• Latest
ಮಹಿಳೆಯನ್ನು ಅರ್ದ ದಾರಿಗೆ ಬಿಟ್ಟು ಹೋದ ಬಿಸಗೋಡು ಬಸ್ಸು!

ಮಹಿಳೆಯನ್ನು ಅರ್ದ ದಾರಿಗೆ ಬಿಟ್ಟು ಹೋದ ಬಿಸಗೋಡು ಬಸ್ಸು!

2 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Sunday, October 19, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಮಹಿಳೆಯನ್ನು ಅರ್ದ ದಾರಿಗೆ ಬಿಟ್ಟು ಹೋದ ಬಿಸಗೋಡು ಬಸ್ಸು!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
ADVERTISEMENT

ರಾಜ್ಯ ಸರ್ಕಾರ ಮಹಿಳೆಯರಿಗೆ ಶಕ್ತಿ ಯೋಜನೆ ಅಡಿ ಉಚಿತ ಬಸ್ ಪ್ರಯಾಣ ಕಲ್ಪಿಸಿದರೂ ಯಲ್ಲಾಪುರದ ಬಿಸಗೋಡು ಭಾಗದವರಿಗೆ ಅದರಿಂದ ಪ್ರಯೋಜನವಾಗುತ್ತಿಲ್ಲ. ಕಾರಣ, ಆ ಊರಿಗೆ ಸಮಯಕ್ಕೆ ಸರಿಯಾಗಿ ಎಲ್ಲಾ ದಿನ ಬಸ್ಸೇ ಹೋಗುತ್ತಿಲ್ಲ!

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಪ್ರತಿ ದಿನ ಮಧ್ಯಾಹ್ನ 3 ಗಂಟೆಗೆ ಯಲ್ಲಾಪುರದಿಂದ ಬಳಗಾರಿಗೆ ಸರ್ಕಾರಿ ಬಸ್ ಸೇವೆ ಇದೆ. ಆದರೆ, ಈ ಬಸ್ಸು ವಾರಕ್ಕೆ ಮೂರು ದಿನ ಮಾತ್ರ ಬಿಸಗೋಡು ಪ್ರವೇಶಿಸುತ್ತದೆ. ಉಳಿದ ದಿನ ಬಿಸಗೋಡಿನ ಪ್ರಯಾಣಿಕರನ್ನು ಅರ್ದ ದಾರಿಗೆ ಬಿಡಲಾಗುತ್ತದೆ. ಸೋಮವಾರ ಸಹ ಮಹಿಳೆಯೊಬ್ಬರನ್ನು ಬಸ್ಸಿನ ಸಿಬ್ಬಂದಿ ಅರ್ದ ದಾರಿಗೆ ಇಳಿಸಿ ಮುಂದೆ ಹೋಗಿದ್ದಾರೆ. ನಂತರ ಅವರು ಕಾಡು ದಾರಿಯಲ್ಲಿ ಒಂಟಿಯಾಗಿ ಸಂಚರಿಸಿ ಮನೆ ಸೇರಿದ್ದಾರೆ.

ADVERTISEMENT

ಈ ಬಸ್ಸು ಬಿಸಗೋಡಿಗೆ ಹೋಗದ ಕಾರಣ ಅಲ್ಲಿನ ಶಾಲಾ ಮಕ್ಕಳು ಸಮಸ್ಯೆ ಅನುಭವಿಸುತ್ತಿದ್ದಾರೆ. `ಯಾವ ದಿನ ಬಸ್ಸು ಊರಿಗೆ ಬರುತ್ತದೆ. ಯಾವ ದಿನ ಊರಿಗೆ ಬರುವುದಿಲ್ಲ’ ಎಂದು ನಿರ್ಧರಿಸುವುದೇ ಆ ಊರಿನವರಿಗೆ ಕಷ್ಟವಾಗಿದೆ. `ಕಳೆದ ವಾರ ಸಹ ಬಳಗಾರದಿಂದ ಹೊರಟ ಬಸ್ಸು ಬಿಸಗೋಡು ಪ್ರವೇಶಿಸದೇ ಯಲ್ಲಾಪುರದ ಕಡೆ ಸಾಗುತ್ತಿತ್ತು. ಆ ದಿನ ಶಾಲಾ ಶಿಕ್ಷಕರು ಹಾಗೂ ಊರಿನ ಜನ ಬಸ್ಸನ್ನು ಆನಗೋಡದಲ್ಲಿ ಅಡ್ಡಗಟ್ಟಿ ಮರಳಿ ಬಿಸಗೋಡಿಗೆ ಬರುವಂತೆ ಮಾಡಿದೆವು. ಈ ದಿನ ಮತ್ತೆ ಬಸ್ಸು ಬಿಸಗೋಡು ಪ್ರವೇಶಿಸದೇ ಹಾಗೇ ಯಲ್ಲಾಪುರಕ್ಕೆ ಹೋಗಿದೆ. ಇದರಿಂದ ಅನೇಕರಿಗೆ ಸಮಸ್ಯೆ ಆಗಿದೆ’ ಎಂದು ಅಲ್ಲಿನ ಸುರೇಶ ಪಟಗಾರ್ ಅವರು ವಿವರಿಸಿದರು.

`ಬಿಸಗೋಡಿನಲ್ಲಿ ಶೈಕ್ಷಣಿಕ ವಾತಾವರಣ ಉತ್ತಮವಾಗಿರುವುದರಿಂದ ಆನಗೋಡು ಸೇರಿ ಅನೇಕ ಭಾಗದ ಮಕ್ಕಳು ಅಲ್ಲಿಗೆ ಬರುತ್ತಾರೆ. ಆದರೆ, ಬಸ್ ವ್ಯವಸ್ಥೆ ಸರಿಯಾಗಿಲ್ಲದ ಕಾರಣ ಅವರೆಲ್ಲರೂ ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಡಿಪೋ ವ್ಯವಸ್ಥಾಪಕರಿಗೆ ತಿಳಿಸಿದರೂ ಪ್ರಯೋಜನ ಆಗಿಲ್ಲ’ ಎಂದು ಅಲ್ಲಿನವರು ನೋವು ತೋಡಿಕೊಂಡರು. `ಯಲ್ಲಾಪುರದಿಂದ ಬಿಸಗೋಡಿಗೆ ಬಂದು ಕಟ್ಟಿಗೆಗೆ ಹೋಗುವ ಬಸ್ಸಿನಿಂದ ಯಾವುದೇ ಸಮಸ್ಯೆ ಇಲ್ಲ. ಯಲ್ಲಾಪುರದಿಂದ ಬಳಗಾರಿಗೆ ಬಂದು ಅಲ್ಲಿಂದ ಬಿಸಗೋಡು ಪ್ರವೇಶಿಸಿ ಮರಳಿ ಯಲ್ಲಾಪುರಕ್ಕೆ ಹೋಗುವ ಬಸ್ಸು ಬಿಸಗೋಡು ಪ್ರವೇಶಿಸದೇ ನೇರವಾಗಿ ಯಲ್ಲಾಪುರಕ್ಕೆ ಹೋಗುತ್ತಿರುವುದು ಸಮಸ್ಯೆ’ ಎಂದು ಪ್ರಯಾಣಿಕರು ವಿವರಿಸಿದರು.

ADVERTISEMENT

Discussion about this post

Previous Post

ನಿರುದ್ಯೋಗ: ವಿದೇಶಿ ಕೆಲಸ ಕೊಡಿಸುವುದಾಗಿ 33 ಜನರಿಗೆ ಮೋಸ!

Next Post

ಅಶುಚಿತ್ವ: ಸರ್ಕಾರದ ವಿರುದ್ಧ ಮಾನವ ಹಕ್ಕು ಆಯೋಗಕ್ಕೆ ದೂರು

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋