• Latest
ಪ್ರವಾಸಿ ಮಂದಿರದ ಬಳಿ ಮೋಜು-ಮಸ್ತಿ: ರೆಸಾರ್ಟ ಸಿಬ್ಬಂದಿ ಸೆರೆ!

ಪ್ರವಾಸಿ ಮಂದಿರದ ಬಳಿ ಮೋಜು-ಮಸ್ತಿ: ರೆಸಾರ್ಟ ಸಿಬ್ಬಂದಿ ಸೆರೆ!

4 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Monday, October 20, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಪ್ರವಾಸಿ ಮಂದಿರದ ಬಳಿ ಮೋಜು-ಮಸ್ತಿ: ರೆಸಾರ್ಟ ಸಿಬ್ಬಂದಿ ಸೆರೆ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
ADVERTISEMENT

ಗೋಕರ್ಣ ಪ್ರವಾಸಿ ಮಂದಿರದ ಬಳಿ ಮೋಜು-ಮಸ್ತಿಯಲ್ಲಿ ತೊಡಗಿದ್ದ ರೆಸಾರ್ಟ ಸಿಬ್ಬಂದಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಅವರೆಲ್ಲರೂ ಮಾದಕ ವ್ಯಸನ ಸೇವಿಸಿರುವುದು ದೃಢವಾಗಿದೆ. ಈ ಹಿನ್ನಲೆ ಐವರ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಸಾಣಿಕಟ್ಟಾದ ಆನಂದ ನಾಯ್ಕ ರೆಸಾರ್ಟವೊಂದರ ಉದ್ಯೋಗಿ. ಅದೇ ರೆಸಾರ್ಟಿನಲ್ಲಿ ಗದಗದ ಪವನಕುಮಾರ ರಾಮಣ್ಣನವರ್ ಸಹ ಮ್ಯಾನೇಜರ್ ಆಗಿದ್ದಾರೆ. ಈ ಇಬ್ಬರು ಸೇರಿ ರೆಸಾರ್ಟಿಗೆ ಆಗಮಿಸುವವರಿಗೆ ಮಾದಕ ವ್ಯಸನ ನೀಡುತ್ತಿದ್ದು, ತಾವು ಅದನ್ನು ಸೇವಿಸುತ್ತಿದ್ದರು.

ADVERTISEMENT

ಅದರಂತೆ ಜೂನ್ 29ರಂದು ಗೋಕರ್ಣ ಬಳಿಯ ಅಜ್ಜಿ ಹಕ್ಕಲಿನಲ್ಲಿ ವಾಸವಾಗಿರುವ ಉತ್ತರಖಂಡದ ಅಮೇಶ ತಾಪಿ, ಸುರಬ್ ಠಾಕೂರ್ ಹಾಗೂ ದೇವ್ ಯಾದವ್ ಅವರ ಜೊತೆಗೂಡಿ ಆನಂದ ನಾಯ್ಕ ಹಾಗೂ ಪವನಕುಮಾರ ರಾಮಣ್ಣನವರ್ ಮಾದಕ ವ್ಯಸನದ ಪಾರ್ಟಿ ಮಾಡಿದ್ದರು.

ನಶೆಯಲ್ಲಿ ತೂರಾಡುತ್ತಿದ್ದ ಆ ಐವರನ್ನು ಗೋಕರ್ಣ ಪಿಎಸ್‌ಐ ಖಾದರ್ ಭಾಷಾ ವಿಚಾರಣೆಗೆ ಒಳಪಡಿಸಿದರು. ಅನುಮಾನದ ಹಿನ್ನಲೆ ಅವರೆಲ್ಲರನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ಕರೆತಂದರು. ಅಲ್ಲಿ ತಪಾಸಣೆ ನಡೆಸಿದಾಗ ಎಲ್ಲರೂ ಗಾಂಜಾ ನಶೆಯಲ್ಲಿರುವುದು ಗೊತ್ತಾಯಿತು. ಹೀಗಾಗಿ ಪ್ರಕರಣ ದಾಖಲಿಸಿಕೊಂಡಿದ್ದು, ಪಿಎಸ್‌ಐ ಶಶಿಧರ ಕೆ ಎಚ್ ತನಿಖೆ ನಡೆಸುತ್ತಿದ್ದಾರೆ.

ಮದ್ಯ ಮಾರಾಟಗಾರನ ಸೆರೆ
ದಾವಣಗೆರೆಯಿಂದ ಬಂದು ಗೋಕರ್ಣ ಬಳಿಯ ಹನೇಹಳ್ಳಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದವನ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಕೂಲಿ ಕೆಲಸ ಮಾಡಿಕೊಂಡಿದ್ದ ಗಣೇಶ ರೇವಣ್ಕರ್ ಶ್ರೀಮಂತರಾಗಿರುವ ಬಗ್ಗೆ ಅನೇಕರು ಅಚ್ಚರಿವ್ಯಕ್ತಪಡಿಸಿದ್ದರು.

ಹನೆಹಳ್ಳಿ ಗ್ರಾಮದ ಮುರ್ಕಂಡಿ ದೇವಸ್ಥಾನದ ಹತ್ತಿರ ಬಂಕಿಕೊಡ್ಲ ಹನೆಹಳ್ಳಿ ರಸ್ತೆ ಪಕ್ಕ ಗಣೇಶ ರೇವಣ್ಕರ್ ಶೆಡ್ ನಿರ್ಮಿಸಿದ್ದರು. ಅಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಸಿದ್ದರು. ಬಂದವರಿಗೆಲ್ಲ ಅಲ್ಲಿ ಮದ್ಯ ಸರಬರಾಜು ಮಾಡುವುದರ ಜೊತೆ ಅವರ ಜೊತೆ ಗಣೇಶ ರೇವಣ್ಕರ್ ಸಹ ಮದ್ಯ ಸೇವಿಸಿ ಮೋಜು-ಮಸ್ತಿಯಲ್ಲಿರುತ್ತಿದ್ದರು.

ಗಣೇಶ ರೇವಣಕರ್ ಅವರ ಆದಾಯದ ಮೂಲ ಹುಡುಕಿದ ಪೊಲೀಸರಿಗೆ ಮದ್ಯ ಮಾರಾಟದ ವಿಷಯ ತಿಳಿಯಿತು. ಜೂನ್ 29ರಂದು ಶೆಡ್ ಮೇಲೆ ದಾಳಿ ನಡೆಸಿದ ಪೊಲೀಸರು ಅಲ್ಲಿದ್ದ ಅಕ್ರಮ ಸರಾಯಿಯನ್ನು ವಶಕ್ಕೆಪಡೆದರು. ಗೋಕರ್ಣ ಪಿಎಸ್‌ಐ ಶಶಿಧರ್ ಎಚ್ ಕೆ ಪ್ರಕರಣ ದಾಖಲಿಸಿಕೊಂಡರು.

ADVERTISEMENT

Discussion about this post

Previous Post

ಅವ್ಯವಸ್ಥೆಯ ಆಗರವಾದ ಮುಂಡಗೋಡು: ಪ್ರತಿಭಟನೆ

Next Post

ಅಪ್ಪ-ಮಕ್ಕಳ ನಡುವೆ ಹೊಡೆದಾಟಕ್ಕೆ ಹೊಟೇಲು ವ್ಯವಹಾರ ಕಾರಣ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋