ಶಿರಸಿ: ಹಿತ್ಲಗದ್ದೆ ಬಚಗಾಂವ ಗ್ರಾಮದ ಮಲ್ಲಿಕಾರ್ಜುನ ಗೌಡ ಅವರ ಹೊಲಕ್ಕೆ ಸಂತೋಷ ನಾಯ್ಕ ಹಾಗೂ ರಫಿಕ್ ಎಂಬಾತರು ಲಾರಿ ನುಗ್ಗಿಸಿದ್ದು, ಅವರ ಬೇಲಿಯನ್ನು ಹಾಳು ತೆಗೆದಿದ್ದಾರೆ.
`ಜುಲೈ 30ರಂದು ಹಿತ್ಲಗದ್ದೆಯ ಸಂತೋಷ ನಾಯ್ಕ (35) ಲಾರಿ ಚಾಲಕ ರಫಿಕ್ ಎಂಬಾತರ ಜೊತೆ ಆಗಮಿಸಿ ಹೋಲದ ಬೇಲಿ ಮುರಿದಿದ್ದಾರೆ. ಇದನ್ನು ಪ್ರಶ್ನಿಸಿದಾಗ ತನಗೆ ಬೈದಿದ್ದು, ಊರಿನವರು ಆಗಮಿಸಿ ಜಗಳ ಬಿಡಿಸಿದರು\’ ಎಂದು ಮಲ್ಲಿಕಾರ್ಜುನ ಗೌಡ ಪೊಲೀಸರಿಗೆ ದೂರಿದ್ದಾರೆ. ಬೇಲಿ ಮುರಿದಿದ್ದರಿಂದ ತನಗೆ 8 ಸಾವಿರ ರೂ ನಷ್ಟವಾಗಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಜೊತೆಗೆ ತನಗೆ ಜೀವ ಬೆದರಿಕೆಯಿದ್ದು, ರಕ್ಷಣೆ ನೀಡುವಂತೆ ಮಲ್ಲಿಕಾರ್ಜುನ ಗೌಡ ಮನವಿ ಮಾಡಿದ್ದಾರೆ.