• Latest
Fight Man who left town caught after 35 years!

ಹೊಡೆದಾಟ: ಊರು ಬಿಟ್ಟು ಹೋದವ 35 ವರ್ಷದ ನಂತರ ಸಿಕ್ಕಿಬಿದ್ದ!

2 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Sunday, October 19, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಹೊಡೆದಾಟ: ಊರು ಬಿಟ್ಟು ಹೋದವ 35 ವರ್ಷದ ನಂತರ ಸಿಕ್ಕಿಬಿದ್ದ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
Fight Man who left town caught after 35 years!
ADVERTISEMENT

ಶಿರಸಿಯ ಐದು ರಸ್ತೆ ಬಳಿ 1990ರಲ್ಲಿ ನಡೆದ ಹೊಡೆದಾಟ ಪ್ರಕರಣವನ್ನು ಜಾಲಾಡಿದ ಪೊಲೀಸರು ದೆಹಲಿಯಲ್ಲಿ ಅಡಗಿದ್ದ ಆರೋಪಿಯನ್ನು ಇದೀಗ ಬಂಧಿಸಿದ್ದಾರೆ. 35 ವರ್ಷಗಳ ನಂತರ ಹಲ್ಲೆ ಮಾಡಿದ ಆರೋಪಿ ಸಿಕ್ಕಿ ಬಿದ್ದಿದ್ದು, ಪೊಲೀಸರು ಆತನನ್ನು ಜೈಲಿಗೆ ಕಳುಹಿಸಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

1990ರಲ್ಲಿ ಶಿರಸಿಯ ಐದು ರಸ್ತೆ ಬಳಿ ಹೊಡೆದಾಟ ನಡೆದಿತ್ತು. ಕುಮಟಾ ಅಗಸೆಬಾಗಿಲಿನ ದೀಪಕ ಭಂಡಾರಿ ಎಂಬಾತರು ದಿನಕರ ಶೆಟ್ಟಿ ಎಂಬಾತರ ಮೇಲೆ ಹಲ್ಲೆ ಮಾಡಿದ್ದರು. ಈ ಬಗ್ಗೆ ದಿನಕರ ಶೆಟ್ಟಿ ಅವರ ತಂದೆ ನಾರಾಯಣ ಶೆಟ್ಟಿ ಅವರು ಆ ದಿನವೇ ಪೊಲೀಸ್ ದೂರು ನೀಡಿದ್ದರು.

ADVERTISEMENT

ಪೊಲೀಸ್ ದೂರು ದಾಖಲಾದ ವಿಷಯ ಅರಿತು ದೀಪಕ ಭಂಡಾರಿ ಊರು ಬಿಟ್ಟು ಓಡಿದ್ದರು. ಪೊಲೀಸರು ದೀಪಕ ಭಂಡಾರಿ ಅವರನ್ನು ಹುಬ್ಬಳ್ಳಿ, ಮಂಗಳೂರು, ಬೆಂಗಳೂರು ಸೇರಿ ವಿವಿಧ ಕಡೆ ಹುಡುಕಿದ್ದರು. ವಿಶೇಷ ತಂಡ ರಚಿಸಿ ಹುಡುಕಿದರೂ ದೀಪಕ ಭಂಡಾರಿ ಸಿಕ್ಕಿರಲಿಲ್ಲ.

ದೀಪಕ ಭಂಡಾರಿ ನವದೆಹಲಿಯಲ್ಲಿ ವೇಷ ಮರೆಸಿಕೊಂಡು ಜೀವನ ನಡೆಸುತ್ತಿದ್ದರು. ಆ ದಿನ ನಡೆದಿದ್ದ ಹೊಡೆದಾಟ ಪ್ರಕರಣವನ್ನು ಎಲ್ಲರೂ ಮರೆತಿದ್ದರು. ಆದರೆ, ಪೊಲೀಸ್ ದಾಖಲೆಗಳಿಂದ ಆ ಪ್ರಕರಣ ಅಳಸಿರಲಿಲ್ಲ. 35 ವರ್ಷಗಳ ನಂತರ ದೀಪಕ ಭಂಡಾರಿ ನವದೆಹಲಿಯಿಂದ ದಾಂಡೇಲಿಗೆ ಬರುತ್ತಿದ್ದರು.

ಈ ಬಗ್ಗೆ ಅರಿತ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಜಗದೀಶ ನಾಯ್ಕ ಹಾಗೂ ಡಿವೈಎಸ್ಪಿ ಗೀತಾ ಪಾಟೀಲ ಅವರಿಗೆ ವಿಷಯ ಮುಟ್ಟಿಸಿದರು. ಕಾರವಾರದ ತಾಂತ್ರಿಕ ವಿಭಾಗದ ಉದಯ ಗುನಗಾ, ಬಬನ ಕದಂ ಸೇರಿ ದೀಪಕ ಭಂಡಾರಿ ಬರುವ ದಾರಿ ಪತ್ತೆ ಮಾಡಿದರು. ಶಿರಸಿ ಪಿಐ ಶಶಿಕಾಂತ ವರ್ಮಾ, ಪಿಎಸ್‌ಐ ನಾಗಪ್ಪ ಬಿ, ನಾರಾಯಣ ರಾಥೋಡ್ ಜೊತೆ ಸೇರಿ ಕಾರ್ಯಾಚರಣೆಗಿಳಿದರು.

ಪೊಲೀಸ್ ಸಿಬ್ಬಂದಿ ಹನುಮಂತ ಕಬಾಡಿ, ತುಕಾರಾಮ ಬಣಗಾರ, ರಾಮಯ್ಯ ಪೂಜಾರಿ, ಸದ್ದಾಂ ಹಸೆನ್, ಚನ್ನಬಸಪ್ಪ ಕ್ಯಾರಗಟ್ಟಿ ಹಾಗೂ ಹನುಮಂತ ಮಕಾಪುರ ಅವರು ಒಟ್ಟಾಗಿ ದೀಪಕ ಭಂಡಾರಿ ಅವರನ್ನು ವಶಕ್ಕೆಪಡೆದರು. 35 ವರ್ಷದ ಅವಧಿಯಲ್ಲಿ ದೀಪಕ ಭಂಡಾರಿ ಸಾಕಷ್ಟು ಬದಲಾಗಿದ್ದರು. ಆದರೂ, ಪೊಲೀಸರು ಅವರನ್ನು ಗುರುತಿಸಿ ಜೈಲಿಗೆ ಕಳುಹಿಸಿದರು.

ADVERTISEMENT

Discussion about this post

Previous Post

ಅಗ್ನಿ ಅವಘಡ: ತರಕಾರಿ ಅಂಗಡಿ ಭಸ್ಮ

Next Post

ನಿರುದ್ಯೋಗ: ವಿದೇಶಿ ಕೆಲಸ ಕೊಡಿಸುವುದಾಗಿ 33 ಜನರಿಗೆ ಮೋಸ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋