• Latest
May the remover of obstacles be blessed!

ವಿಘ್ನ ನಿವಾರಕನಿಗೆ ಹರಕೆಯೇ ಬಾರ!

3 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Tuesday, October 21, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ವಿಘ್ನ ನಿವಾರಕನಿಗೆ ಹರಕೆಯೇ ಬಾರ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
May the remover of obstacles be blessed!
ADVERTISEMENT

ಮದುವೆ ಆಗದವರು.. ಮಾತು ಸರಿಯಾಗಿ ಬಾರದವರು ಸೇರಿ ಅನೇಕರು ಗೋಕರ್ಣದ ಗಣಪತಿಗೆ ಕೊಟ್ಟೆ ಕಡುಬಿನ ಹರಕೆ ಹೋರುತ್ತಾರೆ. ಕೊಟ್ಟೆ ಕಡಬಿನ ಕಣಜ ಜೊತೆ ಸಕ್ಕರೆ ಕಣಜ, ಮೋದಕ ಕಣಜದ ಹರಕೆಯನ್ನು ಹೋರುತ್ತಾರೆ. ಆದರೆ, ಈ ಹರಕೆಯೇ ಇದೀಗ ಗಣಪನ ವಿಗ್ರಹಕ್ಕೆ ವಿಘ್ನವಾಗುವ ಲಕ್ಷಣಗಳಿವೆ!

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಪ್ರಪಂಚದಲ್ಲಿಯೇ ಎಲ್ಲಿಯೂ ಇಲ್ಲದ ಅಪರೂಪದ ಗಣಪನ ವಿಗ್ರಹ ಗೋಕರ್ಣದಲ್ಲಿದೆ. ಆ ದೇವರಿಂದಲೇ ಸ್ಥಾಪಿತವಾದ ಗಣಪ ಎಂಬ ಪ್ರತೀಥಿ ಈ ದೇವರದ್ದಾಗಿದೆ. ಆದರೆ, ಹರಕೆಯ ಬಾರಕ್ಕೆ ಗಣಪನ ವಿಗ್ರಹ ನಲುಗಿದ್ದು, ಮುಂದಿನ ತಲೆಮಾರಿಗೂ ಐತಿಹಾಸಿಕ ಗಣಪನನ್ನು ಉಳಿಸಿಕೊಳ್ಳುವ ಅನಿವಾರ್ಯ ಸೃಷ್ಠಿಯಾಗಿದೆ.

ADVERTISEMENT

ಮಾರುಕಟ್ಟೆಯಲ್ಲಿ ಸಿಗುವ ಕೃತಕ ತುಪ್ಪ-ಜೇನುತುಪ್ಪವನ್ನು ಗಣಪನಿಗೆ ಅರ್ಪಿಸಲಾಗುತ್ತದೆ. ಅದರಿಂದಲೂ ಗಣಪನ ವಿಗ್ರಹಕ್ಕೆ ಧಕ್ಕೆ ಆಗುವ ಸಾಧ್ಯತೆಗಳಿವೆ. ವರ್ಷದಿಂದ ವರ್ಷಕ್ಕೆ ಗೋಕರ್ಣ ಗಣಪನ ವಿಗ್ರಹದ ಸವಕಳಿ ಹೆಚ್ಚಾಗಿದ್ದು, ಎಂಟು ವರ್ಷದ ಹಿಂದೆಯೇ ಧಾರ್ಮಿಕ ದತ್ತಿ ಇಲಾಖೆ ಗಣಪನ ಸ್ಪರ್ಶ ನಿಷೇಧಿಸಿತ್ತು. ಆದರೆ, ಈ ನಿಯಮ ಕಟ್ಟುನಿಟ್ಟಾಗಿ ಪಾಲನೆ ಆಗಿರಲಿಲ್ಲ.

ಸದ್ಯ ಗಣಪನಿಗೆ ಗಣಜ ಹರಕೆ ಹೋರುವವವರ ಸಂಖ್ಯೆ ಹೆಚ್ಚಾಗುತ್ತಿದೆ. ಬಿಸಿ ಬಿಸಿ ಕಡುಬು ಹಾಗೂ ಎಣ್ಣೆಯಲ್ಲಿ ಕರಿದ ಪದಾರ್ಥಗಳು ಮೃದು ಕಲ್ಲಿನ ಗಣಪನನ್ನು ಸುತ್ತುವರೆಯುವುದರಿಂದ ಆ ವಿಗ್ರಹ ಇನ್ನಷ್ಟು ಸವಕಳಿ ಅನುಭವಿಸುವ ಬಗ್ಗೆ ಪುರಾತತ್ವ ತಜ್ಞರು ಆತಂಕವ್ಯಕ್ತಪಡಿಸಿದ್ದಾರೆ.

ಗಣಪತಿಗೆ ಹರಕೆ ಹೊತ್ತುಕೊಂಡವರು ಹರಕೆ ರೂಪವಾಗಿ ಬಿಸಿಬಿಸಿಯಾದ ಕೊಟ್ಟೆ ಕಡಬನ್ನ ಗಣಪತಿಯ ಸುತ್ತಲು ಇಡುತ್ತಾರೆ. ಈ ಹೆಚ್ಚಿನ ಉಷ್ಣಾಂಶದ ಕಡಬು ಗಣಪತಿಯ ಈ ಪುರಾತನ ಶಿಲಾ ವಿಗ್ರಹಕ್ಕೆ ಮಾರಕವಾಗಬಲ್ಲದು ಎಂಬುದು ತಜ್ಞರ ಅಭಿಮತ.

`ದೇವರಿಂದಲೇ ಸ್ಥಾಪಿತವಾಗಿದೆಯೆಂದು ನಂಬಲಾದ ಅತ್ಯಂತ ಅಪರೂಪದ ಏಕೈಕ ಈ ಗಣಪತಿಯ ಮೂರ್ತಿಯನ್ನು ರಕ್ಷಿಸುವ, ಉಳಿಸುವ, ಮುಂದಿನ ಪೀಳಿಗೆಗೆ ಕಾದಿಡುವ ದೃಷ್ಟಿಯಿಂದ ಕೆಲ ಬದಲಾವಣೆ ಅಗತ್ಯ. ಈ ಕೊಟ್ಟೆ ಕಡುಬಿನ ಸೇವೆಯನ್ನು ದೇವರ ಎದುರಿಗೆ ಇಟ್ಟು ಗಣಪತಿಗೆ ನೈವೇದ್ಯ ಮಾಡುವ ವಿಚಾರವೂ ಪೂರಕ ಬೆಳವಣಿಗೆ. ಅನ್ಯಥಾ ಭಾವನೆಗೆ ಅವಕಾಶ ನೀಡದೇ, ಮಹಾಗಣಪತಿಯ ಮೂರ್ತಿಯ ರಕ್ಷಣೆಯ ದೃಷ್ಟಿಯಿಂದ ತುರ್ತಾಗಿ ಈ ಬಗ್ಗೆ ಯೋಚಿಸಬೇಕು’ ಎಂಬುದು ಆಯುರ್ವೇದ ವೈದ್ಯ ಡಾ ರವಿಕಿರಣ ಪಟವರ್ಧನ ಅವರ ಅಭಿಮತ.

ADVERTISEMENT

Discussion about this post

Previous Post

ದಾಂಡೇಲಿ: ಡೆಂಟಲ್ ಡಾಕ್ಟರ್ ಅಸಿಸ್ಟೆಂಟ್’ಗೆ ಧರ್ಮದೇಟು!

Next Post

2025 ಅಗಸ್ಟ್ 1ರ ದಿನ ಭವಿಷ್ಯ

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋