ಸಿದ್ದಾಪುರ: ರಾಮಕೃಷ್ಣ ಹೆಗಡೆ ಚಿರಂತನದಿAದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಜನ್ಮದಿನೋತ್ಸವದ ಅಂಗವಾಗಿ ಚೇತನಾ ಪದವಿ ಪೂರ್ವ ಕಾಲೇಜಿನ ಸಭಾಭವನದಲ್ಲಿ ನಡೆದ `ಹೆಗಡೆ ಮತ್ತು ಜಾತ್ಯಾತೀತತೆ\’ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಯಲ್ಲಾಪುರದ ಶ್ರೇಯಾ ಅವರ ಕುಂಚದಲ್ಲಿ ಮೂಡಿಬಂದ ಹೆಗಡೆಯವರ ಭಾವಚಿತ್ರ ಗಮನಸೆಳೆಯಿತು.
ನಂತರ ಖ್ಯಾತ ಸಾಹಿತಿ ಮಹಾಬಲಮೂರ್ತಿ ಕೊಡ್ಲಕೆರೆ ಮಾತನಾಡಿ `ಸೋಲನ್ನು ಗೆಲುವಿನ ಶಕ್ತಿಯನ್ನಾಗಿ ಪರಿವರ್ತಿಸುವ ಶಕ್ತಿ ರಾಮಕೃಷ್ಣ ಹೆಗಡೆಯವರಿಗಿತ್ತು. ಹೆಗಡೆಯವರು ರಾಜಕೀಯದಲ್ಲಿ ಪ್ರಭಾವಿಗಳಾಗಿದ್ದಾಗ ವಿವಿಧ ರಂಗದಲ್ಲಿದ್ದ, ವಿವಿಧ ಧರ್ಮಗಳ, ಜಾತಿಯ ಮತ್ತು ವೈಚಾರಿಕತೆಯ ಪ್ರತಿಭೆಗಳನ್ನು ರಾಜಕೀಯಕ್ಕೆ ಪರಿಚಯಿಸಿದವರು. ಹೆಗಡೆಯವರ ವೈಚಾರಿಕತೆ, ಆಡಳಿತ ವೈಖರಿ ಇಂದಿಗೂ ಜನಮಾನಸದಲ್ಲಿ ಎಷ್ಟು ಪ್ರಭಾವ ಬೀರಿದೆ ಎಂದರೆ ಇಂದಿಗೂ ರಾಜಕೀಯ ವಿಶ್ಲೇಷಣೆಗಳನ್ನು ಹೆಗಡೆಯವರ ವೈಚಾರಿಕತೆಯೊಂದಿಗೆ ತುಲನೆ ಮಾಡಿ ನೋಡಲಾಗಿತ್ತದೆ. ಹೆಗಡೆಯವರು ಜಾತ್ಯಾತೀತತೆಯನ್ನು ತಮ್ಮ ಅಂತರAಗದ ಶಕ್ತಿಯನ್ನಾಗಿರಿಸಿದ್ದರು\’ ಎಂದು ಸ್ಮರಿಸಿದರು.
ಈ ವೇಳೆ ಹೆಗಡೆಯವರ ಅಭಿಮಾನಿಗಳಾದ ಜಿ.ಟಿ ಹೆಗಡೆ ತಟ್ಟಿಸರ ಮತ್ತು ದೇವಿದಾಸ ಶೇಟ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ರಾಮಕೃಷ್ಣ ಹೆಗಡೆ ಚಿರಂತನದ ಅಧ್ಯಕ್ಷ ಶಶಿಭೂಷಣ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.
S News Digitel
ರೇಡಿಯೋ ಮಹತ್ವ ಸಾರಿದ ಯಕ್ಷಗಾನ ಅರ್ಥದಾರಿ
ಯಲ್ಲಾಪುರ: `ರೇಡಿಯೋ ಕೇಳುಗರ ಸಂಖ್ಯೆ ಈಗಲು ಕಡಿಮೆ ಆಗಿಲ್ಲ ಎನ್ನುವುದಕ್ಕೆ ಕೇಂದ್ರ ಸರ್ಕಾರ ಹೊಸ ಆಕಾಶವಾಣಿ ಕೇಂದ್ರಗಳ ಸ್ಥಾಪನೆಗೆ ಒಪ್ಪಿಗೆ ನೀಡಿರುವುದು ಒಂದು ಉದಾಹರಣೆ. ಜನ ಜೀವನಕ್ಕೆ ಪ್ರಸ್ತುತ ವಿಷಯಗಳನ್ನು ನೀಡಿದಾಗ ಅದನ್ನು ಕೇಳುಗರು ಖುಷಿಯಿಂದ ಸ್ವೀಕರಿಸುತ್ತಾರೆ\’ ಎಂದು ಆಕಾಶವಾಣಿ ನಿವೃತ್ತ ಅಧಿಕಾರಿಯೂ ಆಗಿರುವ ಯಕ್ಷಗಾನ ಅರ್ಥಧಾರಿ ದಿವಾಕರ ಹೆಗಡೆ ಕೆರೆಹೊಂಡ ಹೇಳಿದರು.
ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ `ರೇಡಿಯೋ: ಅಂದು ಇಂದು- ಮುಂದು\’ ವಿಷಯವಾಗಿ ಮಾತನಾಡಿದ ಅವರು `ಒಂದು ವಿಷಯವನ್ನು ಕೇವಲ ಮಾಹಿತಿಯಾಗಿಸದೇ ಸಂವೇದನೆಯಾಗಿ ರೂಪಿಸುವ ಸಾಮರ್ಥ್ಯ ರೇಡಿಯೋ ಮಾಧ್ಯಮಕ್ಕಿದೆ. ರೇಡಿಯೋದಲ್ಲಿ ಮಾತು, ರೂಪಕ ಮತ್ತು ಸಂಗೀತಗಳ ಮುಖಾಂತರ ಕೇಳುಗರನ್ನು ಪರಿಣಾಮಕಾರಿಯಾಗಿ ತಲುಪಬಹುದು\’ ಎಂದರು. `ಶೈಕ್ಷಣಿಕ, ಸಾಮುದಾಯಿಕ ವಿಚಾರಗಳ ಪ್ರಸಾರಕ್ಕೆ ರೆಡಿಯೋ ಉತ್ತಮ ವೇದಿಕೆ\’ ಎಂದರು.
ಉಪನ್ಯಾಸಕ ಬೀರಣ್ಣ ನಾಯಕ ಮೊಗಟಾ, ಮಿಡಿಯಾ ಸ್ಕೂಲ್ ಪ್ರಾಚಾರ್ಯ ನಾಗರಾಜ ಇಳೆಗುಂಡಿ ಇದ್ದರು. ಶೋಭಾ ಗೌಡ ಮತ್ತು ವಿದ್ಯಾ ಶೆಟ್ಟನಗೌಡ್ರ ಪ್ರಾರ್ಥಿಸಿದರು. ಮೇಘನಾ ಆಚಾರಿ ನಿರ್ವಹಿಸಿದರು. ನಾಗರಾಜ ಪಟಗಾರ ವಂದಿಸಿದರು.
S News Digitel
ಬ್ಯಾಂಕಿನಲ್ಲಿ ಹಲವು ಲೋಪ: ಗ್ರಾಹಕರ ಬೇಸರ
ದಾಂಡೇಲಿ: ನಗರದ SBI ಬ್ಯಾಂಕಿನ ಎಟಿಎಂ ಕೇಂದ್ರಗಳು ಸ್ಥಗಿತಗೊಂಡಿದ್ದು, ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಕೂಡಲೇ ಸರಿಪಡಿಸುವಂತೆ ಕರ್ನಾಟಕ ಅಹಿಂದ ರಕ್ಷಣಾ ಸಮಿತಿಯು ನಗರದ ಎಸ್.ಬಿ.ಐ ಬ್ಯಾಂಕಿನ ಶಾಖಾ ವ್ಯವಸ್ಥಾಪಕರಿಗೆ ಸಮಿತಿಯ ತಾಲೂಕು ಅಧ್ಯಕ್ಷರಾದ ಚಂದ್ರು ದೇವದಾನಂ ಆರ್ಯ ಮನವಿ ಸಲ್ಲಿಸಿದರು.
ದಾಂಡೇಲಿ ನಗರದಲ್ಲಿ SBI ಬ್ಯಾಂಕಿನ ಮೂರು ಎಟಿಎಂ ಕೇಂದ್ರಗಳಿದ್ದು, ಇದರಲ್ಲಿ ನಗರದ ಸಿವಿಲ್ ನ್ಯಾಯಾಲಯದ ಹತ್ತಿರವಿರುವ ಮತ್ತು ಕಾಗದ ಕಾರ್ಖಾನೆಯ ಬಂಗೂರನಗರದಲ್ಲಿರುವ ಎಟಿಎಂ ಕೇಂದ್ರಗಳು ಸ್ಥಗಿತಗೊಂಡಿದೆ. ಇದರಿಂದ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಮತ್ತು ಬ್ಯಾಂಕಿಗೆ ರಜೆ ಇರುವ ಸಂದರ್ಭದಲ್ಲಿ ತುರ್ತು ಹಣ ಬೇಕಾದಾಗ ಸಾಕಷ್ಟು ತೊಂದರೆಯಾಗುತ್ತಿದೆ. ಪ್ರವಾಸೋದ್ಯಮ ನಗರವಾಗಿರುವ ದಾಂಡೇಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದು, ಪ್ರವಾಸಿಗರಿಗೆ ಸಮಸ್ಯೆ ಹೆಚ್ಚಿದೆ ಎಂದವರು ವಿವರಿಸಿದರು.
S News Digitel