
ಕಾರವಾರ :
ಜಿಲ್ಲೆಯ ಪಶ್ಚಿಮ ಘಟ್ಟದ ಕೆಲವೆಡೆ ಮೂರು ಸೆಕೆಂಡ್ ಕಿಂತಲೂ ಹೆಚ್ಚಿನ ಭೂಕಂಪನದ ಅನುಭವವಾಗಿದೆ.
ಇಲ್ಲಿನ ಕುಮಟಾ -ಶಿರಸಿ ತಾಲೂಕು ಭಾಗದ ಘಟ್ಟ ಪ್ರದೇಶದಲ್ಲಿ ಭೂಮಿ ಕಂಪಿಸಿದ್ದು ಜನ ಒಂದುಕ್ಷಣ ಭಯಭೀತರಾಗಿದ್ದಾರೆ.
ಕುಮಟಾ ತಾಲೂಕಿನ ಪಶ್ಚಿಮ ಘಟ್ಟ ಪ್ರದೇಶದ ದೇವಿಮನೆ ಘಟ್ಟ ,ಶಿರಸಿ ತಾಲೂಕಿನ ಪಶ್ಚಿಮಘಟ್ಟ ಗ್ರಾಮವಾದ ರಾಗಿ ಹೊಸಳ್ಳಿ,ಕಸಗೆ, ಬಂಡಳ ಭಾಗದಲ್ಲಿ ಮೂರು ಸೆಕೆಂಡ್ ಗೂ ಅಧಿಕ ಭೂಮಿ ಕಂಪಿಸಿದೆ.
ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಹ ನಡೆಯುತ್ತಿದೆ. ಗುಡ್ಡ ಕೊರೆದು ರಸ್ತೆ ಮಾಡಲಾಗುತಿದ್ದು ಕಲ್ಲುಗಳನ್ನು ಸಿಡಿಸಿರಬಹುದು ಎಂದು ಊಹಿಸಲಾಗಿತ್ತು.
ಆದರೇ ಹಿಂದೂ ಮಹಾಸಾಗರದಲ್ಲಿ 10 ಕಿಲೋಮೀಟರ್ ಆಳದ ರಿಡ್ಜ್ ಮಧ್ಯದಲ್ಲಿ ಅಲ್ಪ ಮಟ್ಟದ ಭೂ ಕಂಪನವಾಗಿದೆ.ಇದರಿಂದಲೇ ಪಶ್ಚಿಮ ಘಟ್ಟ ಭಾಗದಲ್ಲೂ ಭೂಮಿ ಕಂಪಿಸಿರುವ ಸಾಧ್ಯತೆ ಇದೆ ಎಂದು ತಜ್ಞರು ಊಹಿಸಿದ್ದಾರೆ.
ಹಿಂದೂ ಮಹಾಸಾಗರದಲ್ಲಿ ಕಂಪಿಸಿದ ಭೂಮಿಯಿಂದ ಪಶ್ಚಿಮ ಘಟ್ಟ ಭಾಗದಲ್ಲಿ ಸಹ ಅದರ ಪರಿಣಾಮ ಕಾಣಿಸಿಕೊಂಡಿದ್ದು ಜನರನ್ನು ಒಂದುಕ್ಷಣ ಭಯಭೀತರನ್ನಾಗಿಸಿತ್ತು.