
ಜೋಯಿಡಾ:
ಜೋಯಿಡಾ-ಕಾರವಾರ ಹೆದ್ದಾರಿಯ ಕುಂಬಾರವಾಡದ ಉಳವಿ ಕ್ರಾಸ್ ಬಳಿ ಸವಾರನನಿಯಂತ್ರಣ ತಪ್ಪಿದ ಬೈಕ್ ಮರಕ್ಕೆ ಡಿಕ್ಕಿ ಹೊಡರದು ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆನಡೆದಿದೆ.
ಕಾರವಾರದ ಸಿದ್ದಾರ್ಥ್ ದೇವಕರ ಮೃತ ಸವಾರ. ಅಲ್ಲದೇ ಬೈಕಿನಲ್ಲಿದ್ದ ಕುಂಬಾರವಾಡದ ಆದರ್ಶ್ ರಾಮದಾಸ ಗಾವಡಾ ಮತ್ತು ಸಂಜಯ್ ನಾಯ್ಕ ಅವರಿಗೆ ಗಂಭೀರ ಗಾಯವಾಗಿದೆ.
ಗಾಯಾಳುಗಳನ್ನು ಜೋಯಿಡಾ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದಾರೆ. ರಸ್ತೆ ಮಧ್ಯೆ ಏಕಾಏಕಿ ಕಾಡುಕೋಣ ಬಂದಿರುವುದರಿಂದ ಅದನ್ನು ತಪ್ಪಿಸಲು ಹೋಗಿ ಬೈಕ್ ಮರಕ್ಕೆ ಡಿಕ್ಕಿಯಾಗಿದೆ ಎನ್ನಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.