• Latest
Village disaster PDO built a waste pit next to the school!

ಗ್ರಾ ಪಂ ಅವಾಂತರ: ಶಾಲೆ ಪಕ್ಕವೇ ತ್ಯಾಜ್ಯದ ಗುಂಡಿ ನಿರ್ಮಿಸಿದ ಪಿಡಿಓ!

4 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Monday, October 20, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಗ್ರಾ ಪಂ ಅವಾಂತರ: ಶಾಲೆ ಪಕ್ಕವೇ ತ್ಯಾಜ್ಯದ ಗುಂಡಿ ನಿರ್ಮಿಸಿದ ಪಿಡಿಓ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
Village disaster PDO built a waste pit next to the school!
ADVERTISEMENT

ಶಾಲಾ ಮಕ್ಕಳ ಬಗ್ಗೆ ಕಿಂಚಿತ್ತು ಕನಿಕರವಿಲ್ಲದ ಬಾಡ ಗ್ರಾ ಪಂ ಅಭಿವೃದ್ಧಿ ಅಧಿಕಾರಿ ಕಮಲಾ ಹರಿಕಂತ್ರ ಅವರು ಕುಮಟಾದ ಹುಬ್ಬಣಗೆರಿಯಲ್ಲಿ ಶಾಲೆ ಪಕ್ಕದಲ್ಲಿಯೇ ತ್ಯಾಜ್ಯ ಎಸೆಯುವ ಶೆಡ್ ನಿರ್ಮಿಸಿದ್ದಾರೆ. ಪರಿಣಾಮ ಇಡೀ ದಿನ ಶಾಲಾ ಮಕ್ಕಳು ದುರ್ವಾಸನೆಯಲ್ಲಿ ಕಾಲ ಕಳೆಯಬೇಕಾಗಿದೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಸರ್ಕಾರಿ ಶಾಲೆಗಳು ಮಕ್ಕಳ ಕೊರತೆ ಅನುಭವಿಸುತ್ತಿರುವ ದಿನದಲ್ಲಿಯೂ ಹುಬ್ಬಣಗೆರಿಯಲ್ಲಿ ಉತ್ತಮ ಶೈಕ್ಷಣಿಕ ವಾತಾವರಣವಿದೆ. ಅಲ್ಲಿರುವ ಅಂಗನವಾಡಿ ಹಾಗೂ ಶಾಲೆಯಲ್ಲಿ 140 ಮಕ್ಕಳು ಕಲಿಯುತ್ತಿದ್ದಾರೆ. ಆದರೆ, ಸಾರ್ವಜನಿಕ ಸಮಸ್ಯೆಗೆ ಕಿಂಚಿತ್ತು ಕಿಮ್ಮತ್ತು ನೀಡದ ಅಧಿಕಾರಿಗಳು ಶಾಲೆ ಪಕ್ಕದಲ್ಲಿಯೇ ಹೊಸದಾಗಿ ಕಸ ಎಸೆಯುವ ಗುಂಡಿ ನಿರ್ಮಿಸಿ ಅದಕ್ಕೆ ಪರದೆ ಅಳವಡಿಸಿದ್ದಾರೆ. ಅಲ್ಲಿ ನಿತ್ಯ ಮೀನು-ಮಾಂಸದ ಜೊತೆ ಹಸಿಕಸ-ಒಣಕಸದ ಮಿಶ್ರಣ ಬರುತ್ತಿದ್ದು, ಮಕ್ಕಳು ರೋಗ-ರುಜನೆಯ ಆತಂಕ ಎದುರಿಸುತ್ತಿದ್ದಾರೆ.

ADVERTISEMENT

ತ್ಯಾಜ್ಯದ ಗುಂಡಿ ಸುತ್ತ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಶಾಲೆಗೆ ಹೋಗಿ ಬರುವ ಮಕ್ಕಳನ್ನು ಗುರಿಯಾಗಿರಿಸಿಕೊಂಡು ನಾಯಿಗಳು ರಂಪಾಟ ನಡೆಸುತ್ತಿದೆ. ಇದರಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಜನ ಹೆದರುತ್ತಿದ್ದಾರೆ. ಮಕ್ಕಳ ಆರೋಗ್ಯ ಹಾಗೂ ಶೈಕ್ಷಣಿಕ ವಲಯಕ್ಕೆ ಆದ್ಯತೆಕೊಡಬೇಕಿದ್ದ ಗ್ರಾಮ ಪಂಚಾಯತ ಅಧಿಕಾರಿಯೇ ಇಲ್ಲಿ ಸಮಸ್ಯೆ ಮಾಡಿದ್ದರಿಂದ ಜನರ ಆಕ್ರೋಶವೂ ಹೆಚ್ಚಾಗಿದೆ. `ಇದು ಹಸಿ ಕಸ ಎಸೆಯುವ ಜಾಗವಲ್ಲ. ಒಣ ಕಸ ಮಾತ್ರ ಸಂಗ್ರಹಿಸಲಾಗುತ್ತದೆ’ ಎಂಬುದು ಗ್ರಾಮ ಪಂಚಾಯತ ಸದಸ್ಯ ದಾವೂದ ಹಾಗೂ ಸಯ್ಯದ್ ಅವರ ಮಾತು. `ಮೀನು ಹಾಗೂ ಮಾಂಸಗಳು ಒಣಕಸವೇ?’ ಎಂದು ಪ್ರಶ್ನಿಸಿದರೆ ಅವರಲ್ಲಿಯೂ ಉತ್ತರವಿಲ್ಲ.

`ಶಾಲೆ ಪಕ್ಕ ನಿರ್ಮಿಸಿದ ತ್ಯಾಜ್ಯದ ಗುಂಡಿಯನ್ನು ಕೂಡಲೇ ಸ್ಥಳಾಂತರಿಸಬೇಕು’ ಎಂದು ಜನಸಾಮಾನ್ಯರ ಸಮಾಜಕಲ್ಯಾಣ ಕೇಂದ್ರ ಆಗ್ರಹಿಸಿದೆ. ಈ ಬಗ್ಗೆ ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಪತ್ರ ಬರೆದಿದ್ದಾರೆ. `ಸಮಸ್ಯೆ ಬಗೆಹರಿಯದಿದ್ದರೆ ಹೋರಾಟ ನಿಶ್ಚಿತ’ ಎಂದು ಆ ಭಾಗದ ಶಂಕರ್ ಗೌಡ, ಸಂದೀಪ್ ಗೌಡ, ಅನಿತಾ, ಪಾರ್ವತಿ, ಹೇಮಾ ಗಣಪತಿ, ನಸರತ್ ಹಾಗೂ ಸಾಮಾಜಿಕ ಕಾರ್ಯಕರ್ತ ಸುಧಾಕರ್ ನಾಯ್ಕ ಎಚ್ಚರಿಸಿದ್ದಾರೆ.

ADVERTISEMENT

Discussion about this post

Previous Post

ವೈದ್ಯರ ವರ್ಗಾವಣೆ: ನೂರಾರು ಜೀವ ಉಳಿಸಿದ ದೇವರನ್ನು ಇಲ್ಲಿಯೇ ಉಳಿಸಿಕೊಳ್ಳಲಾಗಲಿಲ್ಲ!

Next Post

ಬೈಕಿನಿಂದ ಬಿದ್ದ ಯುವತಿ: ಆಸ್ಪತ್ರೆಗೆ ಬರುವಷ್ಟರಲ್ಲಿ ಕೊನೆಯುಸಿರು

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋