• Latest
A woman's Meena Mesha to give Pukkatte mutton The shop run by the widow was vandalized!

ಪುಕ್ಕಟ್ಟೆ ಮಟನ್ ನೀಡಲು ಮೀನಾಮೇಷ: ಮಹಿಳೆ ನಡೆಸುತ್ತಿದ್ದ ಅಂಗಡಿ ಧ್ವಂಸ!

1 month ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Thursday, October 23, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಪುಕ್ಕಟ್ಟೆ ಮಟನ್ ನೀಡಲು ಮೀನಾಮೇಷ: ಮಹಿಳೆ ನಡೆಸುತ್ತಿದ್ದ ಅಂಗಡಿ ಧ್ವಂಸ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
A woman's Meena Mesha to give Pukkatte mutton The shop run by the widow was vandalized!
ADVERTISEMENT

ಕಾರವಾರ ನಗರಸಭೆ ವ್ಯಾಪ್ತಿಯ ಬಿಣಗಾದಲ್ಲಿ ಶ್ವೇತಾ ಕಲಾಲ್ ಅವರು 30 ವರ್ಷದಿಂದ ಮಟನ್ ಅಂಗಡಿ ನಡೆಸುತ್ತಿದ್ದು, ನಗರಸಭೆ ಅಧಿಕಾರಿಗಳು ಏಕಾಏಕಿ ಅದನ್ನು ತೆರವು ಮಾಡಿದ್ದಾರೆ. ಹೀಗಾಗಿ ಶ್ವೇತಾ ಕಲಾಲ್ ಅವರು ನಗರಸಭೆ ಎದುರು ಮಟನ್ ಮಾರುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಜೊತೆಗೆ ತಮಗಾದ ಅನ್ಯಾಯದ ಬಗ್ಗೆ ಜನಶಕ್ತಿ ವೇದಿಕೆಯವರಿಗೆ ತಿಳಿಸಿ, ಜಿಲ್ಲಾಡಳಿತಕ್ಕೂ ಮನವಿ ಮಾಡಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಬಿಣಗಾ ಗ್ರಾಮದ ಪೋಟ್ಲವಾಡದಲ್ಲಿ ಶ್ವೇತಾ ಕಲಾಲ್ ಅವರ ಕುಟುಂಬದವರು 60 ವರ್ಷಗಳಿಂದ ಮಟನ್ ಮಾರುತ್ತಿದ್ದರು. 30 ವರ್ಷಗಳಿಂದ ಶ್ವೇತಾ ಕಲಾಲ್ ವ್ಯವಹಾರ ನೋಡಿಕೊಳ್ಳುತ್ತಿದ್ದರು. ಅಲ್ಲಿನ ಗೃಂಥಾಲಯದವರ ದೂರಿನ ಪ್ರಕಾರ ನಗರಸಭೆಯವರು ಮಟನ್ ಅಂಗಡಿ ತೆರವು ಮಾಡಿದರು. ಈ ಹಿನ್ನಲೆ ಊರಿನವರು ಸಹ ಶ್ವೇತಾ ಕಲಾಲ್ ಅವರ ಬೆಂಬಲಕ್ಕೆ ನಿಂತರು. ಗೃಂಥಾಲಯದವರ ಕಿತಾಪತಿ ಅರಿತ ಜನ `ನಮಗೆ ಆ ಗೃಂಥಾಲಯ ಬೇಡ. ಮಟನ್ ಅಂಗಡಿ ಅಲ್ಲಿಯೇ ಬೇಕು’ ಎಂದು ಜನ ಪಟ್ಟು ಹಿಡಿದರು. `ಗೃಂಥಾಲಯದಲ್ಲಿ ಕಾರ್ಯ ನಿರ್ವಹಿಸುವವರಿಗೆ ಪುಕ್ಕಟ್ಟೆ ಮಟನ್ ನೀಡದ ಕಾರಣ ತಮ್ಮ ವಿರುದ್ಧ ಕಾನೂನು ಕ್ರಮವಾಗಿದೆ’ ಎಂದವರು ಅಳಲು ತೋಡಿಕೊಂಡರು.

ADVERTISEMENT

ಗುರುವಾರ ಸ್ಥಳೀಯ ಗ್ರಾಮಸ್ಥರು ಮತ್ತು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಅವರೊಂದಿಗೆ ಸೇರಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದರು. ಶ್ವೇತಾ ಕಲಾಲ್ ಅವರು ತಹಸೀಲ್ದಾರ್ ನಿಶ್ಚಲ ನರೋನಾ ಅವರಿಗೆ ಮನವಿ ಸಲ್ಲಿಸಿದರು. `ಕುರಿ ಮಾಂಸ ಮಾರಾಟಕ್ಕೆ ನಗರಸಭೆಯಿಂದ ಅನುಮತಿ ಪಡೆಯಲಾಗಿದ್ದರೂ ಅದನ್ನು ತೆರವು ಮಾಡಲಾಗಿದೆ’ ಎಂದು ದೂರಿದರು. `ಮೂರು ವರ್ಷಗಳ ಹಿಂದೆ ಪತಿ ನಿಧನರಾದ ನಂತರ ಮೂವರು ಹೆಣ್ಣುಮಕ್ಕಳೊಂದಿಗೆ ಜೀವನ ಸಾಗಿಸಲು ಬೇರೆ ದಾರಿಯಿಲ್ಲದೇ ಅಂಗಡಿ ಮುನ್ನಡೆಸುತ್ತಿದ್ದೇನೆ. ಯಾವುದೇ ನೋಟಿಸ್ ನೀಡದೆ ನಗರಸಭೆ ಅಧಿಕಾರಿಗಳು ಏಕಾಏಕಿ ಬುಧವಾರ ಅಂಗಡಿಯನ್ನು ತೆರವುಗೊಳಿಸಿದ್ದಾರೆ’ ಎಂದು ವಿವರಿಸಿದರು.

‘ಶ್ವೇತಾ ತೀರಾ ಬಡತನದಲ್ಲಿ ಜೀವನ ಸಾಗಿಸುತ್ತಿರುವ ಮಹಿಳೆ. ಸಮೀಪದಲ್ಲೇ ಇರುವ ಗ್ರಂಥಾಲಯದಲ್ಲಿ ಕಾರ್ಯನಿರ್ವಹಿಸುವ ಮಹಿಳೆ ಮತ್ತವಳ ಪತಿಯು ನೀಡಿದ ತಪ್ಪು ಮಾಹಿತಿಯಿಂದಾಗಿ ಮಹಿಳೆಯ ಅಂಗಡಿಯನ್ನು ತೆರವುಗೊಳಿಸಲಾಗಿದೆ. ಕೂಡಲೇ ಜೀವನಾಧಾರವಾದ ಅಂಗಡಿಯನ್ನು ನಗರಸಭೆಯವರು ಪುನರ್ ನಿರ್ಮಿಸಿಕೊಡಬೇಕು’ ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಆಗ್ರಹಿಸಿದರು. ಗ್ರಾಮಸ್ಥರಾದ ಜ್ಯೋತಿ ಗಣಪತಿ ನಾಯ್ಕ, ಶ್ವೇತಾ ನಾಯ್ಕ, ರೇವತಿ ನಾಯ್ಕ, ಹಸೀನಾ ಅಣ್ಣೀಗೇರಿ ಸಹ ಶ್ವೇತಾ ಕಲಾಲ್ ಅವರ ಬೆಂಬಲಕ್ಕಿದ್ದರು.

ADVERTISEMENT

Discussion about this post

Previous Post

ಕೈ ಕೈ ಮಿಲಾಯಿಸಿಕೊಂಡವರಿoದ ರಕ್ತ ಕ್ರಾಂತಿ!

Next Post

ಕವಳಕ್ಕೆ ಎಲೆ ತರಲು ಹೋದವ ಬಾವಿಗೆ ಬಿದ್ದ: ಅಲ್ಲಿಯೇ ಪ್ರಾಣ ಬಿಟ್ಟ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋