ದಾಂಡೇಲಿ:
ಆಶಯ ನುಡಿಗಳನ್ನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ಎನ್.ವಾಸರೆ ಅವರು ಈ ಬಾರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಡೆಯಬೇಕೆಂದು ಸಾಕಷ್ಟು ಅಡೆಯನ್ನು ತಂದು, ಸಮ್ಮೇಳನದ ಕೊನೆಯ ಎರಡು ದಿನ ನ್ಯಾಯಾಲಯದಲ್ಲೇ ದಿನ ಕಳೆಯುವಂತಹ ಸಂದಿಗ್ಧ ಪರಿಸ್ಥಿತಿಯನ್ನು ತರಲಾಯ್ತದಾದರೂ, ಅಂತಿಮವಾಗಿ ಕನ್ನಡ ಗೆದ್ದಿತು. ಈ ಗೆಲುವು ನನ್ನ ಗೆಲುವಲ್ಲ. ಇದು ಜಿಲ್ಲೆಯ ಕನ್ನಡಿಗರ ಗೆಲುವು, ಇದು ಕನ್ನಡದ ಗೆಲುವು. ಸಾಹಿತ್ಯ ಸಮ್ಮೇಳನವನ್ನು ನಡೆಸಲು ಅನುವು ಮಾಡಿಕೊಟ್ಟ ಘನ ನ್ಯಾಯಾಲಯಕ್ಕೆ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲೆಯ ಜನತೆಯ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುವೆ ಎಂದ ಅವರು ಕನ್ನಡದ ಕೆಲಸ, ಕನ್ನಡದ ಕಾರ್ಯಕ್ರಮ ಯಾರೇ ಮಾಡಿದರೂ ಅದನ್ನು ಗೌರವಿಸಬೇಕು, ಅದಕ್ಕೆ ಸ್ಪಂದಿಸಬೇಕು. ಅದು ಬಿಟ್ಟು ವೈಯಕ್ತಿಕ ದ್ವೇಷ ಸಾಧನೆಗಾಗಿ ಕನ್ನಡದ ಕೆಲಸಕ್ಕೆ ಯಾರೇ ಅಡ್ಡಿ ಮಾಡಿದರೂ ಅದನ್ನು ಸಮಾಜ ಗೌರವಿಸುವುದಿಲ್ಲ. ವಿಚಾರಣೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷರ ಕುಟಿಲ ಬುದ್ದಿಯ ಬಗ್ಗೆ ಮಾರ್ಮಿಕವಾಗಿ ಮಾತನಾಡಿದರು. ತಮ್ಮ ಮಾತಿನ ಸಂದರ್ಭದಲ್ಲಿ ಗದ್ಗತಿತರಾದ ವಾಸರೆಯವರು ಇಡೀ ಸಭೆಯನ್ನು ತನ್ನತ್ತ ಸೆಳೆದುಕೊಂಡರು. ಈ ಕ್ಷೇತ್ರ ಸತ್ಪುರುಷ ದಾಂಡೇಲಪ್ಪನ ಕ್ಷೇತ್ರ. ಶ್ರೀ ದಾಂಡೇಲಪ್ಪನ ಅನುಗ್ರಹದಿಂದ ಹಾಗೂ ಜಿಲ್ಲೆಯ ಸಮಸ್ತ ಕನ್ನಡಿಗರ ಸಹಕಾರದಿಂದ ನಿರೀಕ್ಷೆಗೂ ಮೀರಿ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.
