`ಪ್ರಕೃತಿ ಕೊಡುವ ಸೂಚನೆಗಳನ್ನು ಅರ್ಥ ಮಾಡಿಕೊಂಡು ಜೀವನ ನಡೆಸಿದರೆ ಬದುಕು ಸುಲಭ\’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ. ಗೋಕರ್ಣದ ( Gokarna ) ಅಶೋಕೆ ಚಾತುರ್ಮಾಸದ ನಿಮಿತ್ತ ಭಾನುವಾರ ಪ್ರವಚನ ನೀಡಿದ ಅವರು `ಪ್ರಕೃತಿ ಕೊಡುವ ಸೂಚನೆಗಳನ್ನು ಪೂರ್ವಜರು ಕೃತಿರೂಪದಲ್ಲಿ ದಾಖಲಿಸಿದ್ದಾರೆ. ಆ ಅಪೂರ್ವ ಜ್ಞಾನ ಪರಂಪರೆ ಮುಂದುರೆಯಲು ಇದು ಸಹಕಾರಿಯಾಗಿದ್ದು, ಜ್ಯೋತಿಷ ಶಾಸ್ತ್ರವೆಂಬ ದೀಪದ ಮೂಲಕ ನಾವು ಬದುಕು ಅರ್ಥ ಮಾಡಿಕೊಳ್ಳಬಹುದು\’ ಎಂದು ಹೇಳಿದರು.
`ಪ್ರಶ್ನೆ, ತಾಂಬೂಲ, ಜಾತಕ, ಶಕುನಶಾಸ್ತ್ರ ಹೀಗೆ ವಿವಿಧ ಪ್ರಕಾರಗಳಿಂದ ಕಾಲನ ಭಾಷೆಯನ್ನು ತಿಳಿಯಬಹುದು. ನಮ್ಮ ಬದುಕನ್ನು ಅರ್ಥ ಮಾಡಿಕೊಳ್ಳಲು ಪ್ರಕೃತಿ ನಮಗೆ ಹಲವು ಮಾರ್ಗಗಳನ್ನು ತೋರಿಸಿಕೊಟ್ಟಿದೆ\’ ಎಂದವರು ಅಭಿಪ್ರಾಯಪಟ್ಟರು. `ಕಾಲ ನಮ್ಮೊಂದಿಗೆ ಮಾತನಾಡುತ್ತದೆ. ಜೌತಿಷದ ಮೂಲಕ ಕಾಲದ ಭಾಷೆಯನ್ನು ಅರ್ಥ ಮಾಡಿಕೊಳ್ಳಬಹುದು. ಖಗೋಳದ ಮೂಲಕ ನನ್ನ ಬದುಕನ್ನು ನಾವು ಅರ್ಥ ಮಾಡಿಕೊಳ್ಳಬಹುದು. ಖಗೋಳದಲ್ಲಿ ನಮ್ಮ ಸ್ಥಾನವನ್ನು ನಾವು ತಿಳಿದರೆ ಕಾಲನ ಬಾಷೆ ಸುಲಭವಾಗಿ ಅರ್ಥವಾಗುತ್ತದೆ\’ ಎಂದು ಹೇಳಿದರು.