
ಶಿರಸಿ:
ಸಿದ್ದಾಪುರ ತಾಲೂಕಿನ ಪತ್ರಿಕಾ ರಂಗದ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದ ಶಿವಶಂಕರ ಕೋಲಸಿರ್ಸಿ ಇಂದು ಬೆಳಿಗ್ಗೆ ಹೃದಯಾಘಾತದಿಂದಾಗಿ ನಿಧನ ಹೊಂದಿದ್ದಾರೆ.
ಪತ್ರಿಕಾ ಕ್ಷೇತ್ರದಲ್ಲಿ ಚಟುವಟಿಕೆಯಿಂದಲೇ ಕೆಲಸಮಾಡಿದ್ದ ಶಿವಶಂಕರ ನಿಧನದ ಸುದ್ದಿ ಜಿಲ್ಲೆಯ ಪತ್ರಕರ್ತರಿಗೆ ಬರಸಿಡಿಲು ಬಡಿದ ಅನುಭವವಾಗಿದೆ. ಶಿವಶಂಕರ ಒರ್ವ ಉತ್ತಮ ಜನಸ್ನೇಹಿ ಪತ್ರಕರ್ತರಾಗಿ ಗುರುತಿಸಿಕೊಂಡಿದ್ದರು.ಅವರು TV9 ಪತ್ರಕರ್ತರಾಗಿ ಕಾರವಾರದಲ್ಲಿ ಕೆಲಸಮಾಡಿದ್ದರು. ನಂತರ ಅವರಿಗೆ ಅನಾರೋಗ್ಯ ಸಮಸ್ಯ ಕಾಡಿದ್ದರಿಂದ ಸಿದ್ದಾಪುರದಲ್ಲಿಯೇ ತಮ್ಮ ವೃತ್ತಿಯನ್ನು ಆರಂಭಿಸಿದ್ದರು. ಶಿವಶಂಕರ ನಿಧನದಿಂದ ಜಿಲ್ಲೆಯ ವಿವಿಧ ಪತ್ರಿಕಾ ಕ್ಷೇತ್ರಕ್ಕೆ ತಂಬಲಾರದ ಹಾನಿ ಸಂಭವಿಸಿದೆ ಎಂದು ಪತ್ರಕರ್ತ ಜೆ ಆರ್ ಸಂತೋಷಕುಮಾರ ತಿಳಿಸಿದ್ದಾರೆ.