• Latest
Gram Panchayat Politics: Gajanana's obstacle to Ganapati's work!

ಗ್ರಾ ಪಂ ರಾಜಕೀಯ: ಗಣಪತಿಯ ಕಾರ್ಯಕ್ಕೆ ಗಜಾನನನ ವಿಘ್ನ!

3 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Wednesday, October 22, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಗ್ರಾ ಪಂ ರಾಜಕೀಯ: ಗಣಪತಿಯ ಕಾರ್ಯಕ್ಕೆ ಗಜಾನನನ ವಿಘ್ನ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
Gram Panchayat Politics: Gajanana's obstacle to Ganapati's work!
ADVERTISEMENT

ಯಲ್ಲಾಪುರ ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯತದಲ್ಲಿ ಹಗ್ಗ ಜಗ್ಗಾಟ ಮುಂದುವರೆದಿದ್ದು, ಅದರ ಮುಂದುವರೆದ ಭಾಗವಾಗಿ ಗ್ರಾ ಪಂ ಸದಸ್ಯ ಗಣಪತಿ ಭಾಗ್ವತ ಅವರ ಸದಸ್ಯತ್ವ ರದ್ದಾಗಿದೆ. ಈ ಸದಸ್ಯತ್ವ ರದ್ಧತಿ ಬಗ್ಗೆ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿರುವುದಾಗಿ ಗಣಪತಿ ಭಾಗ್ವತ ಅವರು ಹೇಳಿದ್ದಾರೆ. ಜೊತೆಗೆ  ಗ್ರಾ ಪಂ ಮಾಜಿ ಅಧ್ಯಕ್ಷ ಗಜಾನನ ಭಟ್ಟ ಅವರು ದ್ವೇಷ ರಾಜಕಾರಣ ಮಾಡುತ್ತಿರುವುದಾಗಿಯೂ ಆರೋಪಿಸಿದ್ದು, ಅನೇಕ ಭ್ರಷ್ಟಾಚಾರಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ, ಅದಕ್ಕೆ ಸಂಬoಧಿಸಿದ ದಾಖಲಾತಿಗಳನ್ನು ಒದಗಿಸಿಲ್ಲ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಯಲ್ಲಾಪುರದ ರಾಜಕೀಯ ವಿದ್ಯಮಾನಗಳ ಕೇಂದ್ರ ಸ್ಥಾನದಲ್ಲಿ ವಜ್ರಳ್ಳಿ ಭಾಗವೂ ಒಂದು. ಸಣ್ಣಪುಟ್ಟ ವಾಗ್ವಾದ, ರಾಜಕೀಯ ಕಚ್ಚಾಟ, ಹೋರಾಟ ಹಾಗೂ ಹೊಡೆದಾಟ ಇಲ್ಲಿ ಸಾಮಾನ್ಯ. ಅನೇಕ ಬಾರಿ ಅವೆಲ್ಲವೂ ಅಲ್ಲಿಯೇ ರಾಜಿ-ಪಂಚಾಯತಿಯಲ್ಲಿ ಮುಗಿದ ಉದಾಹರಣೆಗಳಿವೆ. ಆದರೆ, ಈಚೆಗೆ ಸಣ್ಣಪುಟ್ಟ ವಿಷಯಗಳು ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಅವು ಕಾನೂನು ಹೋರಾಟಕ್ಕೆ ತಿರುಗಿವೆ. ಅದರ ಪರಿಣಾಮವಾಗಿ ಗ್ರಾ ಪಂ ಸದಸ್ಯ ಗಣಪತಿ ಭಾಗ್ವತ ಅವರ ಸದಸ್ಯತ್ವ ರದ್ಧಾಗಿದೆ.

ADVERTISEMENT

ಗ್ರಾಮ ಪಂಚಾಯತ ಸದಸ್ಯರಾಗಿ ಗಣಪತಿ ಭಾಗ್ವತ ಅವರು ತಮ್ಮ ಮಗನ ಮೂಲಕ ಗುತ್ತಿಗೆ ಕೆಲಸ ಮಾಡಿಸಿದ್ದಾರೆ ಎಂಬುದು ಆರೋಪ. ಈ ಆರೋಪದ ಬಗ್ಗೆ ತನಿಖೆ ನಡೆಸಿದ ರಾಜ್ಯ ಪಂಚಾಯತರಾಜ್ ಇಲಾಖೆ ಅವರ ಸದಸ್ಯತ್ವ ರದ್ದು ಮಾಡಿದ್ದು, ಮುಂದಿನ 6 ವರ್ಷಗಳ ಕಾಲ ಚುನಾವಣೆಗೆ ನಿಲ್ಲದಂತೆ ಸೂಚಿಸಿದೆ. ಆದರೆ, `ತನಿಖೆಯ ವೇಳೆ ಎಲ್ಲಿಯೂ ತಮ್ಮ ಹೇಳಿಕೆಪಡೆದಿಲ್ಲ. ನಿಯಮಬಾಹಿರವಾಗಿ ಈ ಆದೇಶ ಮಾಡಲಾಗಿದ್ದು, ಅದರ ವಿರುದ್ಧ ತಡೆಯಾಜ್ಞೆ ಸಿಕ್ಕಿದೆ’ ಎಂದು ಗಣಪತಿ ಭಾಗ್ವತ ಅವರು ಹೇಳಿದ್ದಾರೆ.

`2010ರಿಂದ 2019ರ ಅವಧಿಯಲ್ಲಿ ಅವರ ಗಣಪತಿ ಭಾಗ್ವತ ಅವರ ಮಗ ಶ್ರೀರಾಮ ಭಾಗ್ವತ ಗುತ್ತಿಗೆದಾರರಾಗಿ ಅದೇ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ 8.21 ಲಕ್ಷ ರೂ ಮೊತ್ತದ ಕಾಮಗಾರಿ ನಡೆಸಿದ್ದಾರೆ. ಇದು ನಿಯಮ ಬಾಹಿರ’ ಎಂಬುದು ದೂರು. `ಗ್ರಾ ಪಂ ವ್ಯಾಪ್ತಿಯಲ್ಲಿ ಅಗತ್ಯ ಕೆಲಸಗಳು ಸಮರ್ಪಕವಾಗಿ ನಡೆಯಲೆಂದು ಆ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಗಜಾನನ ಭಟ್ಟರು ಪ್ರೋತ್ಸಾಹಿಸಿಯೇ ಶ್ರೀರಾಮ ಭಾಗ್ವತ ಅವರ ಬಳಿ ಗುತ್ತಿಗೆ ಕೆಲಸ ನಿರ್ವಹಿಸಿದ್ದಾರೆ. ಇದೀಗ ಅವರು ಅನಗತ್ಯ ಆರೋಪ ಮಾಡಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ’ ಎಂಬುದು ಗಣಪತಿ ಭಾಗ್ವತ ಅವರ ಅಳಲು.

`ಗ್ರಾಮದ ಅಭಿವೃದ್ಧಿಗೆ ನಮ್ಮನ್ನು ಬಳಸಿಕೊಂಡು ಇದೀಗ ಅದರ ದುರುಪಯೋಗ ನಡೆದಿದೆ. ಗ್ರಾಮ ಪಂಚಾಯತದಲ್ಲಿ ಸಾಕಷ್ಟು ಅಕ್ರಮ ಅವ್ಯವಹಾರ ನಡೆದಿದ್ದು, ಆ ಬಗ್ಗೆ ದಾಖಲೆ ಸಂಗ್ರಹಿಸಲಾಗಿದೆ. ಕೈ ಬಿಟ್ಟ ಆಸ್ತಿ ಸೇರ್ಪಡೆ, ನರೆಗಾ ಸೇರಿ ಅನೇಕ ಕಡೆ ಭ್ರಷ್ಟಾಚಾರ ನಡೆದಿದೆ. ಆ ಬಗ್ಗೆ ವಿವಿಧ ಕಡೆ ದೂರು ನೀಡಲಾಗುತ್ತದೆ’ ಎಂದು ಗಣಪತಿ ಭಾಗ್ವತ್ ಅವರು ಎಚ್ಚರಿಸಿದರು. `ತಾನೂ ಏನು ತಪ್ಪು ಮಾಡಿಲ್ಲ’ ಎಂದು ಸಮರ್ಥಿಸಿಕೊಂಡರು.

ADVERTISEMENT

Discussion about this post

Previous Post

2025 ಜುಲೈ 25ರ ದಿನ ಭವಿಷ್ಯ

Next Post

ಚಾಪೆ-ದಿಂಬಿನ ಜೊತೆ ಪ್ರತಿಭಟನೆಗೆ ಬಂದ ಸ್ವಾಮೀಜಿ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋