• Latest
ನಿರುದ್ಯೋಗ: ವಿದೇಶಿ ಕೆಲಸ ಕೊಡಿಸುವುದಾಗಿ 33 ಜನರಿಗೆ ಮೋಸ!

ನಿರುದ್ಯೋಗ: ವಿದೇಶಿ ಕೆಲಸ ಕೊಡಿಸುವುದಾಗಿ 33 ಜನರಿಗೆ ಮೋಸ!

2 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Sunday, October 19, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ನಿರುದ್ಯೋಗ: ವಿದೇಶಿ ಕೆಲಸ ಕೊಡಿಸುವುದಾಗಿ 33 ಜನರಿಗೆ ಮೋಸ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
ADVERTISEMENT

ಹೊನ್ನಾವರದ ಜಾಫರ್ ಹಾಗೂ ನೌಶಾದ್ ಜೊತೆ ಹೈದರಬಾದಿನ ಸುಜಾತಾ ಎಂಬಾತರು ಸೇರಿ 33 ಜನರಿಗೆ ವಂಚಿಸಿದ್ದಾರೆ. ವಿದೇಶದಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿ 52 ಲಕ್ಷ ರೂ ಹಣಪಡೆದು ಯಾಮಾರಿಸಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಕೇರಳದ ಬಿಚ್ಚು ಜಂತಿಲ್ ಅವರು ತಮಗಾದ ಅನ್ಯಾಯದ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ವಿವರವಾಗಿ ಹೇಳಿದ್ದಾರೆ. ಹೊನ್ನಾವರ ಹೆರೆಅಂಗಡಿಯಲ್ಲಿರವ ಜಾಫರ್ ಸಾಧಿಕ್ ಹುಸೇನ್ ಮುಕ್ತೆಸರ್ ಅವರು ಬಿಚ್ಚು ಜಂತಿಲ್ ಅವರಿಗೆ ಕುವೈತ್’ಲಿ ಪರಿಚಯವಾದರು. 2024ರ ಡಿಸೆಂಬರಿನಲ್ಲಿ ಸಿಕ್ಕ ಅವರು `ಕುವೈತ್’ನ ರಕ್ಷಣಾ ಇಲಾಖೆಯಲ್ಲಿ 48 ಉದ್ಯೋಗ ಖಾಲಿ ಇದೆ’ ಎಂದಿದ್ದರು. `ಅದಕ್ಕೆ ಅರ್ಹ ವ್ಯಕ್ತಿಗಳ ಹುಡುಕಾಟ ನಡೆದಿದ್ದು, ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸುವೆ’ ಎಂಬ ಮಾತು ಕೊಟ್ಟಿದ್ದರು.

ADVERTISEMENT

ಇದಕ್ಕೆ ಸಾಕ್ಷಿಯಾಗಿ ರಕ್ಷಣಾ ಇಲಾಖೆಯ ಪತ್ರವನ್ನು ಕಾಣಿಸಿದ್ದರು. ಅದನ್ನು ನಂಬಿದ ಬಿಚ್ಚು ಜಂತಿಲ್ ಅವರು ತಮ್ಮ ಸ್ನೇಹಿತ ನೌಶಾದ ಅಂಗೀಲತ್ ಜೊತೆ ಸೇರಿ ನಿರುದ್ಯೋಗಿಗಳನ್ನು ಭೇಟಿ ಮಾಡಿದ್ದರು. ಒಟ್ಟು 33 ಜನರಿಗೆ ಕೆಲಸ ಕೊಡಿಸುವಂತೆ ಬಿಚ್ಚು ಜಂತಿಲ್ ಅವರು ಜಾಫರ್ ಸಾಧಿಕ್ ಹುಸೇನ್ ಮುಕ್ತೆಸರ್ ಅವರಲ್ಲಿ ಮನವಿ ಮಾಡಿದ್ದರು. ಇದಕ್ಕಾಗಿ ಆ 33 ಜನರ ಪಾಸ್‌ಪೋರ್ಟ ದಾಖಲೆಗಳನ್ನು ಬಿಚ್ಚು ಜಂತಿಲ್ ಅವರು ಹೆರೆಅಂಗಡಿಗೆ ತಲುಪಿಸಿದ್ದರು.

ಅದಾದ ನಂತರ ಹೈದರಾಬಾದಿನಿಂದ ಸುಜಾತಾ ಜಮ್ಮಿ ಎಂಬಾತರು ಬಿಚ್ಚು ಚಂತಿಲ್ ಅವರಿಗೆ ಫೋನ್ ಮಾಡಿ, `ದಾಖಲೆಗಳನ್ನು ರಕ್ಷಣಾ ಇಲಾಖೆಗೆ ತಲುಪಿಸಲು ಹಣ ಕೊಡಬೇಕು’ ಎಂದಿದ್ದರು. ಈ ವೇಳೆ ಸುಜಾತಾ ಜುಮ್ಮಿ ಅವರಿಗೆ 2.82 ಲಕ್ಷ ರೂಪಾಯಿಯನ್ನು ಬಿಚ್ಚು ಜಂತಿಲ್ ಜಮಾ ಮಾಡಿದ್ದರು. `ವೀಸಾ ಬರಲು 3 ತಿಂಗಳು ಬೇಕು’ ಎಂದು ಸುಜಾತಾ ಅವರು ನಂಬಿಸಿದ್ದರು. ಆದರೆ, ಆ ಸಮಯ ಮೀರಿದರೂ ವೀಸಾ ಬಂದಿರಲಿಲ್ಲ.

ಈ ಬಗ್ಗೆ ಪ್ರಶ್ನಿಸಿದಾಗ 33 ಜನರಿಂದ ಹಣ ಸಂಗ್ರಹಿಸಿ ತಮ್ಮ ಖಾತೆಗೆ ಜಮಾ ಮಾಡುವಂತೆ ಸುಜಾತಾ ಅವರು ಹೇಳಿದ್ದು, ಅದರ ಪ್ರಕಾರ ಬಿಚ್ಚು ಜಂತಿಲ್ ಅವರು ಮತ್ತೆ ಹಣ ಜಮಾ ಮಾಡಿದ್ದರು. ನೌಷಾದ್ ಖ್ವಾಜಾ, ಸುಜಾತಾ ಜುಮ್ಮಿ ಹಾಗೂ ಜಾಫರ್ ಖಾತೆಗೆ ಸೇರಿ 52 ಲಕ್ಷ ರೂ ಜಮಾ ಮಾಡಿದರೂ ಆ 33 ಜನರಿಗೆ ಉದ್ಯೋಗ ಸಿಗಲಿಲ್ಲ. ಕೊನೆಗೆ ತಮ್ಮ ಜೊತೆ 33 ಜನರು ಮೋಸ ಹೋಗಿರುವುದನ್ನು ಅರಿತು ಬಿಚ್ಚು ಜಂತಿಲ್ ಅವರು ಪೊಲೀಸ್ ದೂರು ನೀಡಿದರು.

`ಕನಸಿನ ಉದ್ಯೋಗಕ್ಕೆ ಕಾಸು ಕೊಡಬೇಡಿ’

ADVERTISEMENT

Discussion about this post

Previous Post

ಹೊಡೆದಾಟ: ಊರು ಬಿಟ್ಟು ಹೋದವ 35 ವರ್ಷದ ನಂತರ ಸಿಕ್ಕಿಬಿದ್ದ!

Next Post

ಮಹಿಳೆಯನ್ನು ಅರ್ದ ದಾರಿಗೆ ಬಿಟ್ಟು ಹೋದ ಬಿಸಗೋಡು ಬಸ್ಸು!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋