ಭಟ್ಕಳ.
ಹಂಪ್ ಗಮನಿಸದೆ ಒಮ್ಮೆಲೆ ಬೈಕ್ ಬ್ರೇಕ್ ಹಾಕಿ ನಿಯಂತ್ರಣ ತಪ್ಪಿ ಬೈಕ್ ಸಮೇತ ಬಿದ್ದು ಸವಾರ ಚಿಕಿತ್ಸೆ ಫಲಿಸದೇ ಸಾವನಪ್ಪಿರುವ ಘಟನೆ ಶಿರಾಲಿ ಚೆಕ್ ಪೋಸ್ಟ್ ಸಮೀಪ ನಡೆದಿದೆ.
ಮೃತ ಬೈಕ್ ಸವಾರನನ್ನು ರೂಪೇಶ ಗೋವಿಂದ ದೇವಾಡಿಗ ಜೋಗಿಮನೆ ಮುಂಡಳ್ಳಿ ನಿವಾಸಿ ಎಂದು ತಿಳಿದು ಬಂದಿದೆ.
ಶನಿವಾರ ಮುಂಜಾನೆ ಮುರ್ಡೇಶ್ವರ ಕಡೆಯಿಂದ ಭಟ್ಕಳ ಕಡೆಗೆ ಅತೀ ವೇಗವಾಗಿ ಅಜಾಗರೂಕತೆಯಿಂದ ಬೈಕ್ ಚಲಾಯಿಸಿಕೊಂಡು ಬಂದು ಹಂಪ್ ಗಮನಿಸದೇ ಒಮ್ಮೇಲೆ ಬ್ರೆಕ್ ಹಾಕಿದ ಸವಾರ ನಿಯಂತ್ರಣ ತಪ್ಪಿ ಬೈಕ್ ಸಮೇತ ಬಿದ್ದು ತಲೆಗೆ ಗಂಭೀರಗಾಯವಾಗಿತ್ತು. ಕೂಡಲೇ ಆಸ್ಪತ್ರೆಗೆ ಕರೆದೊಯ್ದದರು, ಚಿಕಿತ್ಸೆ ಫಲಿಸದೇ ಸವಾರ ಸಾವನ್ನಪ್ಪಿದ್ದಾನೆ.
ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಸುಬ್ರಾಯ ನಾರಾಯಣ ದೇವಾಡಿಗ ದೂರು ದಾಖಲಿಸಿದ್ದಾರೆ.