• Latest
That resort is his grandfather's property.. Even the police are not allowed here!

ಆ ರೆಸಾರ್ಟ ಅವನ ಅಜ್ಜನ ಆಸ್ತಿ.. ಇಲ್ಲಿ ಪೊಲೀಸರಿಗೂ ಪ್ರವೇಶವಿಲ್ಲ!

4 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Thursday, October 23, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಆ ರೆಸಾರ್ಟ ಅವನ ಅಜ್ಜನ ಆಸ್ತಿ.. ಇಲ್ಲಿ ಪೊಲೀಸರಿಗೂ ಪ್ರವೇಶವಿಲ್ಲ!

ಸಾರ್ವಜನಿಕ ಸಮಸ್ಯೆ ಆಲಿಸಲು ಹೋಗಿದ್ದ 112 ವಾಹನದ ಪೊಲೀಸ್ ಸಿಬ್ಬಂದಿ ಮೇಲೆ ದುಷ್ಕರ್ಮಿಯೊಬ್ಬರು ದಾಳಿ ನಡೆಸಿದ್ದಾರೆ. ಕತ್ತಿಯ ಏಟಿನಿಂದ ತಪ್ಪಿಸಿಕೊಂಡ ಪೊಲೀಸ್ ಸಿಬ್ಬಂದಿ ರಕ್ಷಣೆಗಾಗಿ ಹಿರಿಯ ಅಧಿಕಾರಿಗಳ ಮೊರೆ ಹೋಗಿದ್ದಾರೆ.

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
That resort is his grandfather's property.. Even the police are not allowed here!
ADVERTISEMENT

ಕುಮಟಾ ದುಬ್ಬಿನಸಸಿ ಗ್ರಾಮದಲ್ಲಿನ ಗಲಾಟೆ ಬಿಡಿಸಲು ಹೋಗಿದ್ದ ಪೊಲೀಸರ ಮೇಲೆ ದುಷ್ಕರ್ಮಿಯೊಬ್ಬ ಕತ್ತಿ ಬೀಸಿದ್ದು, ಈ ಹೊಡೆದಾಟದಲ್ಲಿ ಪೊಲೀಸ್ ಸಿಬ್ಬಂದಿಯ ಸಮವಸ್ತ್ರ ಹರಿದಿದೆ. ಗಾಯಗೊಂಡ ಪೊಲೀಸ್ ಸಿಬ್ಬಂದಿ ರಕ್ಷಣೆ ಕೋರಿ ಪೊಲೀಸ್ ಅಧಿಕಾರಿಗಳ ಮೊರೆ ಹೋಗಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಕುಮಟಾ ದುಬ್ಬಿನಸಸಿಯ ಶಶಿಹಿತ್ಲಲ್ ಬಳಿ ಪ್ರತೀಕ ನಾಯಕ ಎಂಬಾತರು ರೆಸಾರ್ಟ ನಡೆಸುತ್ತಾರೆ. ಅವರ ಆತಿಥ್ಯ ಬೀಚ್ ಪ್ರಂಟ್ ರೆಸಾರ್ಟಗೆ ನಿತ್ಯ ಮಹಾಬಲೇಶ್ವರ ಗೌಡ ಎಂಬಾತರು ಆಗಮಿಸುತ್ತಾರೆ. `ಇದು ನನ್ನ ಅಜ್ಜನ ಜಾಗ. ನೀವು ಖಾಲಿ ಮಾಡಿ’ ಎಂದು ಗಲಾಟೆ ಮಾಡುತ್ತಾರೆ. ರೆಸಾರ್ಟಿನ ಬಾಗಿಲು ಬಡಿಯವುದು, ಅಲ್ಲಿರುವ ಅತಿಥಿಗಳಿಗೆ ತೊಂದರೆ ನೀಡುವುದು ಮಹಾಬಲೇಶ್ವರ ಗೌಡ ಅವರ ನಿತ್ಯದ ಕೆಲಸ. ರೆಸಾರ್ಟಿನ ಒಳಗಿನ ಗಾಜುಗಳನ್ನು ಒಡೆಯುವುದು ಸಹ ಅವರಿಗೆ ಹೊಸದಲ್ಲ.

ADVERTISEMENT

ಈ ಎಲ್ಲಾ ಕೃತ್ಯದಿಂದ ಬೇಸತ್ತ ಪ್ರತೀಕ ನಾಯಕ ಅವರು ಜುಲೈ 2ರ ಸಂಜೆ ಪೊಲೀಸರಿಗೆ ಫೋನ್ ಮಾಡಿದ್ದರು. ಪೊಲೀಸರು ಪ್ರತೀಕ ನಾಯಕ ಅವರ ಅಳಲು ಆಲಿಸಿ ವಿಚಾರಣೆ ನಡೆಸಿದ್ದರು. ಅದಾದ ನಂತರ 112 ಪೊಲೀಸ್ ವಾಹನ ಸಿಬ್ಬಂದಿ ನಾರಾಯಣ ಗೌಡ ಅವರು ಮಹಾಬಲೇಶ್ವರ ಗೌಡರನ್ನು ವಿಚಾರಿಸಲು ಅವರ ಮನೆ ಬಳಿ ತೆರಳಿದ್ದರು. ಇದರಿಂದ ಸಿಟ್ಟಾದ ಮಹಾಬಲೇಶ್ವರ ಗೌಡ ಪೊಲೀಸ್ ಸಿಬ್ಬಂದಿ ನಾರಾಯಣ ಗೌಡ ವಿರುದ್ಧ ಕೂಗಾಡಿದರು.

ಮನೆ ಜಗುಲಿ ಮೇಲಿದ್ದ ಕತ್ತಿ ತೆಗೆದು ನಾರಾಯಣ ಗೌಡರ ಕುತ್ತಿಗೆ ಕಡೆ ಬೀಸಿದರು. ಕ್ಷಣಮಾತ್ರದಲ್ಲಿ ತಪ್ಪಿಸಿಕೊಂಡ ಪರಿಣಾಮ ನಾರಾಯಣ ಗೌಡ ಅವರು ಪ್ರಾಣ ಉಳಿಸಿಕೊಂಡರು. ಅದಾಗಿಯೂ ಬಿಡದ ಮಹಾಬಲೇಶ್ವರ ಗೌಡರು ನಾರಾಯಣ ಗೌಡರನ್ನು ನೆಲಕ್ಕೆ ಬೀಳಿಸಿ ಕಾಲಿನಿಂದ ತುಳಿದರು. ಅವರು ಧರಿಸಿದ್ದ ಪೊಲೀಸ್ ಯುನಿಪಾರಂ’ನ್ನು ಹರಿದರು.

`ಅದು ನನ್ನ ಅಜ್ಜನ ಆಸ್ತಿ. ಅಲ್ಲಿ ಪೊಲೀಸರಿಗೂ ಪ್ರವೇಶವಿಲ್ಲ’ ಎಂದು ಮಹಾಬಲೇಶ್ವರ ಗೌಡ ದೊಡ್ಡದಾಗಿ ಕೂಗಾಡದರು. `ಆ ಆಸ್ತಿ ಬಿಟ್ಟು ಹೋಗಿ’ ಎಂದು ಬೊಬ್ಬೆ ಹೊಡೆದರು. `ನೀವು ಪೊಲೀಸರಾದರೇನು? ನನಗೆ ಸಂಬoಧವಿಲ್ಲ’ ಎನ್ನುತ್ತ ಇನ್ನಷ್ಟು ನಾರಾಯಣ ಗೌಡರ ಮೇಲೆ ಇನ್ನಷ್ಟು ದಾಳಿ ಮಾಡಿದರು. ಕಾಲಿನಿಂದ ಒದ್ದು ನೋವುಂಟು ಮಾಡಿದರು.

ಈ ಎಲ್ಲಾ ವಿದ್ಯಮಾನದ ಬಗ್ಗೆ ಪೊಲೀಸ್ ಸಿಬ್ಬಂದಿ ನಾರಾಯಣ ಗೌಡ ಅವರು ಗೋಕರ್ಣ ಠಾಣೆಗೆ ಬಂದು ವರದಿ ಒಪ್ಪಿಸಿದರು. ಪಿಎಸ್‌ಐ ಖಾದರ್ ಭಾಷಾ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ADVERTISEMENT

Discussion about this post

Previous Post

ಬಾಲಕಿ ಅಪಹರಣ ಪ್ರಕರಣ: ಮುಂಬೈಯಲ್ಲಿ ಸಿಕ್ಕಿಬಿದ್ದ ಕಳ್ಳ ಖಾನ್!

Next Post

ಜುಲೈ 4: ನಾಲ್ಕು ತಾಲೂಕಿನ ಶಾಲೆಗಳಿಗೆ ಮಳೆ ರಜೆ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋