ ಅಚ್ಚುಮೆಚ್ಚಿನ ತಾಣಗಳಲ್ಲಿ ಒಂದು. ಇಲ್ಲಿನ ಪರಿಸರ, ಅಭಯಾರಣ್ಯ, ಜಲಸಾಹಸಿ ಚಟುವಟಿಕೆಗಳು ದೇಶ, ವಿದೇಶಿ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿವೆ. ಇದರ ಜೊತೆಗೆ, ಕಳೆದ ಎರಡು ವರ್ಷಗಳ ಹಿಂದೆ ಲೋಕಾರ್ಪಣೆಗೊಂಡಿರುವ ದೇಶದ ಎರಡನೇ ಹಾಗೂ ರಾಜ್ಯದ ಮೊದಲ ಮೊಸಳೆ ಪಾರ್ಕ ಇಗ ನಿರ್ವಹಣೆವಿಲ್ಲದೆ ಸೊರಗುತ್ತಿದೆ.ನಗರದ ಹಾಲಮಡ್ಡಿ ಗ್ರಾಮದಲ್ಲಿ ಕಾಳಿ ನದಿಯ ನೀರಿನಲ್ಲಿ ಸೇತುವೆಯನ್ನು ಕಟ್ಟಿದ್ದಾರೆ. ಇದರಿಂದ ಪ್ರವಾಸಿಗರು ಸೇತುವೆಯ ಮೇಲೆ ನಿಂತು ಮೊಸಳೆಗಳನ್ನು ವಿಕ್ಷಿಸಬಹುದಾಗಿದೆ. ಮೊಸಳೆ ವಿಕ್ಷಣೆಗೆ ದೊಡ್ಡವರಿಗೆ ೫೦ ರೂ ಶುಲ್ಕವಾದರೆ ಚಿಕ್ಕ ಮಕ್ಕಳಿಗೆ ೨೦ ರೂ ಇದೆ .ಟಿಕೆಟ ಪಡೆದು ಒಳಗೆ ಹೋದ ಪ್ರವಾಸಿಗರಿಗೆ ಅದೃಷ್ಟ ವಿದ್ದರೆ ಗುಂಪು ಗುಂಪಾಗಿ ಮೊಸಳೆಗಳು ಕಾಣ ಸಿಗುತ್ತವೆ.ಇಲ್ಲವಾದರೆ ಬೆರಳೆಣಿಕೆಯಷ್ಟು ಮೊಸಳೆಗಳು ನದಿಯ ದಡದಲ್ಲಿ ಗಿಡಗಂಟಿಗಳಲ್ಲಿರುತ್ತವೆ ಇದರಿಂದ ಪ್ರವಾಸಿಗರಿಗೆ ಮೊಸಳೆ ವಿಕ್ಷಿಸಲು ಹರ ಸಾಹಸ ಪಡುವಂತಾಗಿದೆ.ಮೊಸಳೆ ವಿಕ್ಷಣೆಗೆ ಬೈನಾಕೂಲರ ವ್ಯವಸ್ಥೆ ಮಾಡಬೇಕಾಗಿದೆ ಇದರಿಂದ ಪ್ರವಾಸಿಗರು ದೂರದಲ್ಲಿರುವ ಮೊಸಳೆಗಳನ್ನು ನೋಡಬಹುದು.ಮೊಸಳೆಯ ಜೀವನ ಕ್ರಮವನ್ನು ವಿವರಿಸಲು ಪಾರ್ಕ್ ನಲ್ಲಿ ಯಾವುದೇ ಗೈಡ್ ಇಲ್ಲದಿರುವುದು ಹಾಗೂ ಪ್ರವಾಸಿಗರಿಗೆ ಮೊಸಳೆ ಜೀವನದ ಕ್ರಮದ ಕುರಿತು ಯಾವುದೇ ಮಾಹಿತಿ ಫಲಕ ಇಲ್ಲದಿರುವುದು ಪ್ರವಾಸಿಗರಿಗೆ ಬೇಸರ ತಂದಿದೆ. ಪಾರ್ಕನ ವಿಕ್ಷಣಾ ಗೋಪುರದ ರಕ್ಷಣಾ ಗೋಡೆಗಳ ಮೇಲೆ ಮೊಸಳೆ ಜೀವನ ಕ್ರಮ, ಆಹಾರ ಕ್ರಮ, ಸಂತಾನೋತ್ಪತ್ತಿ, ವಾಸಸ್ಥಳದ ಹಾಗೂ ಪರಿಸರ ಕುರಿತು ಸಮಗ್ರ ಮಾಹಿತಿಯನ್ನು ಒಳಗೊಂಡಿ ಫಲಕವನ್ನು ಇಲ್ಲವೇ ಎಲ್ ಇ ಡಿ ಪರಿದೆ ಅಳವಡಿಸಬೇಕಾಗಿದೆ.
ಮೊಸಳೆ ಜೀವನ, ಪ್ರಜಾತಿ, ವಾಸ ಸ್ಥಾನ, ಸಂತತಿ ,ಜೀವನ ಕ್ರಮ ಮನುಷ್ಯರ ಪ್ರಾಣಿಗಳ ಸಂಘರ್ಷದ ಬಗ್ಗೆ ವಿಶೇಷ ಜಾಗೃತಿ ಮೂಡಿಸ ಬೇಕು ಎನ್ನುವುದು ಪರಿಸರ ಪ್ರೇಮಿಗಳ ಒತ್ತಾಯವಾಗಿದೆ.
ರಾಜ್ಯದ ಮೊದಲನೆ ಮೊಸಳೆ ಪಾರ್ಕನ್ನು ಇನ್ನಷ್ಟು ಹೆಚ್ಚಾಗಿ ಪ್ರವಾಸಿಗರಿಗೆ ಆಕರ್ಷಿಸುವ ನಿಟ್ಟಿನಲ್ಲಿ ನಿರ್ವಹಣೆ ಮಾಡುವ ಕುರಿತು ಪ್ರವಾಸೋದ್ಯಮ ಇಲಾಖೆ ಆಸಕ್ತಿ ತೋರಿಸುತ್ತಿಲ್ಲದಿರುವುದು ದುರಾದೃಷ್ಟವಾಗಿದೆ.